ಕೊರೆವ ಚಳಿಯಲ್ಲೂ ಖುಷಿಪಡಲು ಎಷ್ಟೆಲ್ಲ ಕಾರಣ!
ವಾರಾಂತ್ಯಕ್ಕೆ ಬಂದು ನಿಂತಿದ್ದೇವೆ. ಕಣ್ಣೆದುರು ಭಾನುವಾರ ಕುಣಿಯುತ್ತಿದೆ. ಜಗತ್ತಿನ ವಿವಿಧೆಡೆ ಏನೇನೋ ಘಟನೆಗಳು ನಡೆದಿವೆ. ಅವುಗಳ ಫೋಟೋಗಳು ಮತ್ತೊಂದಿಷ್ಟು ವಿವರಣೆ ಇಲ್ಲಿವೆ. ಇವೆಲ್ಲ ನಾನಾ ದೇಶದ ಆಚರಣೆಗಳು, ವಾತಾವರಣವನ್ನು ಬಿಂಬಿಸುವಂಥ ಫೋಟೋಗಳು. ಆದರೆ ಅಲ್ಲೊಬ್ಬರು ಭಾರತೀಯರಿದ್ದಾರೆ.
ಸಂಪ್ರದಾಯವಾದಿ ಕ್ರಿಶ್ಚಿಯನ್ನರು ಕ್ರಿಸ್ ಮಸ್ ಅನ್ನು ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಆಚರಿಸುವುದು ಕೇಳಿದ್ದಿರಾ? ಹೌದು, ರಷ್ಯಾದ ಮಾಸ್ಕೋಗೆ 500 ಕಿ.ಮೀ. ದೂರದಲ್ಲಿ ಜನವರಿ 7ರಂದು ಕ್ರಿಸ್ ಮಸ್ ಆಚರಿಸಿದ್ದಾರೆ. ದೀಪಿಕಾ ಪಡುಕೋಣೆ ತಮ್ಮ ಹಾಲಿವುಡ್ ಸಿನಿಮಾದ ಪ್ರಚಾರದಲ್ಲಿ ಸಕತ್ ಆಗಿ ಮಿಂಚಿದ್ದಾರೆ.
ಇನ್ನು ಬಲ್ಗೇರಿಯನ್ನರ ಹೊಸ ವರ್ಷಾಚರಣೆ ಗಮನಿಸಿದಿರಾ, ಅಬ್ಬಾ ಕೊರೆವ ಚಳಿಯಲ್ಲಿ ಮಂಜುಗಡ್ಡೆಯಂಥ ನದಿ ನೀರಿನಲ್ಲಿ ಶಿಲುಬೆ ಹುಡುಕಿದವರ ಆರೋಗ್ಯ ಚೆನ್ನಾಗುತ್ತದೆ ಎಂಬುದು ಅಲ್ಲಿನವರ ನಂಬಿಕೆಯಂತೆ. ಎಂಥ ಖುಷಿಯಾಗಿ ಹಾಡಿ, ಕುಣಿದು ಭಾಗವಹಿಸಿದ್ದಾರೆ ಗೊತ್ತಾ? ಒಟ್ಟಿನಲ್ಲಿ ಕ್ರಿಸ್ ಮಸ್, ಹೊಸ ವರುಷದ ಸಂಭ್ರಮ ಜಗತ್ತಿನ ನಾನಾ ಕಡೆ ಮುಂದುವರಿದಿದೆ. ಅವುಗಳೆಲ್ಲದರ ಫೋಟೋಗಳು ಇಲ್ಲಿವೆ.

ದೀಪಿಕಾ ಸಿನಿಮಾದ ಪ್ರೀಮಿಯರ್ ಷೋ
ನಟಿ ದೀಪಿಕಾ ಪಡುಕೋಣೆ ತನ್ನ ಹೊಸ ಇಂಗ್ಲಿಷ್ ಸಿನಿಮಾ XXX: Return of Xander cage ನ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾದ ವರ್ಲ್ಡ್ ಪ್ರೀಮಿಯರ್ ಷೋ ಮೆಕ್ಸಿಕೋ ನಗರದಲ್ಲಿತ್ತು. ಅಲ್ಲಿ ಕ್ಯಾಮೆರಾಕ್ಕೆ ಆಕೆ ಪೋಸು ನೀಡಿದ್ದು ಹೀಗೆ.

ನದಿಯಲ್ಲಿ ಪ್ರತಿಫಲನ
ಸೈಕಲ್ ಸವಾರರು ಸೇತುವೆ ಮೇಲೆ ಹಾಗೂ ರಸ್ತೆಯಲ್ಲಿ ಪಾದಚಾರಿಗಳು ಸಾಗುವಾಗ ಉತ್ತರ ಕೊರಿಯಾದ ಪ್ಯೋನ್ ಗ್ಯಾಂಗ್ ನ ಪೋತಂಗ್ ನದಿಯಲ್ಲಿ ಕಂಡುಬಂದ ಪ್ರತಿಫಲನದ ಅಪೂರ್ವ ಚಿತ್ರ ಇದು. ಅದ್ಭುತ ಕಲಾವಿದನೊಬ್ಬನ ಕುಂಚದಲ್ಲಿ ಅರಳಿದ ಚಿತ್ರದಂತಿರುವ ಇದು ಫೋಟೋ ಫೋಟೋ ಫೋಟೋ.

ಮಲ್ಲಕಂಬದ ಥರದ ಅಗ್ನಿಶಾಮಕ ದಳದವರ ಸಾಹಸ
ಹಾಗೇ ನೋಡಿದರೆ ಮಲ್ಲಕಂಬದ ಥರ ಕಾಣುವ ಈ ಸಾಹಸ ಏಣಿಯನ್ನು ಬಳಸಿ ಅಗ್ನಿಶಾಮಕದವರು ಪ್ರದರ್ಶಿಸುವ ವಾರ್ಷಿಕ ಹೊಸ ವರ್ಷದ ಸಾಹಸ. ಜಪಾನ್ ನ ಟೋಕಿಯೋದಲ್ಲಿ ಕಂಡುಬಂದಿದ್ದು.

ಬಲ್ಗೇರಿಯಾದಲ್ಲಿ ಹೊಸ ವರ್ಷದ ಸಂಭ್ರಮ
ಬಲ್ಗೇರಿಯಾದ ಕಲೋಫರ್ ನ ಟುಂಡ್ಜಾ ನದಿಯಲ್ಲಿ ನಿಂತು ಹೊಸ ವರ್ಷದ ಹಾಡು, ನೃತ್ಯದಲ್ಲಿ ತೊಡಗಿರುವ ಬಲ್ಗೇನಿಯನ್ನರು ಇವರು. ಈ ಸಂದರ್ಭದಲ್ಲಿ ಚರ್ಚ್ ನ ಪಾದ್ರಿ ನದಿಯೊಳಗೆ ಶಿಲುಬೆ ಹಾಕುತ್ತಾರೆ. ಯಾರು ಅದನ್ನು ಹುಡುಕುತ್ತಾರೋ

ಮೀನುಗಾರರ ಜತೆಗೆ ಪುಟಿನ್ ಕ್ರಿಸ್ ಮಸ್
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೀನುಗಾರರ ಜತೆಗೆ ಶನಿವಾರ ಕ್ರಿಸ್ ಮಸ್ ಆಚರಿಸಿದ್ದಾರೆ. ಸಂಪ್ರದಾಯವಾದಿ ಕ್ರಿಶ್ಚಿಯನ್ನರು ಜೂಲಿಯನ್ ಕ್ಯಾಲೆಂಡರ್ ಅನ್ವಯ ಜನವರಿ ಏಳಕ್ಕೆ ಕ್ರಿಸ್ ಮಸ್ ಅಚರಿತ್ತಾರಂತೆ. ಮಾಸ್ಕೋಗೆ 500 ಕಿ.ಮೀ. ವಾಯವ್ಯದಲ್ಲಿರುವ ಸೇಂಟ್ ಜಾರ್ಜ್ ಮೊನಾಸ್ಟರಿಯಲ್ಲಿ ಪುಟಿನ್ ಕ್ರಿಸ್ ಮಸ್ ಆಚರಿಸಿದ್ದಾರೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications