ಹ್ಯಾಕರ್ಸ್ ಹವಾ: ಚೀನಾದಲ್ಲಿ ಸೋರಿಕೆ ಆಯ್ತಾ 100 ಕೋಟಿ ದತ್ತಾಂಶ!?
ಶಾಂಘೈ, ಜುಲೈ 6: ಚೀನಾದಲ್ಲಿ ಶಾಂಘೈ ಪೊಲೀಸರಿಗೆ ಸಂಬಂಧಿಸಿದ 1 ಶತಕೋಟಿ ಅಂಕಿ-ಅಂಶಗಳು ಮತ್ತು ದತ್ತಾಂಶಗಳನ್ನು ಹ್ಯಾಕರ್ಗಳು ಕದ್ದುಕೊಂಡಿರುವುದಾಗಿ ಹೇಳುತ್ತಿದ್ದಾರೆ. ಅದು ಪಕ್ಕಾ ಆದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಅತಿದೊಡ್ಡ ಪ್ರಮಾಣದ ದತ್ತಾಂಶವನ್ನು ಹ್ಯಾಕ್ ಮಾಡಿದಂತೆ ಆಗುತ್ತದೆ.
ಕಳೆದ ವಾರ ಆನ್ಲೈನ್ ಹ್ಯಾಕಿಂಗ್ ಫೋರಮ್ ಬ್ರೀಚ್ ಫೋರಮ್ಗಳ ಪೋಸ್ಟ್ನಲ್ಲಿ, "ಚೀನಾಡಾನ್" ಹ್ಯಾಂಡಲ್ ಅನ್ನು ಬಳಸುವ ಯಾರಾದರೂ ಸುಮಾರು 24 ಟೆರಾಬೈಟ್ಗಳ (24 TB) ಡೇಟಾವನ್ನು ಮಾರಾಟ ಮಾಡಲು ಪ್ರಸ್ತಾಪಿಸಲಾಗಿದೆ. ಈ ವೇಳೆ 2 ಲಕ್ಷ ಡಾಲರ್ ಮೌಲ್ಯದ 1 ಶತಕೋಟಿ ಜನರ ಮಾಹಿತಿ ಜೊತೆಗೆ ಹಲವು ಶತಕೋಟಿ ಪ್ರಕರಣಗಳನ್ನು ಒಳಗೊಂಡಿರುವುದಾಗಿ ತಿಳಿಸಿದೆ.
ಹ್ಯಾಕರ್ಸ್ ಕದ್ದಿರುವ ಮಾಹಿತಿಯಲ್ಲಿ ಶಾಂಘೈ ರಾಷ್ಟ್ರೀಯ ಪೊಲೀಸ್ ದತ್ತಾಂಶವನ್ನು ಹೊಂದಿರುತ್ತದೆ. ಈ ದತ್ತಾಂಶದಲ್ಲಿ ಹೆಸರು, ವಿಳಾಸ, ರಾಷ್ಟ್ರೀಯ ಗುರುತಿನ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯ ಜೊತೆಗೆ ಪ್ರಕರಣದ ಮಾಹಿತಿಯನ್ನು ಒಳಗೊಂಡಿದೆ. ಚೀನಾದಲ್ಲಿ ಹ್ಯಾಕರ್ಸ್ ಕದ್ದಿರುವ ಮಾಹಿತಿಯ ಕುರಿತು ಜಾಗತಿಕ ಮಾಧ್ಯಮಗಳಲ್ಲಿ ಗುಲ್ಲಾಗುತ್ತಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಸ್ಯಾಂಪಲ್ ದತ್ತಾಂಶದಲ್ಲಿ ಉಲ್ಲೇಖಿಸಿದ ಅಂಶಗಳೇನು?
ಚೀನಾದಲ್ಲಿ ಸರ್ಕಾರದ ಬಹುದೊಡ್ಡ ಪ್ರಮಾಣದ ಮಾಹಿತಿಯನ್ನು ಹ್ಯಾಕ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಕೆಲವು ಮಾದರಿ (ಸ್ಯಾಂಪಲ್) ಅಂಶಗಳನ್ನು ಹ್ಯಾಕರ್ಸ್ ಉಲ್ಲೇಖಿಸಿದ್ದಾರೆ. ದಿ ಅಸೋಸಿಯೇಟೆಡ್ ಪ್ರೆಸ್ ನ್ಯೂಸ್ ಏಜೆನ್ಸಿ ತೋರಿಸಿದ ಈ ಮಾದರಿ ಅಂಶಗಳಲ್ಲಿ ಹೆಸರಿನ ಪಟ್ಟಿ, ಜನ್ಮ ದಿನಾಂಕ, ವಯಸ್ಸು, ಮೊಬೈಲ್ ಸಂಖ್ಯೆಯನ್ನು ಉಲ್ಲೇಖಿಸಲಾಗಿದೆ. ಒಬ್ಬ ವ್ಯಕ್ತಿಯು "2020" ರಲ್ಲಿ ಜನಿಸಿದವರು ಎಂದು ಪಟ್ಟಿ ಮಾಡಲಾಗಿದ್ದು, ಅವರ ವಯಸ್ಸು "1" ಎಂದು ಗುರುತಿಸಲಾಗಿದೆ. ಆ ಮೂಲಕ ಹ್ಯಾಕ್ ಮಾಡಿ ಪಡೆದ ಡೇಟಾದಲ್ಲಿ ಅಪ್ರಾಪ್ತ ವಯಸ್ಕರ ಮಾಹಿತಿಯೂ ಇರುವುದು ಖಾತ್ರಿಯಾಗುತ್ತದೆ.

ಶಾಂಘೈ ಪೊಲೀಸರಿಂದ ಸ್ಪಷ್ಟನೆ ನೀಡುವುದಕ್ಕೆ ನಿರಾಕರಣೆ
ಅಸೋಸಿಯೇಟೆಡ್ ಪ್ರೆಸ್ ತಕ್ಷಣವೇ ಡೇಟಾ ಮಾದರಿಗಳ ದೃಢೀಕರಣವನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ. ಈ ಕುರಿತು ಮಾಹಿತಿಗಾಗಿ ಶಾಂಘೈ ಪೊಲೀಸರಿಗೆ ಮನವಿ ಮಾಡಿಕೊಂಡರೆ, ಪೊಲೀಸರು ಕೂಡ ತಕ್ಷಣ ಪ್ರತಿಕ್ರಿಯೆ ನೀಡುವುದಕ್ಕೆ ನಿರಾಕರಿಸಿದ್ದಾರೆ. ದತ್ತಾಂಶ ಸೋರಿಕೆಗೆ ಸಂಬಂಧಿಸಿದಂತೆ ಚೀನಾದ ವೈಬೋದಂತಹ ಸಾಮಾಜಿಕ ವೇದಿಕೆಯಲ್ಲಿ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ. ಇದರ ಮಧ್ಯೆ ಸೆನ್ಸಾರ್ಗಳು "ಶಾಂಘೈ ಡೇಟಾ ಸೋರಿಕೆ" ಎಂಬ ಹುಡುಕಾಟದ ಕೀ ವರ್ಡ್ ಅನ್ನು ನಿರ್ಬಂಧಿಸಲು ಮುಂದಾಗಿದ್ದಾರೆ.

ತಮ್ಮ ದತ್ತಾಂಶ ಬಳಸಿ ಆನ್ ಲೈನ್ ಹುಡುಕಾಟ
ತಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸಿಕೊಂಡು Alipay ನಲ್ಲಿ ಜನರನ್ನು ಹುಡುಕಲು ಪ್ರಯತ್ನಿಸುವ ಮೂಲಕ ಆನ್ಲೈನ್ನಲ್ಲಿ ಸೋರಿಕೆಯಾದ ಕೆಲವು ವೈಯಕ್ತಿಕ ಡೇಟಾವನ್ನು ಪರಿಶೀಲಿಸುವ ತನಕ ಸಂದೇಹವಿದೆ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. "ಎಲ್ಲರೂ, ಭವಿಷ್ಯದಲ್ಲಿ ಹೆಚ್ಚಿನ ಫೋನ್ ಹಗರಣಗಳು ನಡೆಯುವ ಅಪಾಯವಿದ್ದು, ದಯವಿಟ್ಟು ಜಾಗರೂಕರಾಗಿರಿ,!" ಎಂದು Weibo ಪೋಸ್ಟ್ನಲ್ಲಿ ಅವರು ಹೇಳಿದ್ದಾರೆ.
ಸೋರಿಕೆ ಎಂದರೆ ಎಲ್ಲರೂ "ಬೆತ್ತಲೆಯಾಗಿ ಓಡುತ್ತಿದ್ದಾರೆ" - ಗೌಪ್ಯತೆಯ ಕೊರತೆಯನ್ನು ಉಲ್ಲೇಖಿಸಲು ಬಳಸಲಾಗುವ ಸ್ಥಳೀಯ ಭಾಷೆಯಾಗಿದ್ದು, ಇದು "ಭಯಾನಕ" ಎಂದು ಇನ್ನೊಬ್ಬ ವ್ಯಕ್ತಿ ವೈಬೊದಲ್ಲಿ ಕಾಮೆಂಟ್ ಮಾಡಿದ್ದಾರೆ.

ದತ್ತಾಂಶ ಸೋರಿಕೆ ಬಗ್ಗೆ ಚೀನಾದ ತಜ್ಞರು ಹೇಳುವುದೇನು?
ನೀತಿ ಸಂಶೋಧನಾ ಸಂಸ್ಥೆ ಟ್ರಿವಿಯಮ್ ಚೀನಾದ ಪಾಲುದಾರ ಮತ್ತು ತಂತ್ರಜ್ಞಾನದ ಮುಖ್ಯಸ್ಥರಾದ ಕೇಂದ್ರ ಸ್ಕೇಫರ್ ಅವರು ಟ್ವೀಟ್ನಲ್ಲಿ "ವದಂತಿಯ ಗಿರಣಿಯಿಂದ ಸತ್ಯವನ್ನು ಪತ್ತೆ ಮಾಡಿ ಹೇಳುವುದು ಕಷ್ಟ, ಆದರೆ ಫೈಲ್ ಅಸ್ತಿತ್ವದಲ್ಲಿ ಇರುವುದು ಪಕ್ಕಾ ಆಗಿದೆ," ಎಂದು ಹೇಳಿದ್ದಾರೆ. ಹಾಂಗ್ ಕಾಂಗ್ ಮೂಲದ ಭದ್ರತಾ ಸಂಸ್ಥೆ ನೆಟ್ವರ್ಕ್ ಬಾಕ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಮೈಕೆಲ್ ಗೆಜೆಲಿ ಪ್ರಕಾರ, ಇಂತಹ ಡೇಟಾ ಸೋರಿಕೆಗಳು ಸಾಕಷ್ಟು ಸಾಮಾನ್ಯವಾಗಿರುತ್ತದೆ.
"ಡಾರ್ಕ್ ವೆಬ್ನಲ್ಲಿ ಸುಮಾರು 12 ಬಿಲಿಯನ್ ಹೊಂದಿಕೊಂಡಿರುವ ಖಾತೆಗಳನ್ನು ಪೋಸ್ಟ್ ಮಾಡಲಾಗಿದೆ. ಇದು ವಿಶ್ವದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಾಗಿದೆ, ಹೆಚ್ಚಿನ ದತ್ತಾಂಶ ಸೋರಿಕೆಯು ಯುಎಸ್ನಲ್ಲಿ ಕಂಡು ಬರುತ್ತವೆ," ಎಂದು ಅವರು ಹೇಳಿದ್ದಾರೆ.

ಸೈಬರ್ ಭದ್ರತೆ ಬಗ್ಗೆ ಎಚ್ಚರಿಕೆ ನೀಡಿರುವ ತಜ್ಞರು
ಸೈಬರ್ ಭದ್ರತಾ ಸಂಸ್ಥೆಯ ಸೋಫೋಸ್ನ ಪ್ರಧಾನ ಸಂಶೋಧನಾ ವಿಜ್ಞಾನಿ ಚೆಸ್ಟರ್ ವಿಸ್ನಿವ್ಸ್ಕಿ, ಈ ಉಲ್ಲಂಘನೆಯು "ಚೀನೀ ಸರ್ಕಾರಕ್ಕೆ ನಂಬುವುದಕ್ಕೂ ಸಾಧ್ಯವಾಗದ ಮಟ್ಟಿಗೆ ಮುಜುಗರವನ್ನು ಉಂಟು ಮಾಡುತ್ತದೆ. ದತ್ತಾಂಶ ಸೋರಿಕೆಯು ರಾಜಕೀಯ ವ್ಯಕ್ತಿಗಳಿಗೆ ಸಾಕಷ್ಟು ಹಾನಿಯನ್ನು ಉಂಟು ಮಾಡುತ್ತದೆ," ಎಂದಿದ್ದಾರೆ. ಹೆಚ್ಚಿನ ಡೇಟಾವು ಬ್ಯಾನರ್ ಜಾಹೀರಾತುಗಳನ್ನು ನಡೆಸುವ ಜಾಹೀರಾತು ಕಂಪನಿಗಳಿಗೆ ಹೋಲಿಕೆ ಆಗುತ್ತವೆ ಎಂದು ಹೇಳಿದ್ದಾರೆ.
"ನೀವು ಒಂದು ಶತಕೋಟಿ ಜನರ ಮಾಹಿತಿಯ ಬಗ್ಗೆ ಮಾತನಾಡುತ್ತಿರುವಾಗ ಅದು ಸ್ಥಿರವಾದ ಮಾಹಿತಿಯಾಗಿದೆ. ಅವರು ಎಲ್ಲಿ ಪ್ರಯಾಣಿಸಿದರು, ಅವರು ಯಾರೊಂದಿಗೆ ಸಂವಹನ ನಡೆಸಿದರು ಅಥವಾ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆಯಷ್ಟೇ ಅಲ್ಲ. ಅದು ತುಂಬಾ ಕಡಿಮೆ ಆಸಕ್ತಿದಾಯಕವಾಗುತ್ತದೆ," ಎಂದು ವಿಸ್ನಿವ್ಸ್ಕಿ ಹೇಳಿದರು.

ನೀವೂ ಎಚ್ಚರಿಕೆ ವಹಿಸಿ ಎಂದ ಸಂಶೋಧಕರು
"ಸೋರಿಕೆ ಆಗಿರುವ ಮಾಹಿತಿಯನ್ನು ಒಮ್ಮೆ ಸಡಿಲಿಸಿದರೆ, ಅದು ಶಾಶ್ವತವಾಗಿ ಎಲ್ಲರಿಗೂ ಸಿಗುತ್ತದೆ," ಎಂದು ವಿಸ್ನಿವ್ಸ್ಕಿ ಹೇಳಿದರು. "ಆದ್ದರಿಂದ ಸೋರಿಕೆ ಆಗಿರುವ ದತ್ತಾಂಶದಲ್ಲಿ ನಿಮ್ಮ ಮಾಹಿತಿಯೂ ಸೇರಿಕೊಂಡಿದ್ದರೆ, ಅದು ಯಾರಿಗಾದರೂ, ಯಾವಾಗಲಾದರೂ ಸುಲಭವಾಗಿ ಸಿಕ್ಕು ಬಿಡುತ್ತದೆ. ಹೀಗಾಗಿ ತಮ್ಮ ಮಾಹಿತಿಯನ್ನು ತಾವು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು," ಎಂದು ಹೇಳಿದ್ದಾರೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications