ಕರ್ನಾಟಕದಲ್ಲಿ ಕ್ಷೀಣಗೊಂಡ ಮುಂಗಾರು ಮಳೆ, ದೇಶದ ಇತರೆಡೆ ಜೋರು
ಬೆಂಗಳೂರು, ಜೂನ್ 24: ಬಂಗಾಳ ಕೊಲ್ಲಿಯತ್ತ ಮುಂಗಾರು ಮಾರುತಗಳು ಸಾಗುತ್ತಿದ್ದು, ಕರ್ನಾಟಕದ ಕರಾವಳಿ, ಮಲೆನಾಡು ಬಿಟ್ಟು ಉಳಿದೆಡೆ ಮುಂಗಾರು ಕ್ಷೀಣಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉಳಿದಂತೆ ದೇಶದ ಇತರೆಡೆ ಮುಂಗಾರು ಜೋರಾಗಲಿದೆ. ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ ಒಡಿಶಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನಿರೀಕ್ಷಿತವಾಗಿದೆ.

ಅರಬ್ಬೀಸಮುದ್ರದ ಕಡೆ ಕೂಡಾ ನೈಋತ್ಯ ಮಾರುತಗಳ ಸಾಗಾಟ ಕಂಡು ಬಂದಿದ್ದು, ಮಹಾರಾಷ್ಟ್ರ, ಗುಜರಾತಿನ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ. ವಲ್ಸದ್, ಮಲೇಂಗಾವ್, ಅಮರವಾತಿ, ಗೋಂಡಿಯಾ, ತಿತ್ಲಾಘರ್, ಕಟಕ್, ಮಿಡ್ನಾಪುರ್, ಗೋಲ್ಪಾರ, ಭಾಗ್ಡೋಗ್ರಾದಲ್ಲಿ ಮಳೆಯಾಗಲಿದೆ.
ಮುಂದಿನ ಎರಡು ಹಾಗೂ ಮೂರು ದಿನಗಳಲ್ಲಿ ಪಶ್ಚಿಮ ಬಂಗಾಳ, ಛತ್ತೀಸ್ ಗಢ, ಒಡಿಶಾ, ದಕ್ಷಿಣ ಸೌರಾಷ್ಟ್ರದ ಕೆಲ ಭಾಗ, ಜಾರ್ಖಂಡ್, ಬಿಹಾರ ಹಾಗೂ ಮಧ್ಯಪ್ರದೇಶಗಳಲ್ಲಿ ನೈಋತ್ಯ ಮಳೆ ಮಾರುತಗಳಿಂದ ಮಳೆ ಸುರಿಯಲಿದೆ.

ಭಾರಿ ಮಳೆ: ಪಶ್ಚಿಮ ಬಂಗಾಳ, ಸಿಕ್ಕಿಂನ ಹಿಮಾಲಯ ಪ್ರದೇಶ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಮ್, ತ್ರಿಪುರ, ಕೊಂಕಣ ಹಾಗೂ ಗೋವಾ ಮತ್ತು ವಿದರ್ಭದ ಕೆಲವು ಕಡೆ ಭಾರಿ ಮಳೆ ನಿರೀಕ್ಷಿಸಬಹುದು.
ಆಂಧ್ರಪ್ರದೇಶದ ಕರಾವಳಿ,ತೆಲಂಗಾಣ, ರಾಯಸೀಮಾ, ತಮಿಳುನಾಡು ಹಾಗೂ ಪುದುಚೇರಿಗಳಲ್ಲಿ ಗುಡುಗು, ಮಿಂಚು ಸಹಿತ ಮಹಿಳೆ ಬೀಳಲಿದೆ ಎಂದು ವರದಿ ಸಿಕ್ಕಿದೆ.












Click it and Unblock the Notifications