ಸ್ಪೈಸ್ ಜೆಟ್ ವಿಮಾನದಲ್ಲಿ 737 ರುಪಾಯಿ ಆಫರ್
ಬೆಂಗಳೂರು, ನವೆಂಬರ್ 21: ಒಂದ್ಸಲ ವಿಮಾನದಲ್ಲಿ ಹೋಗಿ ಬರಬೇಕು. ಯಾವಾಗಲಾದರೂ ಒಳ್ಳೆ ಆಫರ್ ಬಂದಾಗ ಹೇಳ್ರಿ ಅಂತ ನೀವು ಯಾರಿಗಾದರೂ ಹೇಳಿದ್ದೀರಾ. ನಾವು ನಿಮಗೆ ತಿಳಿಸ್ತಿದೀವಿ ಸ್ಪೈಸ್ ಜೆಟ್ ನವರು ಅಂಥ ಒಳ್ಳೆ ಯೋಜನೆ ಪರಿಚಯಿಸಿದ್ದಾರೆ. ದೇಶದೊಳಗೆ ಹಾರಾಟ ನಡೆಸುವ ಆಯ್ದ ವಿಮಾನ ಯಾನಕ್ಕೆ 737 ರುಪಾಯಿ ಪ್ರಯಾಣ ದರ ನಿಗದಿಪಡಿಸಲಾಗಿದೆ.
ಈ ದರದಲ್ಲಿ ಟಿಕೆಟ್ ಬುಕ್ ಮಾಡಿದರೆ 2017ರ ಜನವರಿಯಿಂದ ಅಕ್ಟೋಬರ್ 28ರ ಮಧ್ಯೆ ಪ್ರಯಾಣ ಮಾಡಬಹುದು. ನಾಲ್ಕು ದಿನಗಳ ಈ ವಾರ್ಷಿಕ ಮಾರಾಟ ನವೆಂಬರ್ 24ರಿಂದ ಆರಂಭವಾಗುತ್ತದೆ. 500 ಕಿಲೋಮೀಟರ್ ಒಳಗಿನ ಪ್ರಯಾಣಕ್ಕೆ ಇದು ಅನ್ವಯಿಸುತ್ತದೆ. ಚೆನ್ನೈ-ಕೊಯಮತ್ತೂರು-ಚೆನ್ನೈ, ಜಮ್ಮು-ಶ್ರೀನಗರ-ಜಮ್ಮು, ಚಂಡಿಗಢ-ಶ್ರೀನಗರ-ಚಂಡಿಗಢ ಮತ್ತು ಅಗರ್ತಲ-ಗುವಾಹತಿ ಮಧ್ಯದ ಪ್ರಯಾಣ ಇದರಲ್ಲಿ ಒಳಗೊಂಡಿದೆ.[ಐದು ಅತ್ಯುತ್ತಮ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ]

ಈ ಮಾರಾಟ ಕೊಡುಗೆಯ ಟಿಕೆಟ್ ಗಳನ್ನು www.spicejet.com, ಆನ್ ಲೈನ್ ಟ್ರಾವೆಲ್ ಪೋರ್ಟಲ್ ಗಳು, ಸ್ಪೈಸ್ ಜೆಟ್ ಮೊಬೈಲ್ ಅಪ್ಲಿಕೇಷನ್, ವಿಮಾನ ನಿಲ್ದಾಣ ಕಚೇರಿಗಳು ಹಾಗೂ ಟ್ರಾವೆಲ್ ಏಜೆಂಟ್ ಮೂಲಕ ಬುಕ್ ಮಾಡಬಹುದು. ಸ್ಪೈಸ್ ಜೆಟ್ ಅದರ ವಿಮಾನ ನಿಲ್ದಾಣ ಕೌಂಟರ್ ಗಳಲ್ಲಿ ನವೆಂಬರ್ 24ರವರೆಗೆ 500, 1000 ನೋಟುಗಳನ್ನು ಸ್ವೀಕರಿಸುತ್ತದೆ.[ಏರ್ ಇಂಡಿಯಾದಲ್ಲೂ ನಿಮಗೆ ಬೇಕಾದ ಊಟ ಆರ್ಡರ್ ಮಾಡಿ]
ಅದರೆ, ಸರಕಾರಿ ನಿಯಮದ ಪ್ರಕಾರ ಅಂಥ ಬುಕಿಂಗ್ ಗಳನ್ನು ಬದಲಾಯಿಸಿಕೊಳ್ಳುವುದಕ್ಕೂ ಆಗಲ್ಲ, ಕ್ಯಾನ್ಸಲ್ ಮಾಡುವುದಕ್ಕೂ ಆಗಲ್ಲ. ಅಂದಹಾಗೆ 737 ರುಪಾಯಿ ಒಂದು ಕಡೆಯ ಪ್ರಯಾಣಕ್ಕೆ ಎಲ್ಲವನ್ನೂ ಒಳಗೊಂಡ ಪ್ರಯಾಣ ದರ. ಈ ಕೊಡುಗೆ ನವೆಂಬರ್ 24ರವರೆಗೆ ಇರುತ್ತದೆ.
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್












Click it and Unblock the Notifications