ಕೋಲ್ಕತ್ತಾದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆ: ತೃಣಮೂಲ ಮತ್ತು ಬಿಜೆಪಿ ಕೆಸರೆರೆಚಾಟ
ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿ ಎರಡು ಗುಂಪುಗಳ ನಡುವೆ ಕೋಲ್ಕತ್ತಾದ ಖಿದರ್ಪೋರ್-ಮೊಮಿನ್ಪುರ್ ಪ್ರದೇಶದಲ್ಲಿ ಘರ್ಷಣೆ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ರಾಜ್ಯ ಪರಿಸ್ಥಿತಿಯನ್ನು ನಿಯಂತ್ರಿಸಿದೆ ಎಂದು ಉಲ್ಲೇಖಿಸಿದರೆ, ಹಲವಾರು ಬಿಜೆಪಿ ನಾಯಕರು ಘರ್ಷಣೆಯ ವೇಳೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ದೂರಿದೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕೇಸರಿ ಪಾಳೆಯ ಹೇಳಿಕೊಂಡಿದೆ. ಈ ಹೇಳಿಕೆಗೆ ಆಡಳಿತಾರೂಢ ಟಿಎಂಸಿ ಬಿಜೆಪಿಗೆ ತೀಕ್ಷ್ಣವಾದ ಪ್ರತ್ಯುತ್ತರವನ್ನು ನೀಡಿದೆ. ಇದು ಬಿಜೆಪಿಯು ರಾಜ್ಯದ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸುತ್ತಿದೆ ಎಂದು ಆಡಳಿತಾರೂಢ ಟಿಎಂಸಿ ಆರೋಪಿಸಿದೆ.
ಈ ಪ್ರದೇಶಕ್ಕೆ ಭೇಟಿ ನೀಡಲು ಯತ್ನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಅವರನ್ನು ಸೋಮವಾರ ತಡೆದು ಬಂಧಿಸಲಾಯಿತು. ಭಾನುವಾರ ಸಂಜೆ ಖಿದರ್ಪೋರ್-ಮೊಮಿನ್ಪುರ್ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಕೆಲವು ಸ್ಥಳೀಯ ವಿಷಯಗಳಿಗೆ ಸಂಬಂಧಿಸಿದಂತೆ ಘರ್ಷಣೆಗಳು ನಡೆದಿದ್ದು, ಇದರಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನಾಕಾರರು ಎಕ್ಬಾಲ್ಪುರ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆಯನ್ನೂ ನಡೆಸಿದರು.
ಆ ಪ್ರದೇಶದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್ಎಎಫ್) ಸೇರಿದಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
"ನಾನು ಗೌರವಾನ್ವಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಗೌರವಾನ್ವಿತ ಗವರ್ನರ್ ಗಣೇಶನ್ ಅವರಿಗೆ ಪತ್ರ ಬರೆದಿದ್ದೇನೆ, ಮೋಮಿನ್ಪುರ್ ಪ್ರದೇಶದಲ್ಲಿ ನಡೆದ ಹಿಂಸಾಚಾರ ಮತ್ತು ಎಕ್ಬಾಲ್ಪುರ ಪೊಲೀಸ್ ಠಾಣೆಯ ದಂಗೆಯ ಹಿನ್ನೆಲೆಯಲ್ಲಿ ಕೇಂದ್ರ ಪಡೆಗಳನ್ನು ತುರ್ತಾಗಿ ನಿಯೋಜಿಸಲು ವಿನಂತಿಸಿದೆ" ಎಂದು ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಟ್ವೀಟ್ ಮಾಡಿದ್ದಾರೆ.
Bikes and shops of Hindus vandalised by peaceful community today as they celebrate their festival at Maila Depot, Mominpore. As usual, CM isn’t talking any action against them and giving them free hand. pic.twitter.com/GJ7N2EHhpl
— Dr. Sukanta Majumdar (@DrSukantaBJP) October 9, 2022
ಪ್ರದೇಶಕ್ಕೆ ಭೇಟಿ ನೀಡಲು ಬಯಸಿದ ಮಜುಂದಾರ್ ಅವರನ್ನು ಉತ್ತರ ಕೋಲ್ಕತ್ತಾದ ಚಿಂಗ್ರಿಘಾಟಾ ಪ್ರದೇಶದಲ್ಲಿ ನಿಲ್ಲಿಸಲಾಯಿತು. ಜೊತೆಗೆ ಸಿಆರ್ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಆ ಪ್ರದೇಶದಲ್ಲಿ ವಿಧಿಸಲಾಗಿರುವುದರಿಂದ ಹಿಂತಿರುಗಲು ಕೇಳಲಾಯಿತು.
ಆದರೂ ಪೊಲೀಸರ ಮಾತು ಕಿವಿಗೆ ಹಾಕಿಕೊಳ್ಲದ ಸುಕಾಂತ ಮಜುಂದಾರ್ ಅವರು ಮುಂದೆ ಸಾಗಲು ಬಯಸಿದಾಗ ಅವರನ್ನು ಬಂಧಿಸಿ ಲಾಲ್ಬಜಾರ್ ಪೊಲೀಸ್ ಪ್ರಧಾನ ಕಚೇರಿಗೆ ಕರೆದೊಯ್ಯಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಾಜ್ಯದ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಕೇಸರಿ ಶಿಬಿರದಲ್ಲಿ ಪಾಲ್ಗೊಂಡು ಸುಕಾಂತಾ ಮಜುಂದಾರ್ ದ್ವೇಷದ ಬಾಷಣ ಮಾಡುವುದನ್ನು ತಡೆದು ಬಂಧಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಹಿರಿಯ ಟಿಎಂಸಿ ನಾಯಕ ಸೌಗತ ರಾಯ್ ಹೇಳಿದ್ದಾರೆ.
ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ದ್ವೇಷದ ಭಾಷಣ ಮಾಡುವುದನ್ನು ಬಿಟ್ಟು ಸುಕಾಂತಾ ಮಜುಂದಾರ್ ಅಲ್ಲಿಗೆ ಹೋಗಿ ಏನು ಮಾಡುತ್ತಾರೆ? ಬಿಜೆಪಿಯು ರಾಜ್ಯದ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ, ಪ್ರತಿ ಘಟನೆಯನ್ನು ಬಿಜೆಪಿ ರಾಜಕೀಯಗೊಳಿಸುವುದನ್ನು ನಿಲ್ಲಿಸಬೇಕು ಎಂದು ರಾಯ್ ಹೇಳಿದರು.