ಭಕ್ತಿಯ ಅತಿರೇಕವೋ, ಮೂಢತನದ ಪರಮಾವಧಿಯೋ?
ಜಲಂಧರ್, ಡಿ. 15: ಭಾರೀ ಮಳೆ ಮತ್ತು ಚಳಿಯ ಮಧ್ಯೆಯೂ ದಿ. ಧರ್ಮಗುರು ಅಶುತೋಶ್ ಮಹಾರಾಜ್ ಅವರ ಭಕ್ತರು ನರ್ಮಹಾಲ್ ಡೆರಾ ಸ್ಥಳದಲ್ಲಿ ಆಯೋಜಿಸಿರುವ ತಿಂಗಳ ಭಂಡಾರಾ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ.
ಹೈ ಕೋರ್ಟ್ ಆದೇಶ ನೀಡಿದ್ದರೂ ಬೆದರದ ಜನರು ಇನ್ನೂ ಮಹಾರಾಜರು ಬದುಕಿ ಬರಲಿದ್ದಾರೆಂದು ನಂಬಿಕೊಂಡಿದ್ದಾರೆ. ಆದ್ದರಿಂದ ಅಶುತೋಷರು ಬದುಕಿಲ್ಲದಿದ್ದರೂ ಅವರೇ ಆರಂಭಿಸಿರುವ ಭಂಡಾರ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದಾರೆ.

ದಿವ್ಯಜ್ಯೋತಿ ಜಾಗೃತಿ ಸಂಸ್ಥಾನ ಆಯೋಜಿಸಿರುವ ಈ ಮಾಸಿಕ ಭಂಡಾರಾ ಕಾರ್ಯಕ್ರಮದಲ್ಲಿ 60 ರಿಂದ 75 ಸಾವಿರ ಭಕ್ತರು ಪಾಲ್ಗೊಂಡಿದ್ದಾರೆಂದು ಅಂದಾಜಿಸಲಾಗಿದೆ.
"ಇಲ್ಲಿ ಸೇರಿದ ಎಲ್ಲ ಭಕ್ತರೂ ಅಶುತೋಷ್ ಅವರು ಸಮಾಧಿಯಿಂದ ಎದ್ದು ಬರುತ್ತಾರೆಂದು ನಂಬಿಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಮಾಧಿಯೊಳಗೆ ಹೋಗುವ ಮೊದಲೂ ಅಶುತೋಷ್ ಅವರು ತಾವು ಮತ್ತೆ ದೈನಂದಿನ ಜೀವನಕ್ಕೆ ಮರಳುವುದಾಗಿ ತಿಳಿಸಿದ್ದರು" ಎಂದು ಸಂಸ್ಥಾನದ ವಕ್ತಾರ ಸ್ವಾಮಿ ವಿಶಾಲಾನಂದ ತಿಳಿಸಿದ್ದಾರೆ.
ಭಂಡಾರಾ ಕಾರ್ಯಕ್ರಮವನ್ನು ಪ್ರತಿ ತಿಂಗಳೂ ಏರ್ಪಡಿಸಲಾಗುವುದು. ಎರಡು ದಶಕಗಳಿಂದ ಭಂಡಾರಾ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಇನ್ನು ಮುಂದೆಯೂ ಏರ್ಪಡಿಸುವುದಾಗಿ ಸಂಸ್ಥಾನ ತಿಳಿಸಿದೆ.
ಸ್ವಾಮಿಗಳ ಸಮಾಧಿಗೆ ಅಡ್ಡಿ ಬೇಡ: "ಸ್ವಾಮಿಗಳು ಸಮಾಧಿ (ಆಳ ಪ್ರಾಣಾಯಾಮ)ಯಲ್ಲಿದ್ದಾರೆ. ಯಾರೂ ಕೂಡ ಇದಕ್ಕೆ ಅಡ್ಡಿಪಡಿಸಬಾರದು" ಎಂದು ಡೆರಾ ವಕ್ತಾರರು ಹೇಳಿದ್ದಾರೆ.
ಈ ವರ್ಷ ಜನವರಿ 29ರಂದೇ ಅಶುತೋಷ್ ಮಹಾರಾಜರು ಮೃತಪಟ್ಟಿದ್ದಾರೆಂದು ವೈದ್ಯಕೀಯ ವರದಿ ನೀಡಲಾಗಿತ್ತು. ಆದರೆ, ಮಹಾರಾಜರು ಸಮಾಧಿಯಿಂದ ಜೀವಂತವಾಗಿ ವಾಪಸ್ ಬರಲಿದ್ದಾರೆಂಬ ನಂಬಿಕೆಯಲ್ಲಿ ಅವರ ಶವವನ್ನು ಭಕ್ತರು ಅತ್ಯಂತ ಶಕ್ತಿಯುತ ಫ್ರಿಜ್ನಲ್ಲಿ ರಕ್ಷಿಸಿಟ್ಟಿದ್ದಾರೆ.
ಈ ಕುರಿತು ವಿಚಾರಣೆ ನಡೆಸಿದ ಪಂಜಾಬ್ ಹೈ ಕೋರ್ಟ್ 15 ದಿನಗಳ ಒಳಗೆ ಅಶುತೋಷ್ ಅವರ ಶವ ಸಂಸ್ಕಾರ ನಡೆಸಬೇಕೆಂದು ಸರ್ಕಾರಕ್ಕೆ ಸೂಚಿಸಿತ್ತು. ಇದಕ್ಕಾಗಿ ಜಲಂಧರ್ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನೂ ನೇಮಿಸಿತ್ತು.
ಆದರೆ, ಡಿ. 4ರಂದು ಮೇಲ್ಮನವಿ ಸಲ್ಲಿಸಿದ್ದ ಡೆರಾ, ಅಂತ್ಯ ಸಂಸ್ಕಾರದ ಗಡುವನ್ನು 30 ದಿನಗಳಿಗೆ ವಿಸ್ತರಿಸಬೇಕೆಂದು ಕೋರಿತ್ತು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications