ಭಾರತದಲ್ಲಿ ಎಲ್ಲರೂ ಶಾಕಾಹಾರಿಗಳಾಗಬೇಕೇ? : ಸುಪ್ರೀಂ ಪ್ರಶ್ನೆ
Recommended Video
ನವದೆಹಲಿ, ಅಕ್ಟೋಬರ್ 12: ದೇಶದೆಲ್ಲೆಡೆ ಮಾಂಸಾಹಾರ ಸೇವನೆ, ಮಾಂಸ ಉತ್ಪನ್ನಗಳ ಬಳಕೆ ಹೆಚ್ಚಳವಾಗಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ, ಮಾಂಸ ಸೇವೆನೆ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ.
ಈ ಅರ್ಜಿ ವಿಚಾರಣೆ ವೇಳೆ, ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳು 'ಭಾರತದಲ್ಲಿ ಎಲ್ಲರೂ ಶಾಖಾಹಾರಿಗಳಾಗಬೇಕೆ?' ಎಂದು ಪ್ರಶ್ನಿಸಿದ್ದಾರೆ.
ಆರೋಗ್ಯ ಇಲಾಖೆಯ ಟ್ವೀಟ್ ಅವಾಂತರಕ್ಕೆ ತಪರಾಕಿ
ನ್ಯಾಯಮೂರ್ತಿ ಮದನ್ ಲೊಕೂರ್ ಅವರಿದ್ದ ನ್ಯಾಯಪೀಠದ ಮುಂದೆ ಇಂಥದ್ದೊಂದು ವಿಚಾರಣೆ ನಡೆದಿದೆ. 'ದೇಶದಲ್ಲಿ ಎಲ್ಲರೂ ಸಸ್ಯಾಹಾರವನ್ನೇ ಸೇವಿಸಬೇಕು, ಮಾಂಸವನ್ನು ತ್ಯಜಿಸಬೇಕು' ಎಂಬ ಆದೇಶವನ್ನು ನಾವು ನೀಡಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಮದನ್ ಹೇಳಿದ್ದಾರೆ.
ಅಕ್ರಮ ಗೋ ಮಾರಾಟ ಹಾಗೂ ಹತ್ಯೆ ವಿರುದ್ಧ ಸರ್ಕಾರ ನೀಡಿದ್ದ ಆದೇಶವನ್ನು ನ್ಯಾಯಪೀಠವು ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಜಾನುವಾರಗಳನ್ನು ಕೃಷಿ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು ಎಂದು ನಿರ್ಬಂಧ ಹೇರಲು ಮುಂದಾಗಿದ್ದ ಸರ್ಕಾರಕ್ಕೆ ಹಿನ್ನಡೆಯಾಗಿತ್ತು.
ಗೋ ಹತ್ಯೆ ಹೆಸರಲ್ಲಿಕೊಲೆ: ಜಾರ್ಖಂಡ್ ನಲ್ಲಿ 11 ಜನರಿಗೆ ಜೀವಾವಧಿ ಶಿಕ್ಷೆ
ಈಗ ಆಹಾರ ಪದ್ಧತಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆದಿದ್ದು, ಜನರ ಜೀವನ ಕ್ರಮ, ಆಹಾರ ಕ್ರಮವನ್ನು ಈ ರೀತಿ ಆದೇಶಗಳಿಂದ ಬದಲಾಯಿಸಲಾಗದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.