ಮಂಕಿಪಾಕ್ಸ್: ಲಸಿಕೆ ಅಭಿವೃದ್ಧಿಪಡಿಸಲು ಟೆಂಡರ್ ಆಹ್ವಾನಿಸಿ ಕೇಂದ್ರ ಸರ್ಕಾರ
ನವದೆಹಲಿ, ಜುಲೈ 28: ಮಂಕಿಪಾಕ್ಸ್ ಲಸಿಕೆ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಆಸಕ್ತಿ ಇರುವ ಅಭ್ಯರ್ಥಿಗಳಿಂದ ಟೆಂಡರ್ ಆಹ್ವಾನಸಿದೆ. ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗುತ್ತಿರುವಂತೆ ಎಚ್ಚೆತ್ತಿರುವ ಕೇಂದ್ರ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ ಅಭಿವೃದ್ಧಿಗೆ ಮುಂದಾಗಿದೆ.
ಮಂಕಿಪಾಕ್ಸ್ ವಿರುದ್ಧ ಲಸಿಕೆ ಅಭ್ಯರ್ಥಿಯನ್ನು ಅಭಿವೃದ್ಧಿಪಡಿಸಲು ಮತ್ತು ಈ ಸೋಂಕಿನ ರೋಗನಿರ್ಣಯಕ್ಕಾಗಿ ಡಯಾಗ್ನೋಸ್ಟಿಕ್ ಕಿಟ್ಗಳ ಅಭಿವೃದ್ಧಿಯಲ್ಲಿ ಜಂಟಿ ಸಹಯೋಗಕ್ಕಾಗಿ ಅನುಭವಿ ಲಸಿಕೆ ತಯಾರಕರು, ಇನ್-ವಿಟ್ರೋ ಡಯಾಗ್ನೋಸ್ಟಿಕ್ (IVD) ಕಿಟ್ ತಯಾರಕರಿಂದ ಕೇಂದ್ರವು ಆಸಕ್ತಿಯ ಅಭಿವ್ಯಕ್ತಿ (EoI) ಅನ್ನು ಆಹ್ವಾನಿಸಿದೆ. ಟೆಂಡರ್ ಸಲ್ಲಿಸಲು ಆಗಸ್ಟ್ 10ರಂದು ಕೊನೆಯ ದಿನಾಂಕವಾಗಿದೆ.
"ಅನುಭವಿ ಔಷಧ, ಫಾರ್ಮಾ, ಲಸಿಕೆ, ಐವಿಡಿ ತಯಾರಕರೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಮತ್ತು ಐಸಿಎಂಆರ್ನ ವಿಶಿಷ್ಟ ಮಂಕಿಪಾಕ್ಸ್ ವೈರಸ್ ಐಸೊಲೇಟ್ಗಳನ್ನು ಬಳಸಿಕೊಂಡು ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಲು ವ್ಯಾಖ್ಯಾನಿಸಲಾದ ಯಾವುದೇ ರೀತಿಯ ವಿಶೇಷವಲ್ಲದ ಒಪ್ಪಂದಗಳನ್ನು ಮಾಡಿಕೊಳ್ಳಲು ಕಾನೂನುಬದ್ಧವಾಗಿ ಅರ್ಹವಾಗಿದೆ. ಒಪ್ಪಂದದ ಮೂಲಕ ಐಸಿಎಂಆರ್ ಮಂಕಿಪಾಕ್ಸ್ ರೋಗದ ವಿರುದ್ಧ ಲಸಿಕೆ ಅಥವಾ ಮಂಕಿಪಾಕ್ಸ್ ವೈರಸ್ ರೋಗ ನಿರ್ಣಯಕ್ಕಾಗಿ ಡಯಾಗ್ನೋಸ್ಟಿಕ್ ಕಿಟ್ ಅಭಿವೃದ್ಧಿಪಡಿಸಬೇಕು," ಎಂದು ಐಸಿಎಂಆರ್ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

ಮಂಕಿಪಾಕ್ಸ್ಗೆ ಲಸಿಕೆ, ನಿರ್ದಿಷ್ಟ ಚಿಕಿತ್ಸೆ
2019 ಮತ್ತು 2022 ರಲ್ಲಿ ಕ್ರಮವಾಗಿ ಮಂಕಿಪಾಕ್ಸ್ಗೆ ಒಂದು ಲಸಿಕೆ (MVA-BN) ಮತ್ತು ಒಂದು ನಿರ್ದಿಷ್ಟ ಚಿಕಿತ್ಸೆಯನ್ನು (ಟೆಕೊವಿರಿಮ್ಯಾಟ್) ಅನುಮೋದಿಸಲಾಗಿದೆ ಎಂದು ಐಸಿಎಂಆರ್ ಹೇಳಿದೆ, ಆದರೆ ಈ ಚಿಕಿತ್ಸೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲ ಎಂದು ಹೇಳಿದೆ.
"2019 ರಲ್ಲಿ ಮಂಕಿಪಾಕ್ಸ್ ತಡೆಗಟ್ಟುವಿಕೆಗಾಗಿ ಮಾರ್ಪಡಿಸಿದ ಅಟೆನ್ಯೂಯೇಟೆಡ್ ವ್ಯಾಕ್ಸಿನಿಯಾ ವೈರಸ್ (ಅಂಕಾರಾ ಸ್ಟ್ರೈನ್) ಆಧಾರಿತ ಹೊಸ ಲಸಿಕೆಯನ್ನು ಅನುಮೋದಿಸಲಾಗಿದೆ. ಇದು ಎರಡು-ಡೋಸ್ ಲಸಿಕೆಯಾಗಿದ್ದು, ಲಭ್ಯತೆ ಸೀಮಿತವಾಗಿದೆ. ಮಂಕಿಪಾಕ್ಸ್ನ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ವ್ಯಾಕ್ಸಿನೇಷನ್ನ ಕಾರ್ಯಸಾಧ್ಯತೆ ಮತ್ತು ಸೂಕ್ತತೆಯನ್ನು ನಿರ್ಣಯಿಸಲು ವೈಜ್ಞಾನಿಕ ಅಧ್ಯಯನಗಳು ಈಗ ನಡೆಯುತ್ತಿವೆ" ಎಂದು ಐಸಿಎಂಆರ್ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ಲಸಿಕೆ ಶಿಫಾರಸು
ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ನಿಂದ ಬಳಲುತ್ತಿರುವವರಿಗೆ ಮತ್ತು ಆರೋಗ್ಯ ಕಾರ್ಯಕರ್ತರು, ಕೆಲವು ಲ್ಯಾಬ್ ಕೆಲಸಗಾರರು ಮತ್ತು ಬಹು ಲೈಂಗಿಕ ಪಾಲುದಾರರನ್ನು ಒಳಗೊಂಡಂತೆ ಸೋಂಕು ತಗಲುವ ಅಪಾಯ ಹೆಚ್ಚಿರುವವರಿಗೆ ಉದ್ದೇಶಿತ ವ್ಯಾಕ್ಸಿನೇಷನ್ ಅನ್ನು ಶಿಫಾರಸು ಮಾಡಿದೆ.
"ಈ ಸಮಯದಲ್ಲಿ, ಮಂಕಿಪಾಕ್ಸ್ ವಿರುದ್ಧ ಸಾಮೂಹಿಕ ಲಸಿಕೆಯನ್ನು ನಾವು ಶಿಫಾರಸು ಮಾಡುವುದಿಲ್ಲ" ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಬುಧವಾರ ಹೇಳಿದ್ದಾರೆ.

ಒಡಿಶಾದಲ್ಲಿ ಮುನ್ನೆಚ್ಚರಿಕೆ ವಹಿಸಿದ ಸರ್ಕಾರ
ಈಗಾಗಲೇ ಹೆಚ್ಚುತ್ತಿರುವ ಕಾಲರಾ ಮತ್ತು ಅತಿಸಾರ ಪ್ರಕರಣಗಳೊಂದಿಗೆ ಹೋರಾಡುತ್ತಿರುವ ಒಡಿಶಾ ಸರ್ಕಾರವು ಮಂಕಿಪಾಕ್ಸ್ ಬಗ್ಗೆ ಎಚ್ಚರಿಕೆ ವಹಿಸಿದೆ. ದೆಹಲಿಯಲ್ಲಿ ದೇಶದ ನಾಲ್ಕನೇ ಮಂಕಿಪಾಕ್ಸ್ ಪ್ರಕರಣ ವರದಿಯಾಗುತ್ತಿದ್ದಂತೆ ಒಡಿಶಾ ಎಚ್ಚೆತ್ತಿದೆ. ಒಡಿಶಾ ಸರ್ಕಾರವು ಆರೋಗ್ಯ ಅಧಿಕಾರಿಗಳನ್ನು ಎಚ್ಚರವಾಗಿರುವಂತೆ ಕೇಳಿದೆ.
ಆರೋಗ್ಯ ಇಲಾಖೆಯು ಈಗಾಗಲೇ ವೈದ್ಯಕೀಯ ಕಾಲೇಜುಗಳು, ಮುಖ್ಯ ಜಿಲ್ಲಾ ವೈದ್ಯಾಧಿಕಾರಿಗಳು (ಸಿಡಿಎಂಒಗಳು) ಮತ್ತು ತಜ್ಞರಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ ಮತ್ತು ಜಾಗರೂಕರಾಗಿರಲು ಅವರನ್ನು ಕೇಳಿದೆ. ಬೇರೆ ರಾಜ್ಯಗಳು ಮತ್ತು ದೇಶಗಳಿಂದ ಬರುವ ಜನರ ಮೇಲೆ ನಿಗಾ ಇಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ.

ರೋಗ ಲಕ್ಷಣ ಕಂಡುಬಂದರೆ ಮಾಹಿತಿ ನೀಡಿ
ಮಾತನಾಡಿದ ರಾಜ್ಯ ಸಾರ್ವಜನಿಕ ಆರೋಗ್ಯ ನಿರ್ದೇಶಕ ನಿರಂಜನ್ ಮಿಶ್ರಾ ಮಾತನಾಡಿ, "ಮಂಕಿಪಾಕ್ಸ್ ಪ್ರಕರಣಗಳ ಹರಡುವಿಕೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದ್ದು, ಭಾರತದಲ್ಲಿ ಈಗಾಗಲೇ ನಾಲ್ಕು ಪ್ರಕರಣಗಳು ವರದಿಯಾಗಿವೆ, ಆದ್ದರಿಂದ ಈ ಪ್ರಕರಣಗಳ ಪತ್ತೆಗೆ ರಾಜ್ಯಗಳು ಎಚ್ಚರವಾಗಿರುವುದು ಬಹಳ ಮುಖ್ಯ." ಎಂದು ಹೇಳಿದ್ದಾರೆ.
"ನಾವು ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದೊಂದಿಗೆ (RMRC) ಮಂಕಿಪಾಕ್ಸ್ ರೋಗಲಕ್ಷಣಗಳನ್ನು ಹೊಂದಿರುವ ಜನರಿಗೆ ಚಿಕಿತ್ಸೆಯ ವಿಧಾನದ ಬಗ್ಗೆ ಚರ್ಚೆ ನಡೆಸಿದ್ದೇವೆ. ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ ಮಂಕಿಪಾಕ್ಸ್ ಮಾದರಿಗಳನ್ನು ಪರೀಕ್ಷಿಸುತ್ತದೆ. ಆರ್ಎಂಆರ್ಸಿ ಸೇರಿದಂತೆ 15 ಕೇಂದ್ರಗಳನ್ನು ಪರೀಕ್ಷೆ ನಡೆಸಲು ಗೊತ್ತುಪಡಿಸಲಾಗಿದೆ. ಯಾರಾದರೂ ಮಂಕಿಪಾಕ್ಸ್ ರೋಗಲಕ್ಷಣಗಳನ್ನು ಹೊಂದಿದ್ದರೆ, ಅವರು ಅಥವಾ ಅವಳು ತಕ್ಷಣ ಪರೀಕ್ಷೆಗೆ ಹೋಗಬೇಕು," ಎಂದು ಮಿಶ್ರಾ ಹೇಳಿದರು.
ಆಫ್ರಿಕಾ ಮತ್ತು ಗಲ್ಫ್ ದೇಶಗಳಂತಹ ಹೆಚ್ಚಿನ ಅಪಾಯದ ದೇಶಗಳಿಂದ ಬರುವವರಿಗೆ ಮಂಕಿಪಾಕ್ಸ್ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಬೆಳವಣಿಗೆಗಾಗಿ ಜಾಗರೂಕರಾಗಿರಲು ನಾವು ಸಲಹೆ ನೀಡಿದ್ದೇವೆ ಎಂದು ಮಿಶ್ರಾ ಹೇಳಿದರು. .
ಮಂಕಿಪಾಕ್ಸ್ಗೆ ನಿರ್ದಿಷ್ಟ ಲಸಿಕೆ ಇಲ್ಲದಿದ್ದರೂ, ಸಿಡುಬು ನಿರ್ಮೂಲನೆಗೆ ಬಳಸುವ ಲಸಿಕೆಗಳು ರೋಗದ ವಿರುದ್ಧ ಶೇಕಡಾ 85 ರಷ್ಟು ಪರಿಣಾಮಕಾರಿಯಾಗಿದೆ. ಇದು ಉಸಿರಾಟದ ಸ್ರವಿಸುವಿಕೆ, ಚರ್ಮದ ಗಾಯಗಳು, ಮತ್ತು ಬಟ್ಟೆಗಳಂತಹ ಕಲುಷಿತ ವಸ್ತುಗಳೊಂದಿಗೆ ನಿಕಟ ಸಂಪರ್ಕದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ, ಜನರು ಎಚ್ಚರವಾಗಿರಲು ಸೂಚಿಸಲಾಗಿದೆ.
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications