ಯುಎಸ್ ವೀಸಾ: ಭಾರತಕ್ಕೆ ಶೇ. 28 ಹೆಚ್ಚಳ, ಪಾಕ್ ಗೆ ಶೇ. 40 ಖೋತ
ಅಮೆರಿಕದ ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಆಡಳಿತದಲ್ಲಿ ನೀಡಲಾಗುತ್ತಿದ್ದ ವೀಸಾಗಳಿಗೆ ಹೋಲಿಸಿದರೆ, ಪಾಕಿಸ್ತಾನಕ್ಕೆ ಈ ಬಾರಿ ವೀಸಾ ನೀಡಿಕೆ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ.
ನವದೆಹಲಿ, ಮೇ 29: ವಿಶ್ವದ ನಾನಾ ದೇಶಗಳ ಪ್ರಜೆಗಳಿಗೆ ಅಮೆರಿಕ ಸರ್ಕಾರದಿಂದ ವಾರ್ಷಿಕವಾಗಿ ನೀಡಲಾಗುವ 'ನಾನ್ ಇಮಿಗ್ರಂಟ್ ವೀಸಾ' ನಿಯಮಗಳಡಿ ಭಾರತಕ್ಕೆ ಸಿಗುತ್ತಿದ್ದ ಪಾಲಿನಲ್ಲಿ ಸುಮಾರು ಶೇ. 28ರಷ್ಟನ್ನು ಹೆಚ್ಚಿಗೆ ಮಾಡಿರುವ ಅಮೆರಿಕ, ಪಾಕಿಸ್ತಾನಕ್ಕೆ ಈವರೆಗೆ ನೀಡುತ್ತಿದ್ದ ವಾರ್ಷಿಕ ಕೋಟಾದಲ್ಲಿ ಶೇ. 40ರಷ್ಟು ಕಡಿತ ಮಾಡಿ ಆದೇಶ ಹೊರಡಿಸಿದೆ.
ಅಮೆರಿಕದಲ್ಲಿ ಡೊನಾಲ್ಟ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ, ವಿಶ್ವ ಏಳು ಮುಸ್ಲಿಂ ರಾಷ್ಟ್ರಗಳಿಗೆ ವೀಸಾ ನಿರಾಕರಿಸುವ ಮಹತ್ವದ ಆದೇಶಕ್ಕೆ ಸಹಿಹಾಕಿದ್ದರು. ಸಿರಿಯಾ, ಇರಾನ್, ಸುಡಾನ್, ಲಿಬಿಯಾ, ಸೋಮಾಲಿಯಾ, ಯೆಮನ್ ಮತ್ತು ಇರಾಕ್ ರಾಷ್ಟ್ರಗಳ ಪ್ರಜೆಗಳಿಗೆ ವೀಸಾ ನಿರ್ಬಂಧ ವಿಧಿಸಲಾಗಿತ್ತು. ಪಾಕಿಸ್ತಾನ ಈ ಪಟ್ಟಿಯಲ್ಲಿ ಇಲ್ಲದಿದ್ದರೂ, ಆ ದೇಶಕ್ಕೆ ನೀಡಲಾಗುತ್ತಿದ್ದ ವೀಸಾ ಪ್ರಮಾಣದಲ್ಲಿ ಶೇ. 40ರಷ್ಟು ಕಡಿತಗೊಳಿಸಿರುವುದು ಗಮನಾರ್ಹ.[ಎಚ್ 1ಬಿ ವೀಸಾ ಬಗ್ಗೆ ಮೋದಿಗೆ ಫೋನ್ ಮೂಲಕ ವಿವರಿಸಿದ ಟ್ರಂಪ್]

ಈ ಹೊಸ ನಿಯಮವು ಇದೇ ವರ್ಷ ಮಾರ್ಚ್ ತಿಂಗಳಿಂದಲೇ ಜಾರಿಗೆ ಬಂದಿದೆಯೆಂದು ಅಮೆರಿಕ ಸರ್ಕಾರ ತಿಳಿಸಿದೆ. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ (ಒಬಾಮ ಆಡಳಿತ ಇದ್ದ ಕಾಲದಲ್ಲಿ) ಸುಮಾರು 78,637 ವೀಸಾಗಳನ್ನು ಪಾಕಿಸ್ತಾನಕ್ಕೆ ನೀಡಲಾಗಿತ್ತು. ಈ ಬಾರಿಯ ಮಾರ್ಚ್ ನಲ್ಲಿ ಕೇವಲ 3,973 ವೀಸಾಗಳನ್ನು ನೀಡಲಾಗಿದೆ.[ಟ್ರಂಪ್ ಐತಿಹಾಸಿಕ ನಿರ್ಧಾರ: 7 ಮುಸ್ಲಿಂ ರಾಷ್ಟ್ರಗಳಿಗೆ ವೀಸಾ ರದ್ದು]
ಭಾರತೀಯರಿಗೆ,ಇದೇ ವರ್ಷದ ಮಾರ್ಚ್ ಅವಧಿಯಲ್ಲಿ 97,925 ವೀಸಾಗಳು ಸಿಕ್ಕಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 72,082 ವೀಸಾಗಳು ಲಭ್ಯವಾಗಿದ್ದವು.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications