ಉಡ್ತಾ ಪಂಜಾಬ್ ಚಿತ್ರಕ್ಕೆ 89 ಕಟ್, ಸೆನ್ಸಾರಿಗೆ ಟ್ವೀಟ್ ಪೆಟ್ಟು
ಬೆಂಗಳೂರು, ಜೂನ್ 07: ನೈಜ ಕಥೆಗಳನ್ನು ಆಧಾರಿಸಿ ಸಿನಿಮಾ ನಿರ್ಮಿಸಿ, ನಿರ್ದೇಶಿಸುವ ಅನುರಾಗ್ ಕಶ್ಯಪ್ ಅವರಿಗೆ ನಿಜಕ್ಕೂ ಆಘಾತವಾಗಿದೆ. ಪಂಜಾಬಿನ ಡ್ರಗ್ ಮಾಫಿಯಾ ಸತ್ಯಾಸತ್ಯತೆ ಬಿಚ್ಚಿಡುವ 'ಉಡ್ತಾ ಪಂಜಾಬ್' ಚಿತ್ರಕ್ಕೆ 89ಕಟ್ ಗಳನ್ನು ಸೆನ್ಸಾರ್ ಮಂಡಳಿ ಹೇಳಿದೆ. ನಾವೇನು ಭಾರತದಲ್ಲಿದ್ದೇವಾ? ಅಥವಾ ಇದು ಉತ್ತರ ಕೊರಿಯಾನಾ? ಎಂದು ಕಶ್ಯಪ್ ಪ್ರಶ್ನಿಸಿದ್ದಾರೆ.
ಒಂದು ಚಿತ್ರದಲ್ಲಿ 89 ಸೀನ್ ಕಟ್ ಮಾಡುವುದೆಂದರೆ ಬಹುತೇಕ ಸಿನಿಮಾದ ಆಶಯವನ್ನೇ ಕೊಂದಂತೆ. ನಾನು ಉತ್ತರ ಕೊರಿಯಾದ ಸರ್ವಾಧಿಕಾರಿಯ ಆಡಳಿತದಲ್ಲಿದ್ದಂತೆ ಭಾಸವಾಗುತ್ತಿದೆ ಎಂದು ಅನುರಾಗ್ ಕಶ್ಯಪ್ ಪ್ರತಿಕ್ರಿಯಿಸಿದ್ದಾರೆ. [ಬೆಂಗ್ಳೂರು ಈಗ ಡ್ರಗ್ ಮಾಫಿಯಾ ಡೀಲ್ ಗೆ ತಂಗುದಾಣ!]

ಇದೆಲ್ಲವೂ ಆಡಳಿತರೂಢ ಬಿಜೆಪಿ-ಅಕಾಲಿದಳದ ಕುಮ್ಮಕ್ಕು, ಈ ಚಿತ್ರದಿಂದ ಪಂಜಾಬಿನ ಸಂಸ್ಕೃತಿ, ಘನತೆ ಹಾಳಾಗುತ್ತದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಅಸಲಿಗೆ ಹಾಳಾಗಿರುವ ಘನತೆ, ಗೌರವ ಬಗ್ಗೆ ಜನತೆಗೆ ಸಂದೇಶ ತಲುಪಿಸಲು ಈ ಚಿತ್ರ ಸಿದ್ಧವಾಗಿದೆ.
#UdtaPunjab:
— Dibang (@dibang) June 7, 2016
Punjab Udega; Udta Rahega
Punjabis spend Rs 7,500 crore annually on drugs. 1-in-3 college students are addicts: #AIIMS study
ಪಂಜಾಬಿನ ಯುವ ಪೀಳಿಗೆ ಡ್ರಗ್ಸ್ ಜಾಲದಲ್ಲಿ ಸಿಲುಕಿ ಹಾಳಾಗಿರುವುದನ್ನು ಏಮ್ಸ್ ಹಾಗೂ ಯುಎನ್ ವರದಿ ದೃಢಪಡಿಸಿದೆ. ಮಾದಕ ದ್ರವ್ಯ ಮಾರಾಟದಿಂದ ಕೋಟ್ಯಂತರ ರು ಅದಲು ಬದಲಾಗುತ್ತಿದೆ. [60 ಸಾವಿರ ಕೋಟಿ ದಂಧೆ]
ಇದೆಲ್ಲವನ್ನು ಬಹಿರಂಗಪಡಿಸಲು ಹೊರಟ ಚಿತ್ರ ತಂಡಕ್ಕೆ ಈಗ ಸೆನ್ಸಾರ್ ಮಂಡಳಿ ಈ ರೀತಿ ಆದೇಶ ನೀಡಿದೆ. ಚಿತ್ರದ ಶೀರ್ಷಿಕೆಯಿಂದ 'ಪಂಜಾಬ್' ತೆಗೆಯಿರಿ ಎನ್ನುವುದರಿಂದ ಹಿಡಿದು 89ಕ್ಕೂ ಅಧಿಕ ದೃಶ್ಯಗಳನ್ನು ತೆಗೆದು ಹಾಕಲು ಸೂಚಿಸಲಾಗಿದೆ.
I feel this entire decision of not allowing the word 'Punjab' in this film is highly condemnable: Ashoke Pandit, CBFC #UdtaPunjabCensored
— TIMES NOW (@TimesNow) June 7, 2016
ಸೆನ್ಸಾರ್ ಕಟ್ ವಿರುದ್ಧ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಸಾರ್ವಜನಿಕರು, ಸೆಲೆಬ್ರಿಟಿಗಳು ಕಿಡಿಕಾರಿದ್ದಾರೆ. #udtapm ಎಂದು ಟ್ಯಾಗ್ ಮಾಡಿ ವಿದೇಶಗಳಿಗೆ ಹಾರುವ ಮೋದಿ ವಿರುದ್ಧ ಕೂಡಾ ಟ್ವೀಟ್ಸ್ ಗಳು ಹರಿದು ಬಂದಿವೆ.
ಉಡ್ತಾ ಪಂಜಾಬ್ ಚಿತ್ರಕ್ಕೆಪೆಟ್ಟು, ಮೋದಿ ವಿರುದ್ಧವೂ ಟ್ವೀಟ್
ಉಡ್ತಾ ಪಂಜಾಬ್ ಒಂದು ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಏಕ್ತಾಕಪೂರ್ ಅವರ ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಿಸಿದೆ. ಅನುರಾಗ್ ಕಶ್ಯಪ್, ಸಮೀರ್ ನಾಯರ್ ಸೇರಿದಂತೆ ಅನೇಕರು ಸಹ ನಿರ್ಮಾಪಕರಾಗಿದ್ದಾರೆ.
ಚಿತ್ರಕ್ಕೆ ಕಥೆ ಬರೆದಿರುವ ಅಭಿಶೇಕ್ ಚೌಬೆ ಅವರು ನಿರ್ದೇಶನ ಕೂಡಾ ಮಾಡಿದ್ದಾರೆ. ಶಹೀದ್ ಕಪೂರ್, ಕರೀನಾ ಕಪೂರ್, ಆಲಿಯಾ ಭಟ್, ದಿಲ್ಜಿತ್ ದೊಸಾನ್ಜಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜೂನ್ 17ಕ್ಕೆ ಚಿತ್ರ ಬಿಡುಗಡೆಯಾಗಲು ಸಿದ್ಧವಾಗಿದೆ. ಯ್ಯೂಟ್ಯೂಬ್ ನಲ್ಲಿ ಈಗಾಗಲೇ ಚಿತ್ರದ ಟ್ರೈಲರ್ ಸೂಪರ್ ಹಿಟ್ (12,274,402 ಬಾರಿ ವೀಕ್ಷಣೆ)ಆಗಿದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications