17 ಲಕ್ಷ ಮಂದಿಗೆ 5000 ಕೋಟಿ ವಂಚಿಸಿದ ಪವನ್ ಬಂಧನ
ಹೈದರಾಬಾದ್, ಆಗಸ್ಟ್ 22: ನೋಯ್ಡಾ ಮೂಲದ ಮಲ್ಟಿ ಲೆವಲ್ ಮಾರ್ಕೆಟಿಂಗ್ ಕಂಪನಿ ಸರಿ ಸುಮಾರು 17 ಲಕ್ಷ ಜನರಿಗೆ ವಂಚನೆ ಮಾಡಿರುವ ಆರೋಪದ ಮೇಲೆ ಸೈಬರಾಬಾದ್ ಪೊಲೀಸರು eBIZ ವ್ಯವಸ್ಥಾಪಕ ನಿರ್ದೇಶಕ ಪವನ್ ಮಲ್ಹಾನ್ ಮತ್ತು ಅವರ ಪುತ್ರ ಹಿತಿಖ್ ಮಲ್ಹಾನ್ ರನ್ನು ಬಂಧಿಸಿದ್ದಾರೆ.
ಸುಮಾರು 5,000 ಕೋಟಿ ರೂ. ವಂಚಿಸಿದ ಆರೋಪ 'ಇ ಬಿಝ್' ಡಾಟ್ ಕಾಮ್ ಪ್ರೈ.ಲಿ. ಕಂಪೆನಿ ಮೇಲೆ ಹೊರೆಸಲಾಗಿದೆ. ಸೈಬರಾಬಾದ್ ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ಈ ಸಂಸ್ಥೆಯ ನಿರ್ದೇಶಕರನ್ನು ಬಂಧಿಸಿ, ವಿವಿಧ ಬ್ಯಾಂಕುಗಳಲ್ಲಿ ಅಪ್ಪ-ಮಗ ಹೊಂದಿದ್ದ 398 ಕೊಟಿ ರು ಗಳನ್ನು ವಶಕ್ಕೆ ಪಡೆದಿದ್ದಾರೆ.
"ಇ-ಕಲಿಕಾ ಕೋರ್ಸ್ ಗಳು, ಪ್ರಾಡಕ್ಟ್ ಗಳು ಮತ್ತು ಪ್ರವಾಸ ಪ್ಯಾಕೇಜ್ ಗಳನ್ನು ನೀಡುವ ಉದ್ದೇಶದಿದ ಉತ್ತರ ಪ್ರದೇಶದ ನೋಯ್ಡಾದಿಂದ 2001ರಲ್ಲಿ ಮಲ್ಹಾನ್ ಇ.ಬಿಜ್ ಕಂಪೆನಿ ಸ್ಥಾಪಿಸಿದರು. ಮಲ್ಟಿಲೆವೆಲ್ ಮಾರ್ಕೆಟಿಂಗ್ ಇದರ ಮುಖ್ಯ ಉದ್ದೇಶವಾಗಿತ್ತು. ಪ್ರತಿ ಗ್ರಾಹಕರ ಸೇರ್ಪಡೆಯೊಂದಿಗೆ ಹೆಚ್ಚು ಕಮಿಷನ್ ಸಿಗುತ್ತಿತ್ತು, ಆದರೆ, ಕಮಿಷನ್ ಸಿಗದೆ ವಂಚನೆಯಾದ ಬಳಿಕ ನಾಲ್ಕಾರು ಮಂದಿ 62 ವರ್ಷ ವಯಸ್ಸಿನ ಪವನ್ ಮಲ್ಹಾನ್ ವಿರುದ್ಧ ದೂರು ಸಲ್ಲಿಸಿದರು" ಎಂದು ಸೈಬರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಮಾಹಿತಿ ನೀಡಿದ್ದಾರೆ.

ಎಂಡಿ ಪವನ್ ಮಲ್ಜಾನ್, ಅವರ ಪತ್ನಿ ಅನಿತಾ ಮಲ್ಹಾನ್, ಮಗ ಹಿತಿಕ್ ಮಲ್ಹಾನ್ ಅವರು ಸಂಸ್ಥೆ ನೋಡಿಕೊಳ್ಳುತ್ತಿದ್ದರು. ಮುಖ್ಯವಾಗಿ ಯುವ ಜನಾಂಗವನ್ನು ಗುರಿಯನ್ನಾಗಿಸಿಕೊಂಡಿದ್ದರು. ಸಂಸ್ಥೆಯ ಸದಸ್ಯರಾಗಲು 16,821 ರು ಪಾವತಿಸಬೇಕಾಗಿತ್ತು. ನಂತರ ಈ ಸಂಸ್ಥೆಗೆ ಮತ್ತೊಬ್ಬ ಸದಸ್ಯರನ್ನು ಸೇರಿಸಿದರೆ 4% ಕಮಿಷನ್ ಸಿಗುವ ಭರವಸೆ ನೀಡಿದ್ದರು. ಕಮಿಷನ್ ಸಿಗದ ಕಾರಣ ಮೊಹಮ್ಮ ಸರೂಕ್ ಎಂಬುವರು ಮೊದಲಿಗೆ ದೂರು ದಾಖಲಿಸಿದರು, ನಂತರ ಅನೇಕ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಸೈಬರಾಬಾದ್ ಪೊಲೀಸರು ಬಲೆ ಬೀಸಿ, ಸಂಸ್ಥೆಯ ಮಾಲೀಕರನ್ನು ಬಂಧಿಸಿದ್ದಾರೆ.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ












Click it and Unblock the Notifications