ಕರ್ನಾಟಕ ಏಕೀಕರಣಕ್ಕೆ 60ರ ಸಂಭ್ರಮ, ರಾಜ್ಯದ ಎಲ್ಲೆಡೆ ಕನ್ನಡ ರಥ
ಕರ್ನಾಟಕ ರಾಜ್ಯ ಏಕೀಕರಣದ 60ನೇ ವರ್ಷಾಚರಣೆಯ ಅಂಗವಾಗಿ, ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ ಮೂಡಿಸುಲು ರಾಜ್ಯದ ಕಲೆ,ಸಾಹಿತ್ಯ,ಸಂಸ್ಕೃತಿ ಬಿಂಬಿಸುವ‘ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು’ ಎಂಬ ಕನ್ನಡ ರಥವನ್ನು ರೂಪಿಸಲಾಗಿದೆ.
ಬೆಂಗಳೂರು. ಅಕ್ಟೋಬರ್. 31: ಕರ್ನಾಟಕ ಏಕೀಕರಣದ ವಜ್ರಮಹೋತ್ಸವದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಮೂರು ಕನ್ನಡ ರಥಗಳನ್ನು ಸಿದ್ಧಪಡಿಸಿದೆ. ರಥಗಳು ನ. 02 ರಿಂದ 11 ರವರೆಗೆ ಮೂರು ಮಾರ್ಗವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಲಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ. 01 ರಂದು ಸಂಜೆ 4-30 ಗಂಟೆಗೆ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಈ ಕನ್ನಡ ರಥ ಯಾತ್ರೆಗೆ ಚಾಲನೆ ನೀಡಲಿದ್ದಾರೆ. [2016ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ]
ರಾಜ್ಯದ ಕಲೆ, ಸಾಹಿತ್ಯ, ಸಂಸ್ಕೃತಿ ಬಿಂಬಿಸುವ 'ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು' ಪ್ರತ್ಯೇಕ ಮೂರು ಸ್ತಬ್ಧಚಿತ್ರಗಳನ್ನು ತಯಾರಿಸಲಾಗಿದ್ದು. ಕಾವೇರಿ, ಕೃಷ್ಣೆ, ತುಂಗಭದ್ರಾ ಹೆಸರಿನ ಈ ರಥಗಳು ನವೆಂಬರ್ 1 ರಂದು ಬೆಂಗಳೂರಿನಿಂದ ಹೊರಟು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಕನ್ನಡದ ಹಿರಿಮೆ ಗರಿಮೆ ಬಿಂಬಿಸಲಿವೆ.
ಕನ್ನಡ
ರಥವು
ತಂಗಲಿರುವ
ಜಿಲ್ಲೆಗಳ
ಜಿಲ್ಲಾ
ಕೇಂದ್ರದಲ್ಲಿ,
ಕನ್ನಡ
ಏಕೀಕರಣವನ್ನು
ನೆನಪಿಸುವ
ರೀತಿಯಲ್ಲಿ
ರಾಜ್ಯದ
ಖ್ಯಾತ
ಗಾಯಕರುಗಳಿಂದ
ಕನ್ನಡ
ಹಾಡುಗಳನ್ನು
ಪ್ರಸ್ತುತಪಡಿಸುವ
'ಗಾನ-ಯಾನ'
ಕಾರ್ಯಕ್ರಮಗಳನ್ನು
ಆಯೋಜಿಸಲಾಗಿದೆ.
ಕನ್ನಡ ರಥ ಆಗಮಿಸುವ ಜಿಲ್ಲೆಗಳಲ್ಲಿ, ಆಯಾ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸ್ಥಳೀಯ ಸಂಘ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ರಥವನ್ನು ಸ್ವಾಗತಿಸಿ, ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ