ರಾಜಸ್ಥಾನದ ಗಂಗಾನಗರ ಬಳಿ ಪಾಕ್ ಡ್ರೋಣ್ ಧ್ವಂಸಗೊಳಿಸಿದ ಭಾರತೀಯ ಸೇನೆ
ಜೈಪುರ್, ಮಾರ್ಚ್ 9: ಭಾರತದ ವಾಯುಗಡಿ ಉಲ್ಲಂಘಿಸಲು ಯತ್ನಿಸಿದ್ದ ಪಾಕಿಸ್ತಾನದ ಡ್ರೋಣ್ ನ್ನು ರಾಜಸ್ಥಾನದ ಗಂಗಾನಗರ ಬಳಿ ಧ್ವಂಸ ಮಾಡಲಾಗಿದೆ.
ಕಳೆದ ಹತ್ತು ದಿನಗಳಲ್ಲಿ ಮೂರನೇ ಬಾರಿ ಪಾಕ್ ಡ್ರೋಣ್ ಪಾಕ್ ಗಡಿ ದಾಟಿ ಭಾರತಕ್ಕೆ ಬಂದಿದೆ. ಆದರೆ ತಕ್ಷಣವೇ ಅದನ್ನು ಧ್ವಂಸಗೊಳಿಸಲಾಗಿದೆ.
ಕಚ್ನಲ್ಲಿ ಪಾಕ್ ರಹಸ್ಯ ಡ್ರೋಣ್ ಹೊಡೆದುರುಳಿಸಿದ ಭಾರತ ಸೇನೆ
ಬೆಳಗಿನ ಜಾವ ಸುಮಾರು 5 ಗಂಟೆಗೆ ಹಿಂದದೂಮಲ್ಕೋಟ್ ಶ್ರೀಗಂಗಾನಗರವನ್ನು ಪ್ರವೇಶಿಸಲು ಯತ್ನಿಸಿತ್ತು, ತಕ್ಷಣವೇ ಬಿಎಸ್ಎಫ್ ಯೋಧರು ಅದರ ಮೇಲೆ ಗುಂಡಿನ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ.
ಫೆಬ್ರವರಿ 26ರಂದು ಪಾಕಿಸ್ತಾನದ ಸ್ಪೈ ಡ್ರೋಣ್ ಒಂದನ್ನು ಭಾರತೀಯ ಸೇನೆ ಗುಜರಾತ್ನ ಕಚ್ ಭಾಗದಲ್ಲಿ ಹೊಡೆದುರುಳಿಸಿತ್ತು.
ಬಿಕಾನೇರ್ ಬಳಿ ಭಾರತೀಯ ವಾಯುಸೇನೆಯ ಮಿಗ್-21 ವಿಮಾನ ಪತನ
ಒಂದೆಡೆ ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಪ್ರದೇಶದ ಮೇಲೆ ಮಿಂಚಿನ ಸರ್ಜಿಕಲ್ ಸ್ಟ್ರೈಕ್ ನಡೆಸಿದರೆ ಇನ್ನೊಂದೆಡೆ ನಮ್ಮ ದೇಶದ ಮೇಲೆ ನಿಗಾ ಇಡಲು ಪಾಕಿಸ್ತಾನ ಬಳಸಿದ್ದ ರಹಸ್ಯ ಡ್ರೋಣ್ ಒಂದನ್ನು ಭಾರತೀಯ ಸೇನೆಯು ಹೊಡೆದುರುಳಿಸಿದೆ.