ಲಾಲೂಜಿ ಒಬ್ಬ ಹೀರೋ, ಹೀರೋ ಆಗೇ ಇರ್ತಾರೆ!
ಪಟ್ನಾ, ಅ. 3 : "ಲಾಲೂಜಿ ಒಬ್ಬ ಹೀರೋ, ಅವರು ಹೀರೋ ಆಗಿಯೇ ಇರುತ್ತಾರೆ. ಬಡವರಿಗಿಂತ ಬಡವರ, ತುಳಿತಕ್ಕೊಳಗಾದವರ, ಜಾತ್ಯತೀತವಾದದ ಚಾಂಪಿಯನ್ ಅವರಾಗಿದ್ದು, ಬಿಹಾರ ಮಾತ್ರವಲ್ಲ, ಇಡೀ ದೇಶದ ಮತ್ತು ಇಡೀ ಜಗತ್ತಿನ ಜನರೆಲ್ಲರೂ ಅವರನ್ನು ಇಂದಿಗೂ ಪ್ರೀತಿಸುತ್ತಾರೆ..."
ಹೀಗೆಂದು ಹೇಳಿದ್ದು ಮತ್ತಾರೂ ಅಲ್ಲ, 950 ಕೋಟಿ ರು. ಮೇವು ಹಗರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಧರ್ಮಪತ್ನಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರು.

ಲಾಲೂ ಅವರಿಗೆ ಈ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಭಾವುಕರಾಗಿ ಮೇಲಿನಂತೆ ನುಡಿದಿರುವ ರಾಬ್ಡಿ ದೇವಿ ಅವರು, "ಲಾಲೂ ಅವರ ವಿರುದ್ಧ ಯಾವುದೇ ಸಾಕ್ಷಿ ಇಲ್ಲ. ರಾಜಕೀಯ ಷಡ್ಯಂತ್ರದ ಬಲಿಪಶು ಅವರಾಗಿದ್ದಾರೆ. ಲಾಲೂಜಿ ಅವರು ಹೀರೋ ಆಗಿರದೇ ಇದ್ದರೆ ಮಾಧ್ಯಮ ಅವರ ಮೇಲೆ ಏಕಿಷ್ಟು ಗಮನ ಹರಿಸಬೇಕಿತ್ತು" ಎಂದು ಪ್ರಶ್ನಿಸಿದ್ದಾರೆ.
"ಅವರ ಬಂಧನದಿಂದ ನಾನು ಮಾತ್ರ ದುಃಖಿಯಾಗಿಲ್ಲ, ಇಡೀ ದೇಶವೇ ದುಃಖಿಯಾಗಿದೆ. ಅವರ ವಿರುದ್ಧ ಒಂದೇ ಒಂದು ಸಾಕ್ಷಿ ಇರುವುದನ್ನು ತೋರಿಸಿ ನೋಡೋಣ" ಎಂದು ಭಾವುಕರಾಗಿ ಸವಾಲು ಎಸೆದಿದ್ದಾರೆ ರಾಬ್ಡಿ ದೇವಿ. ಲಾಲೂ ಜೈಲು ಸೇರಿರುವುದರಿಂದ ರಾಬ್ಡಿ ದೇವಿ ಮೇಲೆ ರಾಷ್ಟ್ರೀಯ ಜನತಾದಳದ ಭಾರ ಹೊರುವ ಬವಾಬ್ದಾರಿ ಬಿದ್ದಿದೆ.
ಪೊಲೀಸರು ಮತ್ತು ಸಿಬಿಐನವರು ನನ್ನ ಮನೆ, ನನ್ನ ಸಂಬಂಧಿಗಳ ಮನೆ ಹುಡುಕಾಡಿ ಜಾಲಾಡಿದರು. ಅವರಿಗೆ ಮೇವು ಹಗರಣಕ್ಕೆ ಸಂಬಂಧಿಸಿದ ಯಾವುದೇ ಹಣ ಸಿಕ್ಕಿತಾ? ಲಾಲೂ ಅವರಿಗೆ ನ್ಯಾಯ ದೊರಕಿಸಿಕೊಡಲು ನಾನು ಹೈಕೋರ್ಟ್ ಮತ್ತು ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇನೆ ಎಂದು ನುಡಿದರು.
ರಾಜಕೀಯ ಷಡ್ಯಂತ್ರ ನಡೆಸಿದ್ದು ಯಾರು ಎಂದು ಪ್ರಶ್ನಿಸಿದಾಗ, ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದ ಅವರು, ಮೇವು ಹಗರಣದಲ್ಲಿ ನಿತಿಶ್ ಕುಮಾರ್ ಅವರು ಕೂಡ ಹಣ ಪಡೆದಿದ್ದಾರೆ ಎಂದು ಹೇಳಿದರು. ಅಲ್ಲದೆ, ಲಾಲೂ ಅವರು ಎಲ್ಲೇ ಇರಲಿ, ಅಲ್ಲಿಂದಲೇ ಪಕ್ಷವನ್ನು ನಡೆಸುತ್ತಾರೆ ಎಂದು ನುಡಿದರು.
ಲಾಲೂ ಅವರನ್ನು ಹೀರೋ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಅವರು, ಹೀರೋ ಆಗಿರುವ ಲಾಲೂ ಪ್ರಸಾದ್ ಯಾದವ್ ಅವರು ಅನೇಕ ಜೀರೋಗಳನ್ನು (ಹಲವು ಕೋಟಿಗಳ ಮೇವು ಹಗರಣ) ಕದ್ದಿದ್ದಾರೆ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
(Indeed. But the hero stole many zeros)@EconomicTimes: Lalu Prasad is a hero and will remain a hero, says Rabri Devi http://t.co/OYPDAIFzTs”
— Kiran Bedi (@thekiranbedi) October 3, 2013
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications