ಟಿಕೆಟ್ ದರ ಕಡಿತ : ಈಗ ಜೆಟ್, ಇಂಡಿಗೋ ಸರದಿ
ನವದೆಹಲಿ, ಜ. 14: ಖಾಸಗಿ ವಿಮಾನಯಾನ ಸಂಸ್ಥೆಗಳು ಎಷ್ಟೇ ನಷ್ಟದಲ್ಲಿರಲಿ, ದರ ಕಡಿತ ಸ್ಪರ್ಧೆಯಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಸರ್ಕಾರಿ ಸ್ವಾಮಿತ್ವದ ಏರ್ ಇಂಡಿಯಾ ಟಿಕೆಟ್ ಶುಲ್ಕದಲ್ಲಿ ಶೇ. 50ರಷ್ಟು ಕಡಿತ ಮಾಡಿದ ಮೇಲೆ ಇಂಡಿಗೋ ಮತ್ತು ಜೆಟ್ ಏರ್ವೇಯ್ಸ್ ಕೂಡ ದರ ಕಡಿತ ಮಾಡಿವೆ.
ಏರ್ ಇಂಡಿಯಾ ಟಿಕೆಟ್ ಶುಲ್ಕ 1,557 ರು.ಗಳಿಂದ ಆರಂಭವಾಗುತ್ತದೆ. ಈಗ ಮುಂಬೈ- ನವದೆಹಲಿ ಪ್ರಯಾಣ ದರ ಕೇವಲ 2,958 ರು. (ಮೊದಲು 6,000 ರು.ಗಳಿಂದ 9,000 ರು. ಇತ್ತು), ನವದೆಹಲಿ - ಬೆಂಗಳೂರು ಪ್ರಯಾಣಕ್ಕೆ 1,800 ರು. ನೀಡಬೇಕು. ನವದೆಹಲಿ - ಲಕ್ನೋ ಮತ್ತು ನವದೆಹಲಿ - ಇಂದೋರ್ಗೆ 1,558 ರು. ಪ್ರಯಾಣ ದರವಿದೆ.
ಏರ್ ಇಂಡಿಯಾ ವಿನಾಯಿತಿ ಘೋಷಿಸಿದ ಮೇಲೆ ಜೆಟ್ ಏರ್ವೇಯ್ಸ್ ಮತ್ತು ಇಂಡಿಗೋ ಕೂಡ ದೇಶೀಯ ಟಿಕೆಟ್ ದರ ಕಡಿತಗೊಳಿಸಿವೆ. ಜೆಟ್ ಏರ್ವೇಯ್ಸ್ ಕೂಡ ಟಿಕೆಟ್ ಆರಂಭಿದ ದರವನ್ನು 1,557 ರು.ಗಳಿಗೆ ನಿಗದಿಪಡಿಸಿದೆ. ಈ ಲಾಭ ಪಡೆಯಲು ಮುಂದಿನ ಸೋಮವಾರದೊಳಗೆ ಟಿಕೆಟ್ ಬುಕ್ ಮಾಡಬೇಕು. ಜನವರಿ 16ರಿಂದ ಏಪ್ರಿಲ್ 15ರೊಳಗಿನ ಪ್ರಯಾಣಿಗಳಿಗೆ ಈ ದರ ಅನ್ವಯಿಸುತ್ತದೆ. [ಏರ್ ಇಂಡಿಯಾ ಟಿಕೆಟ್ ಕನಿಷ್ಠ ದರ 1,557 ರು.]

ಇಂಡಿಗೋ ಕನಿಷ್ಠ ದರ 1,647 ರು. : ಪ್ರಸ್ತುತ ದೇಶೀಯ ಪ್ರಯಾಣದಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆಯು ಅತಿ ಹೆಚ್ಚು ಪಾಲು ಹೊಂದಿದೆ. ಆದರೆ, ದರ ಸಮರಕ್ಕಿಳಿದಿದ್ದರೂ ಏರ್ ಇಂಡಿಯಾ ಹಾಗೂ ಜೆಟ್ಗೆ ಹೋಲಿಸಿದರೆ ಕನಿಷ್ಠ ದರವನ್ನು 90 ರು. ಹೆಚ್ಚು ಅಂದರೆ 1,647 ರು.ಗಳಿಗೆ ನಿಗದಿಪಡಿಸಿದೆ. ಈ ಯೋಜನೆಯಡಿ ನವದೆಹಲಿ-ಲಕ್ನೋ ಪ್ರಯಾಣ ದರ 1,647 ರು., ನವದೆಹಲಿಯಿಂದ ಮುಂಬೈಗೆ 3,051 ರು., ಕೋಲ್ಕೊತಾಗೆ 3,906 ರು., ಚೆನ್ನೈಗೆ 4,273 ರು. ಹಾಗೂ ಅಹಮದಾಬಾದ್ಗೆ 3,005 ರು. ನಿಗದಿಪಡಿಸಲಾಗಿದೆ. [ಗಗನಸಖಿಯರಿಗೆ ನೆಲ ತೋರಿದ ಏರ್ ಇಂಡಿಯಾ]
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಯಾಣಕ್ಕೆ ಸಂಬಂಧಿಸಿದ Yatra.com ವೆಬ್ ಸೈಟ್ ಅಧ್ಯಕ್ಷ ಶರತ್ ಧಾಲ್, "ಮುಂದಿನ ಕೆಲವು ತಿಂಗಳುಗಳ ವಾರದ ಕೊನೆಯಲ್ಲಿ ದೀರ್ಘ ರಜೆಗಳಿವೆ. ಅಲ್ಲದೆ, ಬೇಸಿಗೆ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಏರ್ ಇಂಡಿಯಾ ದರ ಕಡಿತ ಮಾಡಿತ್ತು. ಆದ್ದರಿಂದ ಖಾಸಗಿ ವಿಮಾನಯಾನ ಸಂಸ್ಥೆಗಳೂ ಅನಿವಾರ್ಯವಾಗಿ ದರ ಕಡಿತಕ್ಕೆ ಮುಂದಾಗಿವೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಟಿಕೆಟ್ ಬುಕಿಂಗ್ 4 ಪಟ್ಟು ಹೆಚ್ಚಳ : "ಗಣರಾಜ್ಯೋತ್ಸವ, ಪ್ರೇಮಿಗಳ ದಿನ, ಹೋಳಿ ಮತ್ತು ಈಸ್ಟರ್ ಹಬ್ಬಗಳು ವಾರದ ಕೊನೆ ಅಥವಾ ಆರಂಭದಲ್ಲಿ ಬಂದಿವೆ. ಇದೇ ಸಂದರ್ಭದಲ್ಲಿ ಹೆಚ್ಚುಕಡಿಮೆ ಶೇ. 35ರಷ್ಟು ಟಿಕೆಟ್ ದರ ಕಡಿತ ಮಾಡಿರುವ ಕಾರಣ ನಮ್ಮ ವೆಬ್ ಸೈಟ್ನಲ್ಲಿ ಶೇ. 400ರಷ್ಟು ಟಿಕೆಟ್ ಬುಕಿಂಗ್ ಪ್ರಮಾಣ ಹೆಚ್ಚಳಗೊಂಡಿದೆ" ಎಂದು ತಿಳಿಸಿದ್ದಾರೆ. [ದುಬೈ ಪ್ರವಾಸದ ಪ್ಯಾಕೇಜ್]
ಪ್ರತಿ ವರ್ಷ ಸಾಮಾನ್ಯವಾಗಿ ಜನವರಿಯಿಂದ ಏಪ್ರಿಲ್ ಹಾಗೂ ಜುಲೈದಿಂದ ಸೆಪ್ಟೆಂಬರ್ ತಿಂಗಳುಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಸೀಟ್ಗಳನ್ನು ಭರ್ತಿ ಮಾಡಿಕೊಳ್ಳಲು ವಿಮಾನಯಾನ ಸಂಸ್ಥೆಗಳು ದರ ಕಡಿತ ಘೋಷಿಸುತ್ತವೆ ಎಂದು ವಿಮಾನಯಾನ ಸಂಸ್ಥೆಯೊಂದರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications