ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಥ ವ್ಯವಸ್ಥೆಯ ಬಜೆಟ್ ಅಲ್ಲ ರಾಜಕೀಯ ವ್ಯವಸ್ಥೆಯ ಬಜೆಟ್

|
Google Oneindia Kannada News

ಮೈಸೂರು, ಜುಲೈ 6: ಸಮಿಶ್ರ ಸರ್ಕಾರದಲ್ಲಿ ಬಹಳ ಸದ್ದು ಮಾಡಿದ್ದ ಸಿಎಂ ಕುಮಾರಸ್ವಾಮಿಯವರು ಮಂಡಿಸಿದ ಈ ಬಜೆಟ್ "ಅರ್ಥ ವ್ಯವಸ್ಥೆಯ ಬಜೆಟ್ ಅಲ್ಲ ರಾಜಕೀಯ ವ್ಯವಸ್ಥೆಯ ಬಜೆಟ್" ಎಂದು ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್ ಎ ರಾಮದಾಸ್ ಟೀಕಿಸಿದ್ದಾರೆ .

ಈ ಬಜೆಟ್ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಮಾರಕವಾದ ಬಜೆಟ್. ಪ್ರಗತಿದಾಯಕವಲ್ಲದ ಅರ್ಥ ಹೀನ, ಸಾಲದ ಬಜೆಟ್. ರೈತರ ನಿರೀಕ್ಷೆ ಹುಸಿಯಾಗಿದ್ದು ಪೂರ್ಣ ಸಾಲ ಮನ್ನಾ ಆಗಿರುವುದಿಲ್ಲ. 34,000 ಕೋಟಿ ರೂಪಾಯಿ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡಿದ್ದರು, ಈ ಹಣದ ಸಂಗ್ರಹ ಯಾವ ಮೂಲದಿಂದ ಬರುತ್ತದೆ ಎಂದು ಹೇಳಲಾಗಿಲ್ಲ ಎಂದು ರಾಮದಾಸ್ ಹೇಳಿದ್ದಾರೆ.

ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ

ಹಿಂದಿನ ಸಿದ್ದರಾಮಯ್ಯನವರ ಬಜೆಟಿಗಿಂತ 9,000 ಕೋಟಿ ಹೆಚ್ಚಿನ ಬಜೆಟ್ ಎಂದು ತೋರಿಸಲಾಗಿದ್ದು, 8,500 ಕೋಟಿ ಅಧಿಕ ಸಾಲವನ್ನು ತೋರಿಸಲಾಗಿದೆ. ಆಯ್ದ 45 ಯೋಜನೆಗಳಿಗೆ 3,278 ಕೋಟಿ ರೂಪಾಯಿ ಮೀಸಲಿಟ್ಟಿರುವುದು ಬಿಟ್ಟರೆ ಹೊಸತೇನು ಇರುವುದಿಲ್ಲ.

Kumaraswamy budget is not a economic system but budget it is political system budget, SA Ramdas

ಕೇಂದ್ರ ಸರ್ಕಾರ ಸಂಧ್ಯಾ ಸುರಕ್ಷಾ ಪೆನ್ಸನ್ ಯೋಜನೆಗೆ 600 ರಿಂದ 1000 ರೂಪಾಯಿ ಹೆಚ್ಚಿಸಲಾಗಿದೆ. ಇದನ್ನು ಕರ್ನಾಟಕ ತನ್ನ ಪಾಲನ್ನು ತೆಗೆದಿಟ್ಟಿರುವುದು ಸಾಧನೆ ಎಂದು ತೋರಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಶಾಲೆಗಳನ್ನು ಮುಚ್ಚುವುದಿಲ್ಲವೆಂದು ಘೋಷಿಸಿತ್ತು.

ಕುಮಾರಸ್ವಾಮಿ ಬಜೆಟ್ಟಿನಲ್ಲಿ ಪರಿಶಿಷ್ಟರಿಗೆ ಸಿಕ್ಕ ಪಾಲು ಏನು? ಕುಮಾರಸ್ವಾಮಿ ಬಜೆಟ್ಟಿನಲ್ಲಿ ಪರಿಶಿಷ್ಟರಿಗೆ ಸಿಕ್ಕ ಪಾಲು ಏನು?

ಆದರೆ ಈ ಬಜೆಟ್ ನಲ್ಲಿ 28,847 ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಹತ್ತಿರದ 10,830 ಶಾಲೆಗಳ ಜೊತೆ ವಿಲೀನಗೊಳಿಸಿ 20,317 ಶಾಲೆಗಳನ್ನು ಮುಚ್ಚುತ್ತಿರುವುದು ಒಂದು ಸಾಧನೆ. ಆರ್ಥಿಕ ಶಿಸ್ತಲ್ಲದ ಪ್ರಗತಿಪರವಲ್ಲದ ಈ ಬಜೆಟ್ ನಲ್ಲಿ 40,753 ಕೋಟಿ ವಿತ್ತೀಯ ಕೊರತೆ ನೀಗಿಸಲು ಯಾವ ಪ್ರಯತ್ನವೆಂದು ತಿಳಿಸಲಾಗಿಲ್ಲ.

ಚಿತ್ರಗಳಲ್ಲಿ ನೋಡಿ: ಯಾವುದು ಏರಿಕೆ? ಯಾವುದು ಇಳಿಕೆ? ಚಿತ್ರಗಳಲ್ಲಿ ನೋಡಿ: ಯಾವುದು ಏರಿಕೆ? ಯಾವುದು ಇಳಿಕೆ?

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಅನ್ನು ದೇಶದ ಎಲ್ಲ ರಾಜ್ಯಗಳು ಕಡಿಮೆ ಮಾಡುತಿದ್ದರೆ ಕರ್ನಾಟಕದಲ್ಲಿ ಈ ಬಜೆಟ್ ನಲ್ಲಿ ಹೆಚ್ಚು ಮಾಡಿರುವುದು ರೈತನಿಗೆ ಕೊಟ್ಟ ಹಣವನ್ನು ರೈತನಿಂದಲೇ ಹಿಂದಕ್ಕೆ ಪಡೆಯುವ ತಂತ್ರವಾಗಿದೆ ಹಾಗೂ ಜನಸಾಮಾನ್ಯರ ಮೇಲೆ ಹೊರೆ ಇದರಿಂದ ದಿನನಿತ್ಯದ ಪದಾರ್ಥದ ಬೆಲೆ ಏರಿಕೆಗೆ ಕಾರಣವಾಗುತ್ತದೆ ಎಂದು ರಾಮದಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಹುಲ್‌ ಸವಾಲಿಗೆ ಅವರ ಸರ್ಕಾರದಲ್ಲೇ ಕಿಮ್ಮತ್ತಿಲ್ಲ!: ಬಿಜೆಪಿ ಲೇವಡಿ ರಾಹುಲ್‌ ಸವಾಲಿಗೆ ಅವರ ಸರ್ಕಾರದಲ್ಲೇ ಕಿಮ್ಮತ್ತಿಲ್ಲ!: ಬಿಜೆಪಿ ಲೇವಡಿ

ವಿದ್ಯುತ್ ದರದ ಮೇಲೆ ಶೇಕಡಾ 30ರಷ್ಟು ಕರ ಹಾಕಿರುವುದು ಪ್ರತಿಯೊಬ್ಬನ ಮೇಲೆ ಹಾಕಿದ ಹೊರೆ. ಮೈಸೂರು ಜಿಲ್ಲೆಗೆ ಯಾವುದೇ ಕೊಡುಗೆಯಾಗಲಿ ಪ್ರವಾಸೋದ್ಯಮ ಮತ್ತು ಶಿಕ್ಷಣ ಅಭಿವೃದ್ಧಿಗೆ ಕೊಡುಗೆಯಾಗಲಿ ದೊರಕಿಲ್ಲದಿರುವುದು ಶೋಚನೀಯ. ಒಟ್ಟಾರೆ ಶಿರಸಾಸನ ಸರ್ಕಾರದ ಈ ಚೊಚ್ಚಲ ಬಜೆಟ್ ಅಭಿವೃದ್ಧಿ ಮಾರಕ ಎಂದು ಶಾಸಕ ರಾಮದಾಸ್, ಬಜೆಟ್ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

English summary
CM HD Kumaraswamy presented 2018-19 budget is not economic system budget it is a political system budget, Mysuru Krishnaraja MLA and BJP leader SA Ramdas statement.Increase in diesel,petrol and electricity is a burden to the commanman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X