ವ್ಯಂಗ್ಯ, ಕುಹಕ, ಆಕ್ರೋಶದ ಸರಕಾಯ್ತೇ ಕೇಂದ್ರ ಬಜೆಟ್?!
ನವದೆಹಲಿ, ಫೆಬ್ರವರಿ 1: ಹಲವು ನಿನರೀಕ್ಷೆ, ಭರವಸೆಗಳಿಂದ ಕೇಂದ್ರ ಬಜೆಟ್ ಅನ್ನು ಕುತೂಹಲದ ಕಣ್ಣಿಂದ ನಿರುಕಿಸುತ್ತಿದ್ದ ಮಧ್ಯಮ ವರ್ಗದ ಜನರ ಆಸೆಗೆ ತಣ್ಣೀರೆರಚಿದಂತಾಗಿದೆಯಾ?
ಆದಾಯ ತೆರಿಗೆ ಮಿತಿ ಮತ್ತು ತೆರಿಗೆ ಸ್ಲಾಬ್ ನಲ್ಲಿ ಬದಲಾವಣೆಯಾಗಬಹುದು ಎಂಬ ನಿರೀಕ್ಷೆಯೂ ಸುಳ್ಳಾಗಿದೆ. 'ಆದಾಯ ತೆರಿಗೆ ನಿಯಮದಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆಗಳನ್ನು ತಂದಿದ್ದೇವೆ. ಆದ್ದರಿಂದ ಈ ಬಾರಿ ಇದರಲ್ಲಿ ಯಾವ ಬದಲಾವಣೆಯೂ ಇಲ್ಲ' ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿಬಿಟ್ಟಿದ್ದಾರೆ!
ಎಂಟು ರಾಜ್ಯಗಳ ಚುನಾವಣೆ, ಮುಂಬರುವ ಲೋಕಸಭಾ ಚುನಾವಣೆ ಯಾವುದನ್ನೂ ಗಮನದಲ್ಲಿಟ್ಟುಕೊಳ್ಳದೆ ಮಂಡನೆಯಾದ ಬಜೆಟ್ ತೀರಾ ನೀರಸ ಅನ್ನಿಸಿದೆಯಾ? ಹೌದೆನ್ನುತ್ತಾನೆ ಶ್ರೀಸಾಮಾನ್ಯ! ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಬಜೆಟ್ ಅನ್ನು ಕೆಲವರು ಹಾಸ್ಯ ಮಾಡಿದ್ದರೆ ಮತ್ತಷ್ಟು ಜನ ಕುಹಕದಿಂದ ಆಡಿಕೊಂಡಿದ್ದಾರೆ.
| Array |
ಉದ್ಯೋಗಿಗಳ ಪ್ರತಿಕ್ರಿಯೆ
ಈ ಬಜೆಟ್ ಬಗ್ಗೆ ವೇತನ ಪಡೆಯುವ ವರ್ಗದ ಪ್ರತಿಕ್ರಿಯೆ ಏನು ಎಂಬುದನ್ನು ಒಂದೇ ಚಿತ್ರದ ಮೂಲಕ ವಿವರಿಸಿದ್ದಾರೆ ಅಂಜಲಿ ಎ ಪಾಟೀಲ್. ನಾಯಿಯೊಂದು ಕೇವಲ ತಲೆಯಲ್ಲಾಡಿಸುತ್ತಿರುವ ಈ ದೃಶ್ಯ, ಬಜೆಟ್ ಕುರಿತ ಅಸಮಾಧಾನಕ್ಕೆ ಕನ್ನಡಿ ಎನ್ನಿಸಿದೆ.
|
ಬಜೆಟ್ ನೋಡಿದ ನಂತರ...
ಮಧ್ಯಮ ವರ್ಗದ ಜನರು ಬಜೆಟ್ ನೋಡಿದ ನಂತರ ನೀಡುವ ಪ್ರತಿಕ್ರಿಯೆ ಇದು ಎಂದು ವಿಡಿಯೋ ಜೊತೆ ವಿವರಿಸಿದ್ದಾರೆ ಮಾಸ್ಕ್ ಇಂಡಿಯನ್!
|
ಪ್ರಾಮಾಣಿಕ ತೆರಿಗೆದಾರನ ಪ್ರತಿಕ್ರಿಯೆ
ಬಜೆಟ್ ಭಾಷಣ ಕೇಳಿದ ನಂತರ ಪ್ರಾಮಾಣಿಕ ತೆರಿಗೆದಾರನ ಪ್ರತಿಕ್ರಿಯೆ ಇದು ಎಂದು ವಿಡಿಯೋ ಹಾಕಿದ್ದಾರೆ ಅರೋರಾ ಸಹಾಬ್.
|
ಬಜೆಟ್ ಮತ್ತು ಎಳನೀರು!
ಆದಾಯ ಬರುವುದು ಹೇಗೆ, ಸಾಮಾನ್ಯ ಜನರಿಗೆ ಸಿಗುವುದೆಷ್ಟು, ನಂತರ ಟ್ಯಾಕ್ಸ್ ಮೂಲಕ ಸರ್ಕಾರಕ್ಕೆ ಸಿಗುವುದೆಷ್ಟು ಎಂದು ಚಿತ್ರದ ಮೂಲಕ ವಿವರಿಸಿದ್ದಾರೆ ನಿತೀಶ್!
|
ಬಿಜೆಪಿ ಪ್ರತಿಕ್ರಿಯೆ
ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತಿದೆ ಬಿಜೆಪಿ ಪ್ರತಿಕ್ರಿಯೆ! ಸಂಪೂರ್ಣ ದೇಹ ನೀರಿನಲ್ಲಿ ಮುಳುಗಿದ್ದರೂ ಥಂಮ್ಸಪ್ ಎನ್ನುತ್ತಿರುವ ಚಿತ್ರ ಹಾಕಿ ಇದೇ ಬಿಜೆಪಿ ಪ್ರತಿಕ್ರಿಯೆ ಎಂದಿದ್ದಾರೆ ಅಮ್ಜಾದ್ ಹೈದರ್.
|
ಮಧ್ಯಮ ವರ್ಗದ ಜನರ ಪ್ರತಿಕ್ರಿಯೆ
ಬಜೆಟ್ ಭಾಷಣ ಕೇಳುತ್ತಿದ್ದಂತೆಯೇ ವೇತನ ಪಡೆಯುವ ಮಧ್ಯಮ ವರ್ಗದ ಜನರ ಪ್ರತಿಕ್ರಿಯೆ ಹೇಗಿತ್ತು ಎಂದು ವಿಡಯೋ ಸಮೇತ ವಿವರಿಸಿದ್ದಾರೆ ಭುವನ್!
|
ಬಿಜೆಪಿ ಬೆಂಬಲಿಗರ ಪ್ರತಿಕ್ರಿಯೆ
ಬಜೆಟ್ ಭಾಷಣದ ನಂತರ ಬಿಜೆಪಿ ಬೆಂಬಲಿಗರ ಪ್ರತಿಕ್ರಿಯೆ ಹೇಗಿರುತ್ತೆ ಎಂದು ವಿಡಿಯೋ ಮೂಲಕ ಹೇಳಿದ್ದಾರೆ ಬಿಪಿನ್ ರಾಂಜ್.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications