Get Updates
Get notified of breaking news, exclusive insights, and must-see stories!

ಡಿ.ಕೆ. ಶಿವಕುಮಾರ್ ಕಾಂಗ್ರೆಸ್‌ನ ಎಟಿಎಂ: ಸಂಬಿತ್ ಪಾತ್ರಾ ಆರೋಪ

ನವದೆಹಲಿ, ಸೆಪ್ಟೆಂಬರ್ 19: ಕರ್ನಾಟಕದ ರಾಜ್ಯ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಎಐಸಿಸಿಯ ಎಟಿಎಂ ಇದ್ದಂತೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಆರೋಪಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಆಪ್ತರಾಗಿರುವ ಕರ್ನಾಟಕ ಭವನದ ಸಿಬ್ಬಂದಿ ಆಂಜನೇಯ ಆದಾಯ ತೆರಿಗೆ ಇಲಾಖೆಯ ವಿಚಾರಣೆ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಪಾತ್ರಾ ಸುದ್ದಿಗೊಷ್ಠಿಯಲ್ಲಿ ಹೇಳಿದ್ದಾರೆ.

2017ರಲ್ಲಿ ಐಟಿ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಕರ್ನಾಟಕದಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿಯೇ ದೆಹಲಿಯಲ್ಲಿಯೂ ದಾಳಿ ನಡೆಸಲಾಗಿತ್ತು. ಆಗ ಮಹತ್ವಪೂರ್ಣ ದಾಖಲೆಗಳು ದೊರೆತಿದ್ದವು. ಈ ಸಂಬಂಧ ಐಟಿ ಮತ್ತು ಇಡಿಗಳು ಪ್ರತ್ಯೇಕವಾಗಿ ಡಿ.ಕೆ. ಶಿವಕುಮಾರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದವು.

ಐಟಿ ಇಲಾಖೆ ದಾಖಲಿಸಿದ್ದ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಇತರೆ ಐವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

ಡಿ.ಕೆ.ಶಿ ಆಪ್ತರ ತಪ್ಪೊಪ್ಪಿಗೆ

ಡಿ.ಕೆ.ಶಿ ಆಪ್ತರ ತಪ್ಪೊಪ್ಪಿಗೆ

ಡಿ.ಕೆ. ಶಿವಕುಮಾರ್ ಅವರ ಆಪ್ತರಾಗಿರುವ ಇಬ್ಬರು ವ್ಯಕ್ತಿಗಳ ನಿವಾಸದ ಮೇಲೆಯೂ ದಾಳಿ ನಡೆದಿತ್ತು. ಅದರಲ್ಲಿ ಒಬ್ಬರು ದೆಹಲಿಯ ಕರ್ನಾಟಕ ಭವನದ ನೌಕರನಾಗಿದ್ದ ಆಂಜನೇಯ ಹನುಮಂತಯ್ಯ, ಮತ್ತೊಬ್ಬರು ರಾಜೇಂದ್ರ.

ಡಿ.ಕೆ. ಶಿವಕುಮಾರ್ ಅವರಿಗೆ ಸಹಾಯ ಮಾಡಲೆಂದೇ ಆಂಜನೇಯ ಅವರನ್ನು ಕರ್ನಾಟಕ ಸರ್ಕಾರ ನಿಯೀಜನೆ ಮಾಡುತ್ತಿತ್ತು. ಆಂಜನೇಯ, ಡಿ.ಕೆ. ಶಿವಕುಮಾರ್ ಅವರಿಂದ ಪಡೆದ ಹಣವನ್ನು ಚಾಂದಿನಿ ಚೌಕ್‌ನಿಂದ ಎಐಸಿಸಿ ಕಚೇರಿಗೆ ಸಾಗಿಸುತ್ತಿದ್ದರು. ಮತ್ತೊಬ್ಬ ಅಧಿಕಾರಿ ರಾಜೇಂದ್ರ ಸಹ ಕಚೇರಿಗೆ ಹಣ ತಂದಿದ್ದರು. ರಾಜೇಂದ್ರ ಹಣ ತಂದಾಗ ಜಗದೀಶ್ ಚಾಂದ್ ಕೂಡ ಜತೆಗಿದ್ದ ಎಂದು ಪಾತ್ರಾ ವಿವರಿಸಿದ್ದಾರೆ.

ಸಫ್ದರ್ ಜಂಗ್‌ನಲ್ಲಿರುವ ಫ್ಲ್ಯಾಟ್

ಸಫ್ದರ್ ಜಂಗ್‌ನಲ್ಲಿರುವ ಫ್ಲ್ಯಾಟ್

ಎಐಸಿಸಿಗೆ ಅಂದಾಜು ನಾಲ್ಕು ಕೋಟಿ ರೂ. ನೀಡಿರುವುದಾಗಿ ಆಂಜನೇಯ ಐಟಿ ವಿಚಾರಣೆ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ನಾನು ಡಿ.ಕೆ. ಶಿವಕುಮಾರ್ ಅವರ ನಂಬಿಕೆಯ ವ್ಯಕ್ತಿ. ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ಬಂದಾಗ ಅವರ ಜತೆಯೇ ಇರುತ್ತಿದ್ದೆ. ಸೂಕ್ತ ವ್ಯಕ್ತಿಯಿಂದ ಹಣ ಸಂಗ್ರಹಿಸಿ ಅದನ್ನು ಸಫ್ದರ್ ಜಂಗ್‌ನಲ್ಲಿರುವ ಶಿವಕುಮಾರ್ ಅವರ ಫ್ಲ್ಯಾಟ್‌ನಲ್ಲಿ ಇರಿಸುತ್ತಿದ್ದೆ. ಫ್ಲ್ಯಾಟ್‌ನ ಕೀಯನ್ನು ಕೆ.ಆರ್. ಪುರಂನಲ್ಲಿರುವ ಮನೆಯಲ್ಲಿ ಇರಿಸುತ್ತಿದ್ದೆ.

ಒಂದು ವರ್ಷದಿಂದ ರಾಜೇಂದ್ರ ಈ ಹಣದ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. ಹಣದ ಮೊತ್ತವನ್ನು ಕೆ.ಜಿ. ಎಂದು ಕೋಡ್‌ವರ್ಡ್ ನಲ್ಲಿ ನಮೂದು ಮಾಡಲಾಗುತ್ತಿತ್ತು ಎಂದು ಆಂಜನೇಯ ಹೇಳಿದ್ದಾಗಿ ಪಾತ್ರಾ ತಿಳಿಸಿದ್ದಾರೆ.

20 ಕೋಟಿ ರೂಪಾಯಿ ಪತ್ತೆ

20 ಕೋಟಿ ರೂಪಾಯಿ ಪತ್ತೆ

20 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹಣ ಡಿಕೆಶಿ ಮನೆಯಲ್ಲಿ ಸಿಕ್ಕಿದೆ. 2018ರ ಜೂನ್ 21ರಂದು ಎಐಸಿಸಿಗೆ 2 ಮತ್ತು 3 ಕೋಟಿ ರೂ. ಹಣವನ್ನು ನೀಡಲಾಗಿದೆ. ಡಿಕೆಶಿ ಹವಾಲ ಹಣವನ್ನು ಎಐಸಿಸಿಗೆ ಡೆಪಾಸಿಟ್ ಮಾಡುತ್ತಾ ಇದ್ದಾರೆ. ಅವರು ಎಐಸಿಸಿಗೆ ಒಂದು ರೀತಿ ಎಟಿಎಂ ಇದ್ದಂತೆ. ಎಐಸಿಸಿಗೆ ಹಣ ಬರುವ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಕಿಂಗ್‌ಪಿನ್. ಹವಾಲ ದಂಧೆಕೋರರ ಮೂಲಕವೇ ಹಣ ಸಂದಾಯವಾಗುತ್ತಿತ್ತು.

ಎಸ್‌ಜಿ, ಆರ್‌ಜಿ ಕೋಡ್‌ವರ್ಡ್

ಎಸ್‌ಜಿ, ಆರ್‌ಜಿ ಕೋಡ್‌ವರ್ಡ್

ಡೈರಿಯಲ್ಲಿ ಎಸ್‌ಜಿ ಮತ್ತು ಆರ್‌ಜಿ ಎಂದು ನಮೂದಿಸಲಾಗಿದೆ. ಎಸ್‌ಜಿ ಅಂದರೆ ಸೋನಿಯಾ ಗಾಂಧಿ ಮತ್ತು ಆರ್‌ಜಿ ಎಂದರೆ ರಾಹುಲ್ ಗಾಂಧಿ ಎಂದು ಡೈರಿ ದಾಖಲೆಗಳನ್ನು ಅವರು ಬಿಡುಗಡೆ ಮಾಡಿದರು.

ಎಐಸಿಸಿಗೆ ವಿವಿಧ ಮೂಲಗಳಿಂದ 600 ಕೋಟಿಗೂ ಹೆಚ್ಚು ಹಣ ಹೋಗಿದೆ. ಕರ್ನಾಟಕದಿಂದ ಕಾಂಗ್ರೆಸ್‌ಗೆ ಹಣ ಬರುವುದು ಬಯಲಾಗಿದೆ.

ಹಣದ ಮೊತ್ತವನ್ನು ಕೆ.ಜಿ ಎಂಬ ಕೋಡ್‌ವರ್ಡ್‌ನಲ್ಲಿ ನಮೂದು ಮಾಡಲಾಗುತ್ತಿತ್ತು. ಸ್ವತಃ ಕಾಂಗ್ರೆಸ್ ಹವಾಲ ಜಾಲವನ್ನು ನಡೆಸುತ್ತಿದೆ. ಕರ್ನಾಟಕದಿಂದ ಎಐಸಿಸಿಗೆ ಹಣ ವರ್ಗಾವಣೆ ಮಾಡುವುದಕ್ಕೆ ಹವಾಲ ಜಾಲ ನೆರವು ನೀಡಿರುವುದಕ್ಕೆ ಸಾಕ್ಷ್ಯ ಇದೆ ಎಂದು ಪಾತ್ರಾ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+