Get Updates
Get notified of breaking news, exclusive insights, and must-see stories!

ಎಂಸಿಡಿ ಪಟ್ಟಕ್ಕಾಗಿ ಎಎಪಿ-ಬಿಜೆಪಿ ಬಿಗ್ ಫೈಟ್: ಇಂದು ದೆಹಲಿ ಮೇಯರ್ ಆಯ್ಕೆ ಆಗ್ತಾರಾ?

ಎಎಪಿ ಮತ್ತು ಬಿಜೆಪಿ ನಡುವಿನ ಮೇಯರ್ ಸ್ಥಾನದ ಹಣಾಹಣಿ ಮುಂದುವರೆದಿದೆ. ಇಂದು ದೆಹಲಿ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಮಾಡುವ ಸಾಧ್ಯತೆಗಳು ದಟ್ಟವಾಗಿದೆ.

ನವದೆಹಲಿ ಜನವರಿ 24: ಎಎಪಿ ಮತ್ತು ಬಿಜೆಪಿ ನಡುವಿನ ಮೇಯರ್ ಸ್ಥಾನದ ಹಣಾಹಣಿ ಮುಂದುವರೆದಿದೆ. ದೆಹಲಿಯ ಮೇಯರ್ ಮತ್ತು ಉಪ ಮೇಯರ್ ಅವರನ್ನು ಆಯ್ಕೆ ಮಾಡಲು ಮುನ್ಸಿಪಲ್ ಹೌಸ್ ಇಂದು ಮತ್ತೆ ಸಭೆ ಕರೆದಿದೆ. ಇಂದು ದೆಹಲಿ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಮಾಡುವ ಸಾಧ್ಯತೆಗಳು ದಟ್ಟವಾಗಿದೆ.

ಆಮ್ ಆದ್ಮಿ ಪಕ್ಷದ (ಎಎಪಿ) ಕೌನ್ಸಿಲರ್‌ಗಳು ಪ್ರಮಾಣ ವಚನ ಬೋಧಿಸುವ ಪೀಠಾಧಿಪತಿಗಳ ನಿರ್ಧಾರದ ವಿರುದ್ಧ ಜೋರಾಗಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಜನವರಿ 6 ರಂದು ಹೊಸದಾಗಿ ಚುನಾಯಿತ 250 ಸದಸ್ಯರ ಎಂಸಿಡಿ (ದೆಹಲಿ ಮುನ್ಸಿಪಲ್ ಕಾರ್ಪೊರೇಷನ್) ಸದನದ ಚೊಚ್ಚಲ ಸಭೆಯು ಮೇಯರ್ ಮತ್ತು ಉಪಮೇಯರ್ ಅನ್ನು ಆಯ್ಕೆ ಮಾಡದೆ ಮುಂದೂಡಲ್ಪಟ್ಟಿತು. ಕಳೆದ ಸಭೆಯಲ್ಲಿ ಎಎಪಿಯ ತೀವ್ರ ವಿರೋಧದ ನಡುವೆಯೂ ಲೆಫ್ಟಿನೆಂಟ್ ಗವರ್ನರ್ ನೇಮಿಸಿದ ಆಲ್ಡರ್‌ಮೆನ್ ಮೊದಲು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸಭಾಧ್ಯಕ್ಷ ಸತ್ಯ ಶರ್ಮಾ ಸೋಮವಾರ ಹೇಳಿದ್ದಾರೆ.

134 ವಾರ್ಡ್‌ಗಳಲ್ಲಿ ಎಎಪಿಗೆ ಭರ್ಜರಿ ಜಯ

134 ವಾರ್ಡ್‌ಗಳಲ್ಲಿ ಎಎಪಿಗೆ ಭರ್ಜರಿ ಜಯ

ಡಿಸೆಂಬರ್ 4 ರಂದು ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಡೆದಿದ್ದು, ಡಿಸೆಂಬರ್ 7 ರಂದು ಮತ ಎಣಿಕೆ ನಡೆಯಿತು. ಎಎಪಿ ಚುನಾವಣೆಯಲ್ಲಿ ಸ್ಪಷ್ಟ ವಿಜಯಶಾಲಿಯಾಗಿ ಹೊರಹೊಮ್ಮಿದೆ, 134 ವಾರ್ಡ್‌ಗಳನ್ನು ಗೆದ್ದುಕೊಂಡಿದೆ. ಬಿಜೆಪಿ 104 ವಾರ್ಡ್‌ಗಳನ್ನು ಗೆದ್ದು ಎರಡನೇ ಸ್ಥಾನ ಪಡೆದರೆ, ಕಾಂಗ್ರೆಸ್ ಒಂಬತ್ತು ಸ್ಥಾನಗಳನ್ನು ಗೆದ್ದಿದೆ. ಮೇಯರ್ ಮತ್ತು ಉಪಮೇಯರ್ ಜೊತೆಗೆ, MCD ಯ ಸ್ಥಾಯಿ ಸಮಿತಿಯ ಆರು ಸದಸ್ಯರನ್ನು ಸಹ ಪುರಸಭೆಯ ಸದನದಲ್ಲಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.

ಆಮ್‌ ಆದ್ಮಿ ಪಕ್ಷಕ್ಕೆ ಠಕ್ಕರ್‌ ಕೊಡಲು ಬಿಜೆಪಿ ಸಜ್ಜು

ಆಮ್‌ ಆದ್ಮಿ ಪಕ್ಷಕ್ಕೆ ಠಕ್ಕರ್‌ ಕೊಡಲು ಬಿಜೆಪಿ ಸಜ್ಜು

ದಿಲ್ಲಿ ಪಾಲಿಕೆ ಮೇಯರ್‌ ಚುನಾವಣೆ ಕುತೂಹಲ ಘಟ್ಟದತ್ತ ಸಾಗಿದೆ. ಮೇಯರ್‌-ಉಪ ಮೇಯರ್‌ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿ, ಆಮ್‌ ಆದ್ಮಿ ಪಕ್ಷಕ್ಕೆ ಠಕ್ಕರ್‌ ಕೊಡಲು ಮುಂದಾಗಿದೆ. ಈ ಮೊದಲು ಮೇಯರ್‌ ಚುನಾವಣೆಯಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದ ಬಿಜೆಪಿ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಣತಂತ್ರ ಬದಲಿಸಿ ಹೊಸ ದಾಳ ಉರುಳಿಸಿದೆ. ದಿಲ್ಲಿ ಸಿಎಂ ಅರವಿಂದ್‌ ಕೇಜ್ರೀವಾಲ್‌ ಅವರಿಗೆ ಆಘಾತ ನೀಡಲು ತಂತ್ರ ಮಾಡಿದೆ.ಜ. 6ರಂದು ನಡೆಯಲಿರುವ ಚುನಾವಣೆ ಮೇಯರ್‌ ಸ್ಥಾನಕ್ಕೆ ರೇಖಾ ಗುಪ್ತಾ, ಉಪ ಮೇಯರ್‌ ಸ್ಥಾನಕ್ಕೆ ಕಮಲ್‌ ಬಾಗ್ರಿ ಹೆಸರನ್ನು ಬಿಜೆಪಿ ಅಂತಿಮಗೊಳಿಸಿದೆ.

ಏನಾಗಬಹುದು ಮೇಯರ್‌ ಚುನಾವಣೆ?

ಏನಾಗಬಹುದು ಮೇಯರ್‌ ಚುನಾವಣೆ?

ಶಾಲಿಮಾರ್‌ ಬಾಗ್‌ನಿಂದ ಮೂರು ಬಾರಿ ರೇಖಾ ಕೌನ್ಸಿಲರ್‌ ಆಗಿದ್ದರೆ, ಬಾಗ್ರಿ ಇದೇ ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಆಮ್‌ ಆದ್ಮಿ ಪಕ್ಷ ಪ್ರೊ. ಶೆಲ್ಲಿ ಒಬೆರಾಯ್‌ ಅವರನ್ನು ಮೇಯರ್‌ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಉಪ ಮೇಯರ್‌ ಪಟ್ಟಕ್ಕೆ ಆಲೆ ಮೊಹಮ್ಮದ್‌ ಇಕ್ಬಾಲ್‌ ಹೆಸರನ್ನು ಪ್ರಕಟಿಸಿದೆ.

ಪಾಲಿಕೆಯಲ್ಲಿ ಆಪ್‌ಗೆ ಬಹುಮತವಿದ್ದರೂ ಮೇಯರ್‌ ಚುನಾವಣೆಯಲ್ಲಿ ಏನು ಬೇಕಾದರೂ ಆಗಬಹುದು ಎಂದು ಟ್ವೀಟ್‌ ಮಾಡಿದ್ದ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್‌ ಮಾಳವೀಯಾ, ಹೊಸ ರಾಜಕೀಯ ಲೆಕ್ಕಾಚಾರದ ಸುಳಿವು ನೀಡಿದ್ದರು.

ನೂತನ ಕೌನ್ಸಿಲರ್‌ಗಳ ಪರಸ್ಪರ ಬಡಿದಾಟ

ನೂತನ ಕೌನ್ಸಿಲರ್‌ಗಳ ಪರಸ್ಪರ ಬಡಿದಾಟ

ದೆಹಲಿಯ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಗಲಾಟೆಗಳು ನಡೆದಿವೆ. ಈ ಹಿಂದೆ ಆಪ್ ಮತ್ತು ಬಿಜೆಪಿಯ ನೂತನ ಕೌನ್ಸಿಲರ್‌ಗಳ ಪರಸ್ಪರ ಬಡಿದಾಡಿಕೊಂಡಿದ್ದ ಘಟನೆ ನಡೆದಿತ್ತು. ಅಂದು ನಾಲ್ಕು ಗೋಡೆಗಳ ನಡುವೆ ನೂತನ ಕೌನ್ಸಿಲರ್‌ಗಳು ಬಡಿದಾಡಿಕೊಂಡಿದ್ದರೇ, ಜ. 09ರಂದು ಈ ಜಗಳ ದೆಹಲಿಯ ಬೀದಿಗಳಿಗೆ ಬಂದಿತ್ತು. ರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ಎರಡೂ ಪಕ್ಷಗಳು ಪರಸ್ಪರರ ವಿರುದ್ಧ ಘೊಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿವೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಎದುರು ಪ್ರತಿಭಟನೆ ನಡೆಸಲು ನೆರೆದಿದ್ದ 2,000 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಮೇಲೆ ದೆಹಲಿ ಪೊಲೀಸರು ಜಲಫಿರಂಗಿಗಳನ್ನು ಬಳಸಿ ಚದುರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+