ಪೋರ್ನ್ ಬ್ಯಾನ್ ಮಾಡಿದರೆ ಅನಾಹುತ: ಆರ್ ಜಿವಿ
ಮುಂಬೈ, ಆಗಸ್ಟ್ 03: ಅಶ್ಲೀಲ ವೆಬ್ ತಾಣಗಳ ವಿರುದ್ಧ ಸಮರ ಸಾರಿರುವ ಸರ್ಕಾರ ಸರಿ ಸುಮಾರು 857ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಬಂದ್ ಮಾಡಿರುವುದು ಯಾವುದೇ ರೀತಿಯಿಂದಲೂ ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಚಿತ್ರಕರ್ಮಿ ರಾಮ್ ಗೋಪಾಲ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಬಳಸಿಕೊಂಡು ಸರಣಿ ಟ್ವೀಟ್ ಗಳ ಮೂಲಕ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಇಂಥ ವಿಷಯಗಳಲ್ಲಿ ಕಠಿಣ ಕ್ರಮ ಕೈಗೊಂಡಷ್ಟು ಅಪಾಯ ಜಾಸ್ತಿ. ಮಕ್ಕಳು ಪೋರ್ನ್ ನೋಡಬಾರದು ಎಂದರೆ ಅವರ ನೈಸರ್ಗಿಕ ಹಕ್ಕು ಕಿತ್ತುಕೊಂಡಂತೆ ಆಗುತ್ತದೆ. ಪೋರ್ನ್ ಬ್ಯಾನ್ ಮಾಡಿದ ಸರ್ಕಾರ ಹೇಗೆ ಮುಂದಿನ ಎಲೆಕ್ಷನ್ ಎದುರಿಸುತ್ತದೆಯೋ ನಾ ಕಾಣೆ ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ. [ಚೀನಾ ಹಾದಿಯಲ್ಲಿ ಭಾರತ, ಪೋರ್ನ್ ಸೈಟ್ಸ್ ಬಂದ್]

ಅಂತಾರಾಷ್ಟ್ರೀಯ ಮಟ್ಟದ ಸಮೀಕ್ಷೆಗಳ ಪ್ರಕಾರ, ಪೋರ್ನ್ ನೋಡುವುದರಿಂದ ಸೆಕ್ಸುಯಲ್ ಕ್ರೈಂಗಳಿಗೆ ಕುಮ್ಮುಕ್ಕು ನೀಡುತ್ತದೆ ಎಂಬುದು ಸುಳ್ಳು . ಇದರ ಬದಲು ವಯಸ್ಸಿಗೆ ಸಹಜವಾದ ಕಾಮನೆಗಳನ್ನು ತೀರಿಸಿಕೊಳ್ಳಲು ಇಂಥ ತಾಣಗಳು ಸಹಾಯಕವಾಗಿದೆ.
It's a proven fact by international surveys that instead of fuelling sexual crimes porn actually provides safer outlet for sexual repression
— Ram Gopal Varma (@RGVzoomin) August 1, 2015 ಭಾರತದಲ್ಲಿ ಇನ್ನೂ ರಿವೇಂಜ್ ಪೋರ್ನ್ ನಂಥ ದುಶ್ಚಟಗಳು ಹೆಚ್ಚಿಲ್ಲ. ಈ ಬಗ್ಗೆ ತಂತ್ರಜ್ಞಾನ ಬಳಸಿ ಹೊಸ ವಿಧಾನ ಕಂಡು ಹಿಡಿಯುವ ಬದಲು ಬ್ಯಾನ್ ಮಾಡುವುದು ದುರಂತ ಎಂದಿದ್ದಾರೆ. (ಪಿಟಿಐ)

ನೈಸರ್ಗಿಕ ಹಕ್ಕು ಕಿತ್ತುಕೊಂಡಂತೆ ಆಗುತ್ತದೆ
ಅಂತಾರಾಷ್ಟ್ರೀಯ ಮಟ್ಟದ ಸಮೀಕ್ಷೆಗಳ ಪ್ರಕಾರ, ಪೋರ್ನ್ ನೋಡುವುದರಿಂದ ಸೆಕ್ಸುಯಲ್ ಕ್ರೈಂಗಳಿಗೆ ಕುಮ್ಮುಕ್ಕು ನೀಡುತ್ತದೆ ಎಂಬುದು ಸುಳ್ಳು .
|
ಈ ವಿಷಯದ ಬಗ್ಗೆ ಮುಕ್ತ ಚರ್ಚೆ ಅಗತ್ಯ
ಈ ವಿಷಯದ ಬಗ್ಗೆ ಮುಕ್ತ ಚರ್ಚೆ ಅಗತ್ಯ, ಆತುರದ ನಿರ್ಧಾರದಿಂದ ಯುವ ಜನತೆ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
|
ವಯೋ ಸಹಜ ಪ್ರಕ್ರಿಯೆಗೆ ಅಡ್ಡಿ ಏಕೆ?
ವಯೋ ಸಹಜ ಪ್ರಕ್ರಿಯೆಗೆ ಅಡ್ಡಿ ಏಕೆ? ಸಹಜವಾಗಿ ಲೈಂಗಿಕ ಕಾಮನೆ ಹೆಚ್ಚಾಗುತ್ತದೆ. ಅದರೆ, ಅದನ್ನು ಬಲವಂತವಾಗಿ ಕಸಿದುಕೊಳ್ಳುವುದಕ್ಕೆ ಅಥವಾ ಹತ್ತಿಕ್ಕುವುದಕ್ಕೆ ಆಗುವುದಿಲ್ಲ.
|
ಸರ್ಕಾರ ಬೇರೆ ಮಾರ್ಗಗಳನ್ನು ಹುಡುಕಲಿ
ಸರ್ಕಾರ ಬೇರೆ ಮಾರ್ಗಗಳನ್ನು ಹುಡುಕಲಿ, ಕ್ರೈಂ ಕಡಿಮೆ ಮಾಡಲು ಅನೇಕ ಮಾರ್ಗಗಳಿವೆ. ರಸ್ತೆ ಬಂದ್ ಆಗಿದ್ದರೆ, ಹೊಸ ಮಾರ್ಗ ಹುಡುಕಿಕೊಳ್ಳುವಂತೆ ಪ್ರೇರಿಪಿಸಬೇಡಿ.
|
ಬ್ಯಾನ್ ಮಾಡಿದ ಸರ್ಕಾರಕ್ಕೆ ತೊಂದರೆ
ಬ್ಯಾನ್ ಮಾಡಿದ ಸರ್ಕಾರಕ್ಕೆ ತೊಂದರೆ ಕಟ್ಟಿಟ್ಟಬುತ್ತಿ, ಇಂದಲ್ಲ ನಾಳೆ ಅನಾಹುತ ಸಂಭವಿಸುತ್ತದೆ. ಅದರ ಪರಿಣಾಮ ಎದುರಿಸಬೇಕಾಗುತ್ತದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD











Click it and Unblock the Notifications