Miracle in China: 55 ದಿನ ಕೋಮಾದಲ್ಲಿದ್ದ ಬಾಲಕ ಎಚ್ಚರವಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ
ವೈದ್ಯಕೀಯ ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ, ಕೆಲವೊಮ್ಮೆ ಪ್ರೀತಿ ಮತ್ತು ನಂಬಿಕೆಯ ಮುಂದೆ ಸೋಲುತ್ತದೆ ಎಂಬುದಕ್ಕೆ ಚೀನಾದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕಳೆದ ನವೆಂಬರ್ನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿ ಕೋಮಾಗೆ ಜಾರಿದ್ದ 8 ವರ್ಷದ ಲಿಯು ಚುಕ್ಸಿ (Liu Chuxi) ಎಂಬ ಬಾಲಕ, ಬರೋಬ್ಬರಿ 55 ದಿನಗಳ ನಂತರ ತನ್ನ ಸಹಪಾಠಿಗಳ ಧ್ವನಿ ಕೇಳಿ ಪವಾಡಸದೃಶ ರೀತಿಯಲ್ಲಿ ಎಚ್ಚರಗೊಂಡಿದ್ದಾನೆ.
ಘಟನೆ ಹಿನ್ನೆಲೆ:
ಮಧ್ಯ ಚೀನಾದ ಹೂನಾನ್ ಪ್ರಾಂತ್ಯದ ಯುವಿಯಾಂಗ್ ನಗರದ ಲಿಯು, ನವೆಂಬರ್ನಲ್ಲಿ ನಡೆದ ಅಪಘಾತದಲ್ಲಿ ತಲೆಗೆ ಮತ್ತು ಶ್ವಾಸಕೋಶಕ್ಕೆ ತೀವ್ರವಾಗಿ ಏಟು ಮಾಡಿಕೊಂಡಿದ್ದನು. ಬಾಲಕ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ಕೈಚೆಲ್ಲಿದ್ದರು. ಆದರೆ ಆತನ ತಾಯಿ ಮಾತ್ರ ಭರವಸೆ ಕಳೆದುಕೊಳ್ಳಲಿಲ್ಲ. ಮಗನಿಗಾಗಿ ಹಲವಾರು ಆಸ್ಪತ್ರೆಗಳನ್ನು ಅಲೆದರು. ಅಂತಿಮವಾಗಿ, ಪರಿಚಿತ ಶಬ್ದಗಳು ಅಥವಾ ಇಷ್ಟದ ಸಂಗೀತ ಮೆದುಳನ್ನು ಚುರುಕುಗೊಳಿಸಬಹುದು ಎಂದು ವೈದ್ಯರೊಬ್ಬರು ನೀಡಿದ ಸಲಹೆ ಪವಾಡಕ್ಕೆ ದಾರಿಯಾಯಿತು.

ವೈದ್ಯರ ಸಲಹೆಯಂತೆ, ತಾಯಿ ಶಾಲೆಯ ಪ್ರಾರ್ಥನೆ ಮತ್ತು ವ್ಯಾಯಾಮದ ಸಂಗೀತವನ್ನು ಪ್ರತಿದಿನ ಬಾಲಕನ ಬೆಡ್ ಪಕ್ಕದಲ್ಲಿ ಹಾಕುತ್ತಿದ್ದರು. ಇದೇ ವೇಳೆ ಲಿಯು ಶಿಕ್ಷಕರು, ಆತನ ಸಹಪಾಠಿಗಳಿಗೆ ವಿಡಿಯೋ ಸಂದೇಶಗಳನ್ನು ಕಳುಹಿಸಲು ಹೇಳಿದರು. "ಚುಕ್ಸಿ, ಬೇಗ ಎದ್ದೇಳು, ಫುಟ್ಬಾಲ್ ಆಡಲು ಹೋಗೋಣ," ಎಂದು ಒಬ್ಬ ಸ್ನೇಹಿತ ಹೇಳಿದರೆ, ಇನ್ನೊಬ್ಬ ಬಾಲಕಿ "ನಾವೆಲ್ಲರೂ ನಿನಗಾಗಿ ಕಾಯುತ್ತಿದ್ದೇವೆ, ಪರೀಕ್ಷೆ ಹತ್ತಿರ ಬರುತ್ತಿದೆ, ಎದ್ದು ಬಾ," ಎಂದು ಕಣ್ಣೀರು ಹಾಕಿದ್ದಳು. ಈ ವಿಡಿಯೋಗಳು ಮತ್ತು ಶಿಕ್ಷಕರ ಪಾಠದ ರೆಕಾರ್ಡಿಂಗ್ಗಳೇ ಲಿಯುಗೆ ಮರುಜೀವ ನೀಡಿದವು.
ಸುಮಾರು 45 ದಿನಗಳ ನಂತರ, ಲಿಯು ಕಣ್ಣುರೆಪ್ಪೆಗಳನ್ನು ಅಲುಗಾಡಿಸಲು ಪ್ರಾರಂಭಿಸಿದನು. ಶಿಕ್ಷಕರ ಧ್ವನಿ ಕೇಳಿದಾಗ ನಗಲು ಯತ್ನಿಸಿದನು. ಸರಿಯಾಗಿ 55ನೇ ದಿನದಂದು ಆತ ಸಂಪೂರ್ಣ ಪ್ರಜ್ಞೆಗೆ ಮರಳಿದನು. ಆಸ್ಪತ್ರೆಗೆ ಭೇಟಿ ನೀಡಿದ ಶಿಕ್ಷಕರು, "ನಿನಗೆ ಹೋಮ್ವರ್ಕ್ನಿಂದ ವಿನಾಯಿತಿ ನೀಡಲಾಗಿದೆ" ಎಂದು ತಮಾಷೆ ಮಾಡಿದಾಗ, ಬಾಲಕ ಕಣ್ಣು ಅಗಲಿಸಿ ಕೈಬೀಸಿದ್ದು ಎಲ್ಲರ ಕಣ್ಣಲ್ಲಿ ಆನಂದಬಾಷ್ಪ ತರಿಸಿತು.
"ಕಾರ್ಮೋಡ ಸರಿದು ಸೂರ್ಯನನ್ನು ನೋಡಿದಂತಾಗಿದೆ. ನಿಜಕ್ಕೂ ಪವಾಡ ನಡೆದಿದೆ" ಎಂದು ಬಾಲಕನ ತಾಯಿ ಭಾವುಕರಾಗಿ ನುಡಿದಿದ್ದಾರೆ. ಸ್ನೇಹಿತರ ಪ್ರೀತಿಯ ಕರೆ ಎಂಥವರನ್ನೂ ಬದುಕಿಸಬಲ್ಲದು ಎಂಬುದನ್ನು ಈ ಪುಟ್ಟ ಮಕ್ಕಳು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Rashmika Mandanna: ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಕನಸಿನ ಹನಿಮೂನ್: ವಿಶೇಷ ವಿಡಿಯೋ ಹಂಚಿಕೊಂಡ ಜೋಡಿ -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Harish Rana: ಭಾರತದ ಮೊದಲ ದಯಾಮರಣದ ಹಕ್ಕುದಾರ ಹರೀಶ್ ರಾಣಾ ನಿಧನ, ಕುಟುಂಬಸ್ಥರಿಂದ ಅಂಗಾಂಗ ದಾನ -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Foundation of IT ಆಯ್ಕೆ ವೈರಲ್: ಭಾಷಾ ಸಮಾನತೆಗೆ ದಕ್ಷಿಣ ಭಾರತೀಯರ ಪ್ರಶ್ನೆ, ನಾರ್ಥಿ ಮಾರ್ಕ್ಸ್ ಕಾರ್ಡ್ Viral Post -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು











Click it and Unblock the Notifications