ಚಂಡಮಾರುತ ಹೊಡೆತಕ್ಕೆ ಹೈಟಿ ದೇಶದಲ್ಲಿ 300ಕ್ಕೂ ಹೆಚ್ಚು ಸಾವು
ಹೈಟಿ , ಅಕ್ಟೋಬರ್ 7: ಮೊದಲ ವರದಿಗಳು ಬರುತ್ತಿವೆ. ಪ್ರವಾಹ, ದುರಂತ, ನದಿಗಳು ಉಕ್ಕಿ ಹರಿಯುತ್ತಿವೆ. ಮನೆಯೊಳಗೆ, ಓಡಾಡುವ ಬೀದಿಗಳಲ್ಲಿ ನೀರೋ ನೀರು. ಮನೆಯ ಛಾವಣಿಗಳು ಹಾರಿಹೋಗಿವೆ. ಇಷ್ಟೆಲ್ಲ ಅನಾಹುತ ಅದ ಮೇಲೆ ಜಾನುವಾರುಗಳು ಬದುಕಿರುವ ಸಾಧ್ಯತೆಗಳು ಎಷ್ಟಿರುತ್ತವೆ ಹೇಳಿ? ಬಡ ದೇಶಗಳ ಪೈಕಿ ಒಂದಾದ ಹೈಟಿಯಲ್ಲಿ ಜನರು ತಮ್ಮ ಹಣೆಬರಹವನ್ನೇ ಹಳಿಯುತ್ತಿದ್ದಾರೆ.
ಮಾಥ್ಯೂಸ್ ಚಂಡಮಾರುತ ತಂದಿರುವ ಅನಾಹುತ ಒಂದೆರಡಲ್ಲ. ಮೂರು ದಿನಗಳ ನಂತರ ಚಂಡಮಾರುತ ಹೈಟಿ ದೇಶವನ್ನು ಅಪ್ಪಳಿಸಿದ್ದು, ಕಳೆದ ಐವತ್ತು ವರ್ಷಗಳಲ್ಲೇ ಭೀಕರವಾಗಿದೆ ಈ ಬಾರಿಯ ಸನ್ನಿವೇಶ. ಸಾವಿನ ಸಂಖ್ಯೆ ಏರುತ್ತಲೇ ಇದೆ.[ಮಾಥ್ಯೂ ಚಂಡಮಾರುತ: 20 ಲಕ್ಷ ಮಂದಿ ಸ್ಥಳಾಂತರ!]

ಮೊದಮೊದಲಿಗೆ ಸರಕಾರವು ಐವರು ಮೃತಪಟ್ಟಿದ್ದಾರೆ ಎಂದು ತಿಳಿಸಿತ್ತು. ಈಗ 300ಕ್ಕೂ ಹೆಚ್ಚು ಮಂದಿ ಮಾಥ್ಯೂ ಚಂಡಮಾರುತದ ಹೊಡೆತಕ್ಕೆ ಮೃತಪಟ್ಟಿದ್ದಾರೆ ಎನ್ನುತ್ತಿದೆ. 2010ರ ಭೂಕಂಪದ ನಂತರ ಈ ದೇಶ ಎದುರಿಸುತ್ತಿರುವ ಭೀಕರ ಪ್ರಾಕೃತಿಕ ವಿಕೋಪ ಇದು.
ಹಳ್ಳಿ, ಪಟ್ಟಣಗಳಲ್ಲಿ ಹಲವು ಅಡಿಗಳ ನೀರು ತುಂಬಿದೆ. ಮನೆಗಳು ರಾಶಿ ಹಾಕಿದ ಮರದಂತಾಗಿವೆ. ಬೆಳೆ ನಷ್ಟದ ಬಗ್ಗೆ ಹೇಳುವುದೇ ಬೇಡ. ಜೆರೆಮಿ ನಗರದಲ್ಲಿ ಶೇ 80ರಷ್ಟು ಮನೆಗಳು ನಾಶವಾಗಿವೆ. ರಕ್ಷಣಾ ಕಾರ್ಯದಲ್ಲಿ ತೊಡಗಿರುವವರು ಹೆಚ್ಚು ಒಳಭಾಗಕ್ಕೆ ಹೋದಂತೆಲ್ಲ ಮೃತ ದೇಹಗಳು ಸಿಗುತ್ತಿವೆ. ಪ್ರವಾಹಕ್ಕೆ ಸಿಲುಕಿದ ಮನೆಗಳು, ಬಡಾವಣೆಗಳಲ್ಲಿ ಸಾವಿನ ರುದ್ರನರ್ತನ.[ಚಿತ್ರಗಳು: ಆಂಧ್ರದಲ್ಲಿ ಭಾರೀ ಮಳೆ ತಂದ ಅವಾಂತರ]

ಗುರುವಾರದವರೆಗೆ ದೇಶದ ದಕ್ಷಿಣ ಭಾಗಕ್ಕೆ ಸಂಪರ್ಕವೇ ಇರಲಿಲ್ಲ. ಫೋನ್ ಲೈನ್ ಗಳು ತುಂಡಾಗಿವೆ. ಸೇತುವೆಗಳು ಕುಸಿದಿವೆ. ಈ ವರೆಗೆ ನಮ್ಗೆ ಸಿಕ್ಕಿರುವುದು ತೀರಾ ಭಾಗಶಃ ನಷ್ಟ ಹಾಗೂ ಸಾವಿನ ಲೆಕ್ಕಾಚಾರ ಎಂದು ಪತ್ರಿಕಾಗೋಷ್ಠಿಯಲ್ಲಿ ಸಚಿವ ಆನಿಕ್ ಜೋಸೆಫ್ ಹೇಳಿದ್ದಾರೆ. ದೇಶದ ಪರ್ವತಗಳಲ್ಲೂ ಸಾವು-ನೋವುಗಳಾಗಿವೆ. ಅಲ್ಲೆಲ್ಲ ತಮ್ಮಷ್ಟಕ್ಕೆ ಬದುಕುತ್ತಿದ್ದ ಸಮುದಾಯದವರ ಪ್ರಾಣಹಾನಿಯಾಗಿದೆ ಎಂದಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications