'ರಿವೇಂಜ್ ಪೋರ್ನ್' ವಿರುದ್ಧ ಮೈಕ್ರೋಸಾಫ್ಟ್ ಸಮರ
ಬೆಂಗಳೂರು, ಜುಲೈ 24: ಸಾಫ್ಟ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆ 2015 ಆರಂಭದಲ್ಲೇ ಭಾರಿ ಹೊಡೆತಕ್ಕೆ ಸಿಲುಕಿದ ಸುದ್ದಿ ತಿಳಿದಿರಬಹುದು. ಸುಮಾರು 20,355 ಕೋಟಿ ರು ನಷ್ಟ ಅನುಭವಿಸಿದರೂ ಮೈಕ್ರೋಸಾಫ್ಟ್ ಈಗ ಗೂಗಲ್ ನಂತೆ ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದೆ.
ರಿವೇಂಜ್ ಪೋರ್ನ್ ವಿರುದ್ಧ ಗೂಗಲ್ ನಂತರ ಮೈಕ್ರೋಸಾಫ್ಟ್ ಕೂಡಾ ಸಮರ ಸಾರಿದೆ. ಈ ಮೂಲಕ ಅನೇಕ ಸಂತ್ರಸ್ತರಿಗೆ ನೆರವಾಗುವ ಕಾರ್ಯಕ್ಕೆ ಮುಂದಾಗಿದೆ.
ಮೈಕ್ರೋಸಾಫ್ಟ್ ನ ಬಿಂಗ್, ಎಕ್ಸ್ ಬಾಕ್ಸ್ ಲೈವ್ ಗೇಮಿಂಗ್ ಜಾಲ, ಒನ್ ಡ್ರೈವ್, ಕ್ಲೌಡ್ ಸೇವೆ ಮುಂತಾದೆಡೆ ಅಶ್ಲೀಲತೆ ಎಂದು ಕಂಡು ಬಂದ ಚಿತ್ರ, ವಿಡಿಯೋಗಳಿಗೆ ಕಡಿವಾಣ ಬೀಳಲಿದೆ. [ಎಂಎಸ್ ಆಫೀಸ್ 2016 ವೈಶಿಷ್ಟ್ಯಗಳು]

ಏನಿದು ರಿವೇಂಜ್ ಪೋರ್ನ್: ಒಮ್ಮೆ ಪ್ರೀತಿಸುತ್ತಿದ್ದ ನಂತರ ಭಗ್ನ ಪ್ರೇಮಿಯಾಗಿರುವ ಹುಡುಗನೊಬ್ಬ ತನ್ನ ಮಾಜಿ ಅಥವಾ ಹಾಲಿ ಲವರ್ ಜೊತೆಗೆ ಕೂಡಿ ಕಳೆದ ಖಾಸಗಿ ವಿಡಿಯೋಗಳನ್ನು ಪೋರ್ನ್ ವೆಬ್ ಸೈಟ್ ಗೆ ಸೇರಿಸುವುದು. ಇದು ತಿರಸ್ಕರಿಸಿದ ಪ್ರೇಮಿಯ ವಿರುದ್ಧ ತೆಗೆದುಕೊಳ್ಳುವ ಒಂದು ದ್ವೇಷಪೂರಿತ ಚಟವಾಗಿದೆ.
ಭಗ್ನಪ್ರೇಮಿಗಳು ಈ ರೀತಿ ಖಾಸಗಿ ವಿಡಿಯೋಗಳನ್ನು ಸಾರ್ವಜನಿಕವಾಗಿ ಸಿಗುವಂತೆ ಮಾಡಿ ಪ್ರೇಮಿಯ ಮಾನ ತೆಗೆಯುತ್ತಾರೆ.
ಇದರ ನಿಯಂತ್ರಣ ಹೇಗೆ? : ಈ ಸಂದರ್ಭದಲ್ಲಿ ಇಂಥ ಅಶ್ಲೀಲ ವೆಬ್ ತಾಣಗಳಿಂದ ಸರ್ಚ್ ಇಂಜಿಗ್ ಗೆ ಬರುವ ಚಿತ್ರಗಳು, ವಿಡಿಯೋಗಳನ್ನು ಗೂಗಲ್ ಈಗಾಗಲೇ ನಿರ್ಬಂಧಿಸಿದೆ. ಈಗ ಈ ಸಾಲಿಗೆ ಮೈಕ್ರೋಸಾಫ್ಟ್ ನ ಸರ್ಚ್ ಇಂಜಿನ್ ಬಿಂಗ್ ಕೂಡಾ ಸೇರಿದೆ.
ಇತ್ತೀಚೆಗೆ ಹಾಲಿವುಡ್ ನ ಅನೇಕ ಸೆಲೆಬ್ರಿಟಿಗಳ ನಗ್ನ ಚಿತ್ರಗಳು ಈ ರೀತಿ ಸಾಮಾಜಿಕ ಜಾಲ ತಾಣ ಮುಟ್ಟಿತ್ತು. ಭಾರತಲ್ಲಿ ಎಷ್ಟೋ ಪ್ರಕರಣದಲ್ಲಿ ಇಂಥ ಸನ್ನಿವೇಶಗಳಲ್ಲಿ ಮಾನ ಹರಾಜಾದ ಕಾರಣ ಅತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ.
ಮೈಕ್ರೋಸಾಫ್ಟ್ ಹಾಗೂ ಗೂಗಲ್ ಈಗ ಅಂಥ ವಿಡಿಯೋ, ಚಿತ್ರಗಳಿಗೆ ತಡೆಯೊಡ್ಡಿದರೂ ಹಿಂಬಾಗಿಲಿನಿಂದ ಸಂತ್ರಸ್ತರಿಗೆ ಕಿರುಕುಳ ಕೊಡುವ ಪ್ರಕ್ರಿಯೆ ಮುಂದುವರೆದಿದೆ. ಅದರೆ, ಹೆಚ್ಚೆಚ್ಚು ಜನರಿಗೆ ಇಂಥ ಚಿತ್ರಗಳು ತಲುಪದಂತೆ ಮಾಡುವ ಕಾಯಕದಲ್ಲಿ ಗೂಗಲ್ ಹಾಗೂ ಮೈಕ್ರೋಸಾಫ್ಟ್ ಒಂದಾಗಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications