ಈ ಬಾರಿ ವಾಡಿಕೆಗಿಂತ ಹೆಚ್ಚು ಸುರಿಯಲಿದೆ ಮುಂಗಾರು ಮಳೆ
ಬೆಂಗಳೂರು, ಏಪ್ರಿಲ್ 02 : ಭೀಕರ ಬರಗಾಲದಿಂದ ಕಂಗೆಟ್ಟಿರುವ ಜನರಿಗೆ ಸಿಹಿ ಸುದ್ದಿ. ಈ ಬಾರಿ ದೇಶದಲ್ಲಿ ಮುಂಗಾರು ಉತ್ತಮವಾಗಿರಲಿದ್ದು, ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ. ಮುಂಗಾರು ಮಾರುತಗಳಿಗೆ ಈ ಬಾರಿ ಎಲ್ ನಿನೋ ಅಡ್ಡಗಾಲು ಹಾಕುವುದಿಲ್ಲ.
ವೆದರ್
ರಿಸ್ಕ್
ಮ್ಯಾನೇಜ್ಮೆಂಟ್
ಸರ್ವೀಸಸ್
ಲಿಮಿಟೆಡ್
ಎಂಬ
ಹವಾಮಾನ
ವಿಶ್ಲೇಷಣಾ
ಸಂಸ್ಥೆ
ಈ
ಬಗ್ಗೆ
ಅಧ್ಯಯನ
ನಡೆಸಿದೆ.
ಸಂಸ್ಥೆಯ
ಕಾಂತಿ
ಪ್ರಸಾದ್
ಅವರು
ಈ
ಕುರಿತು
ಮಾಹಿತಿ
ನೀಡಿದ್ದು,
'ಕಳೆದ
ಎರಡು
ವರ್ಷ
ದೇಶದಲ್ಲಿ
ಮಳೆಯ
ಪ್ರಮಾಣ
ಕಡಿಮೆ
ಆಗಿತ್ತು.
ಈ
ಬಾರಿ
ಉತ್ತಮ
ಮಳೆಯಾಗಲಿದೆ'
ಎಂದು
ಹೇಳಿದ್ದಾರೆ.
[ಸುಡುತ್ತಿದೆ
ಕರ್ನಾಟಕ,
ಬಾ
ಮಳೆಯೇ
ಬೇಗ
ಬಾ]
ಅಧ್ಯಯನ ವರದಿ ಪ್ರಕಾರ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತದೆ. ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಶೇ 25 ರಷ್ಟು ಹೆಚ್ಚು ಮಳೆಯಾಗಲಿದೆ. ಜೂನ್ ತಿಂಗಳ ಬಳಿಕ ಮಳೆಯ ಪ್ರಮಾಣ ಕಡಿಮೆ ಆಗಲಿದೆ. ಆದರೆ, ಮಳೆಯ ಕೊರತೆ ಉಂಟಾಗುವುದಿಲ್ಲ. [ಎರಡೇ ಎರಡು ಬಕೆಟ್ ನೀರುಳಿಸಲು ಸಾಧ್ಯವೆ? ಪ್ರಯತ್ನಿಸಿ]
ಮುಂಗಾರು ಮಳೆ ಉತ್ತಮವಾಗಿ ಸುರಿದರೆ ಈಶಾನ್ಯ ಪ್ರದೇಶಗಳಲ್ಲಿ ಮಳೆಯ ಕೊರತೆ ಎದುರಾಗುತ್ತದೆ. ಈ ವರ್ಷವೂ ಅದು ಪುನರಾವರ್ತನೆ ಆಗಲಿದೆ. ಈಶಾನ್ಯ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ಉತ್ತಮ ಮಳೆಯಾಗಲಿದೆ ಎಂದು ವರದಿ ಹೇಳಿದೆ. [ಕರ್ನಾಟಕದಲ್ಲಿ ಭೀಕರ ಬರಗಾಲ, ಹೇಳುವವರಿಲ್ಲ ಕೇಳುವವರಿಲ್ಲ]
ಎಲ್ ನಿನೋ ಅಡ್ಡಗಾಲು ಹಾಕಲ್ಲ : ಎರಡು ವರ್ಷಗಳಿಂದ ಎಲ್ ನಿನೋ ಮಾರುತಗಳು ಮುಂಗಾರು ಮಳೆ ಸುರಿಯದಂತೆ ಅಡ್ಡಗಾಲು ಹಾಕುತ್ತಿದ್ದವು. ಆದರೆ, ಈ ವರ್ಷ ಮೇ ತಿಂಗಳ ಹೊತ್ತಿಗೆ ಎಲ್ ನಿನೋ ಸಂಪೂರ್ಣವಾಗಿ ದುರ್ಬಲವಾಗಲಿದೆ. ಆದ್ದರಿಂದ, ಉತ್ತಮ ಮಳೆಯಾಗುತ್ತದೆ ಎಂದು ವರದಿ ತಿಳಿಸಿದೆ.