ಮನೆ ಟಿವಿಯಲ್ಲೇ ಮಿಡ್ ನೈಟ್ ಮಸಾಲ ನೋಡ್ಬಹುದಂತೆ!
ಮುಂಬೈ, ಅ.11: ವಯಸ್ಕರ ಚಿತ್ರಗಳ ಮೇಲಿದ್ದ ನಿರ್ಬಂಧ, ನಿಷೇಧವನ್ನು ಹಿಂಪಡೆಯಲು ಸೆನ್ಸಾರ್ ಮಂಡಳಿ ನಿರ್ಧರಿಸಿದೆ. ಹೀಗಾಗಿ ಮನೆಯಲ್ಲೇ ಮಿಡ್ ನೈಟ್ ಮಸಾಲ ಚಿತ್ರಗಳು ಇನ್ಮುಂದೆ 'ಪಿಜಿ' ಎಂಬ ಟ್ಯಾಗ್ ನೊಂದಿಗೆ ಪ್ರಸಾರವಾಗಬಹುದು.
ಟಿವಿಗಳಲ್ಲಿ ವಯಸ್ಕರ ಚಿತ್ರಗಳ ಪ್ರಸಾರದ ಮೇಲಿದ್ದ ನಿಷೇಧವನ್ನು ಸೆನ್ಸಾರ್ ಮಂಡಳಿ(ಸಿಬಿಎಫ್ ಸಿ) ತೆರವುಗೊಳಿಸಿದೆ. ಕಳೆದ 10 ತಿಂಗಳಿಂದ ಟಿವಿಗಳಲ್ಲಿ ವಯಸ್ಕರ ಚಿತ್ರಗಳ ಪ್ರಸಾರ ಕುರಿತು ನಿರ್ಬಂಧ ವಿಧಿಸಲಾಗಿತ್ತು. ಇದೀಗ ಚಿತ್ರರಂಗದವರು, ಬ್ರಾಡ್ ಕಾಸ್ಟರ್ ಗಳ ಒತ್ತಡ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ತಲೆ ಬಾಗಿದೆ. ಕಳೆದ ಜನವರಿ ತಿಂಗಳಿನಿಂದ ಸೆನ್ಸಾರ್ ಮಂಡಳಿ ಮೇಲೆ ಒತ್ತಡ ಹೇರಲಾಗಿತ್ತು.[ಪೋರ್ನ್ ಬ್ಯಾನ್ ಮಾಡಿದರೆ ಅನಾಹುತ: ಆರ್ ಜಿವಿ]

ಕೇಂದ್ರ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಾಜ್ ನಿಹ್ಲಾನಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಕೆಲ ಷರತ್ತುಗಳೊಂದಿಗೆ ವಯಸ್ಕರ ಚಿತ್ರಗಳನ್ನು ಪ್ರಸಾರ ಮಾಡಲು ಸೆನ್ಸಾರ್ ಮಂಡಳಿ ಅನುಮತಿ ನೀಡಿದೆ. 'ಎ' ಸರ್ಟಿಫಿಕೇಟ್ ಚಿತ್ರಗಳಲ್ಲಿನ ಆಕ್ಷೇಪಾರ್ಹ ದೃಶ್ಯ, ಡೈಲಾಗ್ಗಳಿಗೆ ಕತ್ತರಿ ಪ್ರಯೋಗಿಸಲು ನಿರ್ಮಾಪಕರಿಗೆ ಸೂಚಿಸಲಿದೆ. [ಬೆತ್ತಲೆ ಚಿತ್ರ ಮಾರಿದರೆ ಪರಿಸರ ಉಳಿಯುತ್ತಾ?]
ಜೊತೆಗೆ ಯು/ಎ ಎಂಬ ಪ್ರಮಾಣ ಪತ್ರಕ್ಕೆ ಅರ್ಹವಾದ ಮೇಲೆ ಪ್ರಸಾರ ಮಾಡಲು ಸೂಚಿಸಲಾಗಿದೆ. ಕಡ್ಡಾಯವಾಗಿ 'ಪೇರೆಂಟ್ ಗೈಡ್' ಪ್ರಮಾಣದೊಂದಿಗೆ ಮನೆ ಮಂದಿಯೆಲ್ಲ ಕುಳಿತು ನೋಡುವಂತೆ ಚಿತ್ರವನ್ನು ರೂಪಿಸಿ ಪ್ರದರ್ಶಿಸಬಹುದು.[ಮನೆಯಲ್ಲಿ ಕುಳಿತು ಅಶ್ಲೀಲ ಚಿತ್ರ ನೋಡೋದು ಅಪರಾಧವೆ?]
ಅಷ್ಟಿಷ್ಟು ಕತ್ತರಿ ಪ್ರಯೋಗಗಳೊಂದಿಗೆ ಎ ಸರ್ಟಿಫಿಕೇಟ್ ಸಿನಿಮಾಗಳು ಯುಎ ಸರ್ಟಿಫಿಕೇಟ್ ಸಿನಿಮಾಗಳಾಗಿ ಟಿವಿಗಳಲ್ಲಿ ಪ್ರಸಾರ ಮಾಡಲು ಅನುಮತಿ ಇದ್ದರೂ ಪ್ರದರ್ಶಕರು ಹಾಗೂ ನಿರ್ಮಾಪಕರು ತೃಪ್ತರಾಗಿಲ್ಲ. [ಪೋರ್ನ್ ಪ್ರಿಯ ಭಾರತೀಯರು ಭಲೇ ರಸಿಕರು]
ಯು/ಎ ಸರ್ಟಿಫಿಕೆಟ್ ಇದ್ದರೆ ಸ್ಯಾಟಲೈಟ್ ಟಿವಿ ಹಕ್ಕು ಸಿಗುವುದು ಕಷ್ಟವಾಗಲಿದೆ. 'ಯು' ಸರ್ಟಿಫಿಕೆಟ್ ಇದ್ದರೆ ದೂರದರ್ಶನ ಸೇರಿದಂತೆ ಎಲ್ಲೆಡೆ ಪ್ರಸಾರಯೋಗ್ಯವಾಗಲಿದೆ (ಒನ್ ಇಂಡಿಯಾ ಸುದ್ದಿ)
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications