ಗಂಡು ಮಗು ಬೇಕಿದ್ದರೆ ದನದ ಮಾಂಸ ತಿನ್ನಬೇಕಂತೆ!
ಏನೇ ಆದರೂ ಗಂಡುಮಗು ಇರಬೇಕು ಬಿಡ್ರೀ ಅನ್ನೋ ಮಾತೆಲ್ಲ ಯಾವುದೋ ಜಮಾನಕ್ಕೆ ಮುಗಿದುಹೋಯಿತು ಅಂದುಕೊಳ್ಳೋ ಹಾಗಿಲ್ಲ. ಏಕೆಂದರೆ ಮಲಯಾಳಂ ಪತ್ರಿಕೆಯೊಂದು ಗಂಡು ಮಕ್ಕಳೇ ಆಗಬೇಕೆಂದರೆ ಹೀಗೆ ಹೀಗೆ ಮಾಡಿ ಅಂತ ಸಲಹೆಗಳನ್ನೂ ಕೊಟ್ಟಿದೆ.
ತಿರುವನಂತಪುರಂ, ಡಿಸೆಂಬರ್ 15: ದನದ ಮಾಂಸ ತಿನ್ನಿರಿ, ದಿನ ಬಿಟ್ಟು ದಿನ ಸಂಭೋಗ ನಡೆಸಿ, ಮಲಗುವಾಗ ಆಕೆ ಎಡಭಾಗಕ್ಕೆ ಉತ್ತರ ದಿಕ್ಕಿಗೆ ಮುಖ ಮಾಡಿರುವಂತೆ ತಿಳಿಸಿ...ಸಲಹೆ ಹೀಗೆ ಸಾಗುತ್ತದೆ. ಇದು ಮಲಯಾಳಂನ ಮಂಗಳ ಎಂಬ ಪತ್ರಿಕೆ ನೀಡಿರುವ ಸಲಹೆ. ಏಕಿಂಥ ಸಲಹೆ ಅಂತೀರಾ? ಈ ಸಲಹೆ ಅನುಸರಿಸಿದರೆ ಗಂಡು ಮಕ್ಕಳು ಅಗುವ ಸಾಧ್ಯತೆ ಹೆಚ್ಚಂತೆ.
ಮಂಗಳಂ ಎಂಬ ನಿಯತಕಾಲಿಕೆ ಡಿಸೆಂಬರ್ 11ರಂದು "ನಿಮಗೆ ಗಂಡು ಮಗು ಬೇಕೆ? ಇಲ್ಲಿವೆ ಕೆಲ ಸಲಹೆಗಳು" ಎಂಬ ಶೀರ್ಷಿಕೆಯಡಿ ಪ್ರಕಟಿಸಿದ ಲೇಖನ ವಿಪರೀತ ಚರ್ಚೆಗೆ ಕಾರಣವಾಗಿದೆ. ಪೋಷಕರು ಗಂಡುಮಕ್ಕಳು ಜನಿಸಲಿ ಎಂದು ಪ್ರಾಶಸ್ತ್ಯ ನೀಡೋದು ಒಂದು ಕಡೆಯಾಯಿತು.[ಪುಟ್ಟ ಮಕ್ಕಳಿಗೆ ಸ್ತನ್ಯಪಾನ ಮಾಡಿಸಿದ ದಿಟ್ಟ ತಾಯಂದಿರು]
ಅದರಲ್ಲೂ ಭಾರತ ಸೇರಿದಂತೆ ಏಷ್ಯಾ ಖಂಡದ ದೇಶಗಳಲ್ಲಿ ಈ ರೀತಿ ಪ್ರಾಶಸ್ತ್ಯದ ಕಾರಣಕ್ಕೆ ಹೆಣ್ಣುಮಕ್ಕಳ ಮೇಲಿನ ಹಿಂಸಾಚಾರ ಪ್ರಕರಣಗಳು ಹೆಚ್ಚು. ಹೆಣ್ಣುಮಕ್ಕಳ ಲಿಂಗಾನುಪಾತ ಹೆಚ್ಚಿರುವ ಕೇರಳದಲ್ಲೇ ನಿಯತಕಾಲಿಕೆಯೊಂದು ಇಂಥ ಲೇಖನ ಪ್ರಕಟಿಸಿದೆ. ಗಂಡುಮಗುವನ್ನೇ ಪಡೆಯಬೇಕು ಅಂದುಕೊಳ್ಳೋರಿಗೆ ಆರು ಸಲಹೆ ಕೊಟ್ಟಿದೆ.

ಗಂಡುಮಗು ಯಾರಿಗೆ ಬೇಡ ಹೇಳಿ. ಆದರೆ ಅದನ್ನು ನಿರ್ಧರಿಸುವುದು ಹೇಗೆ? ಆದರೂ ಗಂಡುಮಗುವೇ ಬೇಕು ಅಂದುಕೊಳ್ಳುವವರು ಇಲ್ಲಿನ ಸಲಹೆಗಳನ್ನು ಅನುಸರಿಸಿದರೆ ಗಂಡು ಮಗು ಪಡೆಯಬಹುದು. ಹಾಗಂತ ನೂರು ಪರ್ಸೆಂಟ್ ಖಾತ್ರಿ ನೀಡುವುದಿಕ್ಕೆ ಅಗದಿರಬಹುದು. ಆದರೆ ಇವು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಆ ಲೇಖನ ಆರಂಭವಾಗುತ್ತದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications