ಉಡ್ತಾ ಪಂಜಾಬ್ ಚಿತ್ರಕ್ಕೆ 89 ಕಟ್, ಸೆನ್ಸಾರಿಗೆ ಟ್ವೀಟ್ ಪೆಟ್ಟು
ಬೆಂಗಳೂರು, ಜೂನ್ 07: ನೈಜ ಕಥೆಗಳನ್ನು ಆಧಾರಿಸಿ ಸಿನಿಮಾ ನಿರ್ಮಿಸಿ, ನಿರ್ದೇಶಿಸುವ ಅನುರಾಗ್ ಕಶ್ಯಪ್ ಅವರಿಗೆ ನಿಜಕ್ಕೂ ಆಘಾತವಾಗಿದೆ. ಪಂಜಾಬಿನ ಡ್ರಗ್ ಮಾಫಿಯಾ ಸತ್ಯಾಸತ್ಯತೆ ಬಿಚ್ಚಿಡುವ 'ಉಡ್ತಾ ಪಂಜಾಬ್' ಚಿತ್ರಕ್ಕೆ 89ಕಟ್ ಗಳನ್ನು ಸೆನ್ಸಾರ್ ಮಂಡಳಿ ಹೇಳಿದೆ. ನಾವೇನು ಭಾರತದಲ್ಲಿದ್ದೇವಾ? ಅಥವಾ ಇದು ಉತ್ತರ ಕೊರಿಯಾನಾ? ಎಂದು ಕಶ್ಯಪ್ ಪ್ರಶ್ನಿಸಿದ್ದಾರೆ.
ಒಂದು ಚಿತ್ರದಲ್ಲಿ 89 ಸೀನ್ ಕಟ್ ಮಾಡುವುದೆಂದರೆ ಬಹುತೇಕ ಸಿನಿಮಾದ ಆಶಯವನ್ನೇ ಕೊಂದಂತೆ. ನಾನು ಉತ್ತರ ಕೊರಿಯಾದ ಸರ್ವಾಧಿಕಾರಿಯ ಆಡಳಿತದಲ್ಲಿದ್ದಂತೆ ಭಾಸವಾಗುತ್ತಿದೆ ಎಂದು ಅನುರಾಗ್ ಕಶ್ಯಪ್ ಪ್ರತಿಕ್ರಿಯಿಸಿದ್ದಾರೆ. [ಬೆಂಗ್ಳೂರು ಈಗ ಡ್ರಗ್ ಮಾಫಿಯಾ ಡೀಲ್ ಗೆ ತಂಗುದಾಣ!]

ಇದೆಲ್ಲವೂ ಆಡಳಿತರೂಢ ಬಿಜೆಪಿ-ಅಕಾಲಿದಳದ ಕುಮ್ಮಕ್ಕು, ಈ ಚಿತ್ರದಿಂದ ಪಂಜಾಬಿನ ಸಂಸ್ಕೃತಿ, ಘನತೆ ಹಾಳಾಗುತ್ತದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಅಸಲಿಗೆ ಹಾಳಾಗಿರುವ ಘನತೆ, ಗೌರವ ಬಗ್ಗೆ ಜನತೆಗೆ ಸಂದೇಶ ತಲುಪಿಸಲು ಈ ಚಿತ್ರ ಸಿದ್ಧವಾಗಿದೆ.
#UdtaPunjab:
— Dibang (@dibang) June 7, 2016
Punjab Udega; Udta Rahega
Punjabis spend Rs 7,500 crore annually on drugs. 1-in-3 college students are addicts: #AIIMS study
ಪಂಜಾಬಿನ ಯುವ ಪೀಳಿಗೆ ಡ್ರಗ್ಸ್ ಜಾಲದಲ್ಲಿ ಸಿಲುಕಿ ಹಾಳಾಗಿರುವುದನ್ನು ಏಮ್ಸ್ ಹಾಗೂ ಯುಎನ್ ವರದಿ ದೃಢಪಡಿಸಿದೆ. ಮಾದಕ ದ್ರವ್ಯ ಮಾರಾಟದಿಂದ ಕೋಟ್ಯಂತರ ರು ಅದಲು ಬದಲಾಗುತ್ತಿದೆ. [60 ಸಾವಿರ ಕೋಟಿ ದಂಧೆ]
ಇದೆಲ್ಲವನ್ನು ಬಹಿರಂಗಪಡಿಸಲು ಹೊರಟ ಚಿತ್ರ ತಂಡಕ್ಕೆ ಈಗ ಸೆನ್ಸಾರ್ ಮಂಡಳಿ ಈ ರೀತಿ ಆದೇಶ ನೀಡಿದೆ. ಚಿತ್ರದ ಶೀರ್ಷಿಕೆಯಿಂದ 'ಪಂಜಾಬ್' ತೆಗೆಯಿರಿ ಎನ್ನುವುದರಿಂದ ಹಿಡಿದು 89ಕ್ಕೂ ಅಧಿಕ ದೃಶ್ಯಗಳನ್ನು ತೆಗೆದು ಹಾಕಲು ಸೂಚಿಸಲಾಗಿದೆ.
I feel this entire decision of not allowing the word 'Punjab' in this film is highly condemnable: Ashoke Pandit, CBFC #UdtaPunjabCensored
— TIMES NOW (@TimesNow) June 7, 2016
ಸೆನ್ಸಾರ್ ಕಟ್ ವಿರುದ್ಧ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಸಾರ್ವಜನಿಕರು, ಸೆಲೆಬ್ರಿಟಿಗಳು ಕಿಡಿಕಾರಿದ್ದಾರೆ. #udtapm ಎಂದು ಟ್ಯಾಗ್ ಮಾಡಿ ವಿದೇಶಗಳಿಗೆ ಹಾರುವ ಮೋದಿ ವಿರುದ್ಧ ಕೂಡಾ ಟ್ವೀಟ್ಸ್ ಗಳು ಹರಿದು ಬಂದಿವೆ.
ಉಡ್ತಾ ಪಂಜಾಬ್ ಚಿತ್ರಕ್ಕೆಪೆಟ್ಟು, ಮೋದಿ ವಿರುದ್ಧವೂ ಟ್ವೀಟ್
ಉಡ್ತಾ ಪಂಜಾಬ್ ಒಂದು ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಏಕ್ತಾಕಪೂರ್ ಅವರ ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಿಸಿದೆ. ಅನುರಾಗ್ ಕಶ್ಯಪ್, ಸಮೀರ್ ನಾಯರ್ ಸೇರಿದಂತೆ ಅನೇಕರು ಸಹ ನಿರ್ಮಾಪಕರಾಗಿದ್ದಾರೆ.
ಚಿತ್ರಕ್ಕೆ ಕಥೆ ಬರೆದಿರುವ ಅಭಿಶೇಕ್ ಚೌಬೆ ಅವರು ನಿರ್ದೇಶನ ಕೂಡಾ ಮಾಡಿದ್ದಾರೆ. ಶಹೀದ್ ಕಪೂರ್, ಕರೀನಾ ಕಪೂರ್, ಆಲಿಯಾ ಭಟ್, ದಿಲ್ಜಿತ್ ದೊಸಾನ್ಜಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜೂನ್ 17ಕ್ಕೆ ಚಿತ್ರ ಬಿಡುಗಡೆಯಾಗಲು ಸಿದ್ಧವಾಗಿದೆ. ಯ್ಯೂಟ್ಯೂಬ್ ನಲ್ಲಿ ಈಗಾಗಲೇ ಚಿತ್ರದ ಟ್ರೈಲರ್ ಸೂಪರ್ ಹಿಟ್ (12,274,402 ಬಾರಿ ವೀಕ್ಷಣೆ)ಆಗಿದೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ












Click it and Unblock the Notifications