'ಕಲೋರೊಥಾನ್ ಸರಣಿ 13' ಚಿತ್ರಕಲಾ ಉತ್ಸವಕ್ಕೆ ಅರ್ಜಿ ಆಹ್ವಾನ
ಬೆಂಗಳೂರು, ಆಗಸ್ಟ್ 01: ಚಿತ್ರಕಲೆಗಳಿಗೆ ಮರು ಜೀವ ತುಂಬಲು ಮತ್ತುಅದನ್ನು ಉತ್ತೇಜಿಸುವ ಜತೆಗೆ ಸಾಧ್ಯವಾದಷ್ಟು ಸೃಜನಶೀಲತೆಯಿಂದ ಕಾಗದದ ಮೇಲೆ ಕಲಾವಿದರ ಕಲ್ಪನೆಯನ್ನು ಸೆರೆಹಿಡಿಯುವ ಉದ್ದೇಶದಿಂದ ''ಕಲೊರೋಥಾನ್-ನಿಮ್ಮ ಕಲ್ಪನೆಗೆ ಬಣ್ಣತುಂಬಿ'' (Colorothon - Draw your imagination season 13) ಸರಣಿ 13 ಎಂಬ ರಾಷ್ಟ್ರೀಯ ಉತ್ಸವಕ್ಕೆ(ಸ್ಪರ್ಧೆ) ಅರ್ಜಿ ಆಹ್ವಾನಿಸಲಾಗಿದೆ.
ಭಾರತದ ಅತೀ ದೊಡ್ಡ ಆನ್ಲೈನ್ ಚಿತ್ರಕಲಾ ಸ್ಪರ್ಧೆ ಆಗಿರುವ ಈ ಉತ್ಸವವನ್ನು ಬ್ರೀಥ್ ಎಂಟರ್ಟೈನ್ಮೆಂಟ್ ಮತ್ತು ಕಿಡ್ಸ್ಚೌಪಲ್ನ ನಡೆಸಲಿವೆ. ಇದೊಂದು ಭಾರತ ಮಟ್ಟದ ಕಾರ್ಯಕ್ರಮವಾಗಿದ್ದು, ಇದರಲ್ಲಿ ನವದೆಹಲಿ, ಲಕ್ನೋ, ಚೆನ್ನೈ, ಬೆಂಗಳೂರು, ಮತ್ತು ಹೈದರಾಬಾದ್ ನಗರಗಳು ಸೇರಿದಂತೆ ದೇಶದಾದ್ಯಂತ ವಿವಿಧ ಭಾಗಗಳ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಈ ಸ್ಪರ್ಧೆಯಲ್ಲಿ ಈ ಭಾರಿ ದೇಶದ ಯಾವ ಮೂಲೆಯ ಕಲಾವಿದ ಸಹ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಎನ್ನಲಾಗಿದೆ.
ನ.14ರಂದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ
ಚಿತ್ರಕಲೆ ಪ್ರೋತ್ಸಾಹಿಸಿ ಮರು ಜೀವ ತುಂಬುವ ಉದ್ದೇಶದಿಂದ ಈ ಆನ್ಲೈನ್ ಉತ್ಸವ ನಡೆಯಲಿದೆ. ಇದು ವಿದ್ಯಾರ್ಥಿಗಳಿಗೆ ಶಿಕ್ಷಣದ ಏಕಮುಖ ದಿನಚರಿಯಿಂದ ಮುಕ್ತಿ ನೀಡಲು ನೆರವಾಗುತ್ತದೆ. ಕಲಾವಿದರು ಆನ್ಲೈನ್ನಲ್ಲಿ ಚಿತ್ರಿಸುವ ಮೂಲಕ ಎಕ್ಸ್ಕ್ಲ್ಯೂಸಿವ್ ವಲ್ಡ್ ರೆಕಾರ್ಡ್ ಮಾಡಲಿದ್ದಾರೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಆಂಭವಾಗಲಿದೆ. ಕಿಡ್ಸ ಚೌಪಲ್ ಮೊಬೈಲ್ ಅಪ್ಲಿಕೇಷನ್ ಗಳಲ್ಲಿ ಅರ್ಜಿ ಅಪ್ಲೋಡ್ ಮಾಡಬಹುದಾಗಿದೆ.

ಈವರೆಗೆ 'ಕಲೊರೋಥಾನ್' ಸ್ಪರ್ಧಾ ಉತ್ಸವವನ್ನು ಭೌತಿಕವಾಗಿ ನಡೆಸಲಾಗಿತ್ತು. ಕೋವಿಡ್ ಹಿನ್ನೆಲೆ ಕಲಾವಿದರು, ಕಲೆಗೆ ತುಸು ಹಿನ್ನೆಲೆ ಉಂಟಾಗಿದ್ದರ ಪರಿಣಾಮ ಈ ಭಾರಿ 13ಸರಣಿಯನ್ನು ಆನ್ಲೈನ್ ನಲ್ಲಿ ಏರ್ಪಡಿಸಲಾಗಿದೆ. ಭೌತಿಕವಾಗಿ ನಡೆದ ಕಳೆದ 12ಸರಣಿಗಳು ಎಲ್ಲ ಕಲಾವಿದರನ್ನು ಒಳಗೊಳ್ಳಲು ಆಗಿರಲಿಲ್ಲ. ಕೋವಿಡ್ ಹಿನ್ನೆಲೆ ನಡೆಸುತ್ತಿರುವ ಆನ್ಲೈನ್ ನಿಂದಾಗಿ ಈ ಭಾರಿ ದೇಶದ ಮೂಲೆ ಮೂಲೆಗಳ ಕಲಾವಿದರ ಪಾಲ್ಗೊಳ್ಳಲು ಅವಕಾಶ ಸಿಕ್ಕಂತಾಗಿದೆ ಎಂದು 15 ವರ್ಷದ ಬಹುಮುಖ ಪ್ರತಿಭೆ, ಕಲಾವಿದೆ ಮತ್ತು ಪ್ರದರ್ಶಕಿ, ಕಿಡ್ಸ್ಚೌಪಾಲ್ನ ಬ್ರಾಂಡ್ ಅಂಬಾಸಿಡರ್ ತಿಸ್ಯಾ ಸಿಂಗ್ ತಿಳಿಸಿದರು.
ಈ ತಿಸ್ಯಾ ಸಿಂಗ್ ಅವರೇ ಈ ಭಾರಿಯ ಸ್ಪರ್ಧೆಯ ನೇತೃತ್ವ ವಹಿಸಲಿದ್ದಾರೆ. ಇವರಿಗೆ ಸಾಥ್ ಕಿಡ್ಸ ಚೌಪಲ್ ಸಹ ಸಂಸ್ಥಾಪಕ ಧೀರಜ್ ಸಿಂಗ್, ಆಶಿಶ್ ಶ್ರೀವಾಸ್ತವ ಮತ್ತು ದೇವೇಂದ್ರ ಜೈಸ್ವಾಲ್ ಅವರು ಮಕ್ಕಳಿಗೆ ಪ್ಯಾನ್ ಇಂಡಿಯಾ ಕಾರ್ಯಕ್ರಮ ರೂಪಿಸಿ ಕೊಟ್ಟಿದ್ದಾರೆ. ದೇಶಾದ್ಯಂತದ ಮಕ್ಕಳು ಪಾಲ್ಗೊಳ್ಳಲು ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ ಎಂದು ಕಲೊರೊಥಾನ್ನ ಸಂಸ್ಥಾಪಕ ಟ್ರಸ್ಟಿ ಕಿಶೋರ್ ಜೋಸೆಫ್ ಹೇಳಿದರು.

ಉನ್ನತ ಸ್ಥರದ 300 ವರ್ಣಚಿತ್ರ Colorothon ನ ಚಾರಿಟಿ ಪಾಲುದಾರರಿಗೆ ವಿತರಿಸಲಾಗುವುದು. ಯುವ ಪ್ರತಿಭೆಗಳು ಉದ್ಯಮಿಗಳಾಗಲು ಶಾಪ್ಡಾಟ್ ಕಿಡ್ಸಚೌಪಲ್ ಟಾಟ್ ಕಾಮ್ನಲ್ಲಿ ಅಗ್ರ ಇನ್ನೂರು ವರ್ಣಚಿತ್ರ ಖರೀದಿಸಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದರು.
ಸ್ಫರ್ಧಾ ಉತ್ಸವದ ಸಂಕ್ಷಿಪ್ತ ವಿವರ
1. ಸ್ಪರ್ಧೆಗೆ ಉಚಿತ ಪ್ರವೇಶ ಇರಲಿದೆ.
2. ಮಕ್ಕಳ ದಿನಾಚರಣೆ (ನ.14 -ಡಿ.15 ರವರೆಗೆ) ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ.
3. ಸ್ಪರ್ಧೆಯನ್ನು ವಯಸ್ಸಿನ ಆಧಾರದಲ್ಲಿ ಮಕ್ಕಳಿಗಾಗಿ ಮಾತ್ರ ಮೂರು ವಿಭಾಗವಾಗಿ ವಿಂಗಡಿಸಲಾಗಿದೆ. 'ಆರ್ಟ್ ಟ್ರೀಟ್' ನಲ್ಲಿ ಎಲ್ಕೆಜಿಯಿಂದ 2 ನೇತರಗತಿ, 'ಆಲ್ ಎಬೌಂಟ್ ಶೇಡ್ಸ್'ನಲ್ಲಿ 3ರಿಂದ 7ನೇ ತರಗತಿ ಮಕ್ಕಳು ಮತ್ತು 'ಕ್ರಿಯೇಟಿವ್ ಸ್ಟ್ರೀಕ್' ನಲ್ಲಿ 8ರಿಂದ 12ನೇ ತರಗತಿ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.
4. ಕಲಾವಿದರಿಗೆ ಇ- ಪ್ರಮಾಣಪತ್ರ ಮತ್ತು ಎಕ್ಸ್ಲೂಸಿವ್ ವಲ್ಡ್ ರೆಕಾರ್ಡ್ ನಿಂದ ಮೆಚ್ಚುಗೆ ಪತ್ರ ದೊರೆಯಲಿದೆ.
5. ಪ್ರತಿ ವಿಭಾಗದಲ್ಲಿ 200ರಂತೆ ಒಟ್ಟು 600 ಅತ್ಯುತ್ತಮ ವರ್ಣಚಿತ್ರಗಳನ್ನು ಕಿಡ್ಸ್ಚೌಪಲ್ ಇ-ಕಾಮರ್ಸ್ ವೆಬ್ಸೈಟ್ ನಲ್ಲಿ ಹರಾಜಿಗೆ ಹಾಕಲು ಆಯ್ಕೆ ಆಗಲಿವೆ.
6. ಸಮಾರಂಭದಲ್ಲಿ ತೀರ್ಪುಗಾರರು ಆಯ್ಕೆ ಮಾಡುವ 15 ಅತ್ಯುತ್ತಮ ಚಿತ್ರಗಳಿಗೆ (ಪ್ರತಿ ವಿಭಾಗದಲ್ಲಿ 5ರಂತೆ) ಬಹುಮಾನ ನೀಡಲಾಗುವುದು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications