ಅಶ್ಲೀಲ ವೆಬ್ ತಾಣಗಳ ಕ್ಲೀನ್ ಮಾಡಿದ ಚೀನಾ
ಬೀಜಿಂಗ್,ಜೂ. 04: ಚೀನಾದಲ್ಲಿ ಈಗ ಆನ್'ಲೈನ್ ಸ್ವಚ್ಛತಾ ಆಂದೋಲನ ಆರಂಭವಾಗಿದೆ. ಅಂತರ್ಜಾಲದಲ್ಲಿ ಕಂಡು ಬರುವ ನಿಯಮಬಾಹಿರ ಅಶ್ಲೀಲ ವೆಬ್ ತಾಣಗಳನ್ನು ಒಂದೊಂದಾಗಿ ಮುಚ್ಚುವ ಕಾರ್ಯದಲ್ಲಿ ಸರ್ಕಾರ ನಿರತವಾಗಿದೆ. ಸರಿ ಸುಮಾರು 422ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಮುಚ್ಚಲಾಗಿದೆ.
ಶ್ಲೀಲ ದೃಶ್ಯ, ಸಾಹಿತ್ಯ ಪ್ರಕಟಿಸುವ ಎಲ್ಲಾ ರೀತಿಯ ಅಂತರ್ಜಾಲ ತಾಣಗಳ ಹಾಗೂ ಪುಟಗಳ ಮೇಲೆ ಚೀನಾ ಸರ್ಕಾರ ಕಠಿಣ ಕಾರ್ಯಾಚರಣೆ ನಡೆಸಿ ಮುಟ್ಟುಗೋಲು ಹಾಕಿದೆ. ಆನ್ ಲೈನ್ ನಲ್ಲಿ ಬ್ಲೂಫಿಲಂಗಳನ್ನ, ಅಶ್ಲೀಲ ವಿಡಿಯೋಗಳನ್ನ ಪ್ರಸಾರ ಮಾಡುತ್ತಿದ್ದ 422 ವೆಬ್ ಸೈಟ್'ಗಳನ್ನ ಮುಚ್ಚಲಾಗಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Cleaning the Web 2014 ಎಂಬ ಹೆಸರಿನಲ್ಲಿ ಈ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಸಾಮಾಜಿಕ ಜಾಲ ತಾಣಗಳಾದ ವೀಚ್ಯಾಟ್, ವೇಬೋ, ಆನ್ ಲೈನ್ ಫೋರಮ್ ಗಳು, ಬ್ಲಾಗ್ ಗಳು ಹೀಗೆ ವಿವಿಧ ಶೇರಿಂಗ್ ತಾಣಗಳಲ್ಲಿ ಅಶ್ಲೀಲ ವಿಚಾರಗಳನ್ನ ಹರಡುತ್ತಿದ್ದ 4,800 ಅಕೌಂಟ್ ಗಳನ್ನ ಕಿತ್ತುಹಾಕಲಾಗಿದೆ. ಅಷ್ಟೇ ಅಲ್ಲ, 9 ಸಾವಿರ ಅಶ್ಲೀಲ ಜಾಹೀರಾತುಗಳು ಹಾಗೂ 3 ಲಕ್ಷ ಅಶ್ಲೀಲ ಬರಹಗಳನ್ನ ಆನ್ ಲೈನ್ ನಿಂದ ಡಿಲೀಟ್ ಮಾಡಲಾಗಿದೆ.
ಸುಮಾರು 9,000 ಜಾಹೀರಾತುಗಳು ಹಾಗೂ 300,000 ಲೇಖನಗಳನ್ನು ಆಕ್ಷೇಪಾರ್ಹ ಎಂದು ಡಿಲೀಟ್ ಮಾಡಲಾಗಿದೆ. ಕಳೆದ ಏಪ್ರಿಲ್ ನಿಂದ ನವೆಂಬರ್ ತನಕ ಈ ಅಭಿಯಾನ ನಡೆದಿದ್ದು, ಇನ್ನೂ ಮುಂದುವರೆಯುವ ಲಕ್ಷಣಗಳು ಕಂಡು ಬಂದಿವೆ. ಸರ್ಕಾರದ ಕ್ರಮದಿಂದ ತ್ವರಿತವಾಗಿ ದುಡ್ಡು ಗಳಿಕೆ ವಿಧಾನ ಕಂಡುಕೊಂಡಿದ್ದ ವೆಬ್ ಮಾಲೀಕರು ಸಹಜವಾಗಿ ಚಿಂತೆಗೀಡಾಗಿದ್ದಾರೆ.
ಅಕ್ರಮವಾಗಿ ಶಸ್ತ್ರಾಸ್ತ್ರ ಮಾರಾಟ, ಸ್ಫೋಟಕ, ವಿಷಕಾರಿ ರಾಸಾಯನಿಕ, ಎಲೆಕ್ಟ್ರಾನಿಕ್ ಸಾಧನಗಳು, ಉನ್ನತ ತಂತ್ರಜ್ಞಾನವುಳ್ಳ ಮೊಬೈಲ್ ಗಳಲ್ಲದೆ ಪ್ರಮುಖ ವ್ಯಕ್ತಿಗಳ ಮಾಹಿತಿಗಳು ಕೂಡಾ ಅತ್ಯಧಿಕ ಮೊತ್ತಕ್ಕೆ ಬಿಕರಿ ಮಾಡುವ ವೆಬ್ ತಾಣಗಳು, ಪೋರ್ನ್ ತಾಣಗಳು, ವೆಬ್ ಫೋರಮ್ ಗಳನ್ನು ಚೀನಾ ಕಾಲದಿಂದ ಕಾಲಕ್ಕೆ ಮುಚ್ಚುತ್ತಾ ಬರುತ್ತದೆ.
2012ರಲ್ಲಿ ಚೀನಾ ಐಟಿ ಸಚಿವಾಲಯದ ಆದೇಶದ ಮೇರೆಗೆ ಅಕ್ರಮ ಚಟುವಟಿಕೆಗಳ ತಾಣವಾಗಿದ್ದ ಸುಮಾರು 8,000 ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಮುಚ್ಚಿತ್ತು. ಇದಲ್ಲದೆ ರಾಜಕೀಯ ಸೆನ್ಸಾರ್ ಷಿಪ್ ಕೂಡಾ ಚೀನಾದಲ್ಲಿ ಜಾರಿಯಲ್ಲಿದ್ದು ಇತ್ತೀಚೆಗೆ ಕೆಲದಿನಗಳ ಮಟ್ಟಿಗೆ ಗೂಗಲ್ ಸರ್ಚ್ ಇಂಜಿನ್ ಗೆ ಪರದೆ ಏಳೆಯಲಾಗಿತ್ತು.(ಐಎಎನ್ಎಸ್)
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್












Click it and Unblock the Notifications