ರಾತ್ರೋ ರಾತ್ರಿ ಪುಟ್ಟ ಕಂದಮ್ಮಗಳನ್ನು ಹೂತುಹಾಕಿದ ಡ್ರೈವರ್
ಹೈದರಾಬಾದ್, ನವೆಂಬರ್ 3: ರಾತ್ರೋ ರಾತ್ರಿ ಇಬ್ಬರು ಪುಟ್ಟ ಕಂದಮ್ಮಗಳನ್ನು ಎತ್ತಿಕೊಂಡು ಹೋಗಿ ಮಣ್ಣೊಳಗೆ ಸಮಾಧಿ ಮಾಡಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರಿನ ವ್ಯಕ್ತಿಯೊಬ್ಬ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾನೆ. ಆರೋಪಿ ಒಬ್ಲಸು ಬಿಬಿಎಂಪಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ನಾಗಮ್ಮ ಎಂಬುವರ ಇಬ್ಬರು ಮಕ್ಕಳನ್ನು ಕೊಂದಿದ್ದಾನೆ.
ಅಕ್ರಮ ಸಂಬಂಧದಿಂದ ಹುಟ್ಟಿದ ನವಜಾತ ಶಿಶುವನ್ನು ಕೊಂದ ಪಾಪಿ ಅಪ್ಪನ ಬಂಧನ
ಒಬ್ಲಸು , ನಾಗಮ್ಮ ಹಾಗೂ ಪತಿ ಗಣೇಶ್ ಬೆಂಗಳೂರು ಮುನಿಸಿಪಲ್ ಕಾರ್ಪೊರೇಷನ್ ನಲ್ಲಿ ಕೆಲಸ ಮಾಡುತ್ತಿದ್ದರು ಆ ವೇಳೆ ಇಬ್ಬರಿಗೂ ಪರಿಚಯವಾಗಿ ಪ್ರೀತಿ ಬೆಳೆದಿದೆ. ಒಬ್ಲಸು ನಾಗಮ್ಮಳನ್ನು ಮದುವೆಯಾಗುತ್ತೇನೆ ಎಂದು ಮಾತುಕೊಟ್ಟಿದ್ದ, ಹಾಗೆಯೇ ಆತನ ಮೊದಲ ಪತ್ನಿಗೆ ವಿಷಯತಿಳಿಸಲು ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದ, ನಂತರ ಆತನ ಪತ್ನಿ ಈ ಮದುವೆಗೆ ಒಪ್ಪುವುದಿಲ್ಲ ಎಂದು ವಿರೋಧ ಮಾಡಿದ್ದಳು.
ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ!
ಅಂದು ನಾಗಮ್ಮನ ಮುದ್ದಾದ ಮಕ್ಕಳಾದ ದರ್ಶಿನಿ(3) ಮತ್ತು 6 ತಿಂಗಳ ಮಗುವನ್ನು ಎತ್ತಿಕೊಂಡು ಹೋಗಿ ಕೊಲೆ ಮಾಡಿ ಸಮಾಧಿ ಮಾಡಿದ್ದಾನೆ, ನಾಗಮ್ಮ ಕೇಳಿದರೆ ಸ್ನೇಹಿತರ ಮನೆಯಲ್ಲಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ. ಬಳಿಕ ಬೆಂಗಳೂರು ಬಂದ ನಂತರ ಈ ನಾಗಮ್ಮ ಪತಿ ಗಣೇಶ್ಗೆ ಅನುಮಾನ ಬಂದಿದೆ, ಬಳಿಕ ವಿಚಾರಿಸಿದಾಗ ವಿಷಯ ಬಹಿರಂಗಗೊಂಡಿದೆ. ಬಳಿಕ ಸಮಾಧಿ ಮಾಡಿದ ಜಾಗಕ್ಕೆ ತೆರಳಿ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.