ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯದಲ್ಲಿ ನಿಲ್ಲದ ಆತ್ಮಹತ್ಯೆ, ಜೀವತೆತ್ತರು 5 ರೈತರು
ಮೈಸೂರು/ಕೆಜಿಫ್/ಕಲಬುರಗಿ/ಗದಗ ಆಗಸ್ಟ್,08 : ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದ್ದು, ಬೆಳೆ ನಷ್ಟ, ಸಾಲಬಾಧೆಯಿಂದ ಮನನೊಂದು 5 ಮಂದಿ ರೈತರು ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೈಸೂರಿನ ಪಿರಿಯಾಪಟ್ಟಣ ನಿವಾಸಿ ಬಾಲು(45), ಮಾದೇವ (50) ಕೆಜಿಎಫ್ ನ ಕೀರ್ತಿಕೊಪ್ಪದ ಸುರೇಶ್ ಕುಮಾರ್ (39), ಕಲಬುರಗಿಯ ಗಾಣಗಾಪುರದ ಪ್ರಶಾಂತ್ ಪಾಟೀಲ್(37), ಗದಗಿನ ಸುವರ್ಣಗಿರಿ ಗ್ರಾಮದ ಶಂಕರಪ್ಪ ಲಮಾಣಿ(46) ಜೀವಕಳೆದುಕೊಂಡ ದುರ್ದೈವಿಗಳು.[ತಂತ್ರಜ್ಞಾನ ಬಳಸಿ ರೈತರಿಗೆ ಸಂದೇಶ ಕಳಿಸಿದ ಎಸ್ಆರ್ ಪಾಟೀಲ್]
ಸರ್ಕಾರ 2 ಲಕ್ಷ ಪರಿಹಾರ ಘೋಷಿಸಿದ್ದರೂ ಪ್ರತಿನಿತ್ಯ ರೈತರ ಸಾವು ಮುಂದುವರೆದಿದ್ದು ಇನ್ನು ಗ್ರಾಮಗಳಲ್ಲಿ ಸ್ಮಶಾನ ಮೌನ ಕಡಿಮೆಯಾಗದ ಸ್ಥಿತಿ ಎದುರಾಗಿದೆ. ಸಾಂತ್ವನ ಹೇಳುವ ಗಣ್ಯರು ಕಡಿಮೆಯಾಗಿದ್ದು, ರೈತರು ಇನ್ನು ಸಂಕಷ್ಟದಲ್ಲಿಯೇ ಜೀವನ ತಳ್ಳುತ್ತಿದ್ದಾರೆ.
Comments
English summary
Sugarcane farmer Balu(45), Madeva(50),Suresh Kumar(39)Prashanth Patil (37), Shankarappa lamani(46), Totally 5 farmers committed suicide in Mysuru, Gadag, Kalburagi, KGF, district on Saturday, August 08, 2015.
Story first published: Saturday, August 8, 2015, 19:00 [IST]