ದಲಿತ ಮಹಿಳೆಗೆ ಆರ್ಥಿಕ ಸಹಾಯ ಮಾಡಿದ ಕುಮಾರಸ್ವಾಮಿ
ಬೆಂಗಳೂರು, ಜೂನ್ 01 : ಜನತಾ ದರ್ಶನದ ವೇಳೆ ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ದಲಿತ ಮಹಿಳೆ ಸವಿತಾಗೆ ಎಚ್.ಡಿ.ಕುಮಾರಸ್ವಾಮಿ ಅವರು ಆರ್ಥಿಕ ನೆರವು ನೀಡಿದ್ದಾರೆ. ಸವಿತಾ ಸಮಸ್ಯೆ ಬಗೆಹರಿಸದಿದ್ದರೆ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸವಿತಾ
ಅವರು
ಬೇಕರಿ
ನಡೆಸಲು
ಅನುಕೂಲವಾಗುವಂತೆ
2
ಲಕ್ಷ
ರೂ.
ಸಹಾಯ
ಮಾಡಿರುವ
ಕುಮಾರಸ್ವಾಮಿ
ಅವರು,
ನೊಂದ
ಮಹಿಳೆಗೆ
ಹಕ್ಕುಪತ್ರ
ಕೊಡಿಸಲು
ಮಹಾಲಕ್ಷ್ಮೀ
ಲೇಔಟ್
ಕ್ಷೇತ್ರದ
ಶಾಸಕ
ಗೋಪಾಲಯ್ಯ
ಮತ್ತು
ಬಿಬಿಎಂಪಿ
ಉಪ
ಮೇಯರ್
ಹೇಮಲತಾ
ಅವರಿಗೆ
ಸೂಚನೆ
ಕೊಟ್ಟಿದ್ದಾರೆ.
[ಮಹಿಳೆಗೆ
ಕಿರುಕುಳ,
ಸರ್ಕಾರಕ್ಕೆ
ಗಡುವು
ಕೊಟ್ಟ
ಎಚ್ಡಿಕೆ]
'ನೊಂದ ಮಹಿಳೆಗೆ ಸಹಾಯ ಮಾಡಲು ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡಿದ್ದೆ. ಆದರೆ, ಅದು ಈಡೇರಿಲ್ಲ. ಚುನಾವಣೆ ಇರುವುದರಿಂದ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸುವುದನ್ನು ಮುಂದೂಡಿದ್ದೇನೆ. ಮಹಿಳೆಗೆ ನ್ಯಾಯ ಸಿಗದಿದ್ದರೆ ಧರಣಿ ನಡೆಸುವುದು ಖಂಡಿತ' ಎಂದು ಕುಮಾರಸ್ವಾಮಿ ಹೇಳಿದ್ದಾರೆ. [ಪೊಲೀಸರ ಕಿವಿ ಹಿಂಡಿದ ಸಿದ್ದರಾಮಯ್ಯ]
ಯಾರು ಈ ಸವಿತಾ? : ಬೆಂಗಳೂರಿನ ಹೊಸಹಳ್ಳಿ ನಿವಾಸಿ ಸವಿತಾ ಅವರು ಮೇ 17ರಂದು ಜನತಾ ದರ್ಶನದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಹೋಗಿದ್ದರು. ಆದರೆ, ಸಿದ್ದರಾಮಯ್ಯ ಗೃಹ ಕಚೇರಿ ಬಳಿ ಇದ್ದ ಪೊಲೀಸರು ರಾತ್ರಿ 8 ಗಂಟೆಯ ತನಕ ಆಕೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ. [ಪೊಲೀಸರಿಗೆ ಗೃಹ ಸಚಿವ ಪರಮೇಶ್ವರ ನೀಡಿದ ಸೂಚನೆಗಳೇನು?]
ಸವಿತಾ
ಅವರನ್ನು
ಸಿಎಂ
ಮನೆ
ಬಳಿಯಿಂದ
ಹೈಗೌಂಡ್ಸ್
ಪೊಲೀಸ್
ಠಾಣೆಗೆ
ಕರೆದುಕೊಂಡು
ಹೋಗಿ
ಅಮಾನವೀಯವಾಗಿ
ವರ್ತಿಸಲಾಗಿದೆ.
ವೇಶ್ಯಾವಾಟಿಕೆ
ಕೇಸು
ದಾಖಲು
ಮಾಡುವುದಾಗಿ
ಬೆದರಿಸಿ
ಪೊಲೀಸರು
ದೌರ್ಜನ್ಯ
ನಡೆಸಿದ್ದಾರೆ
ಎಂಬುದು
ಆರೋಪವಾಗಿದೆ.