'ಹಲ್ಲು ವಕ್ರ' ಎಂದು ಮಹಿಳೆಗೆ ತಲಾಖ್ ನೀಡಿದ ಪತಿ
ಹೈದರಾಬಾದ್, ನವೆಂಬರ್ 1: ಪತ್ನಿ ಹಲ್ಲು ನೋಡಲು ಚೆನ್ನಾಗಿಲ್ಲ ಎಂದು ಕಾರಣ ಕೊಟ್ಟು ಪತಿ ತಲಾಖ್ ನೀಡಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ.
ತಲಾಖ್ ನೀಡಲು ಒಂದಲ್ಲಾ ಒಂದು ಕಾರಣವನ್ನು ಹುಡುಕುತ್ತಿರುತ್ತಾರೆ, ಹೆಂಡತಿ ಅಡುಗೆ ಚೆನ್ನಾಗಿ ಮಾಡಿಲ್ಲವೆಂದರೂ ತಲಾಖ್, ಹೆಂಡತಿ ಹೆಚ್ಚು ಮಾತನಾಡುವುದಿಲ್ಲ ಎಂದರೂ ತಲಾಖ್ ಒಟ್ಟಿನಲ್ಲಿ ತಲಾಖ್ ನೀಡಲು ಒಂದು ಕಾರಣ ಬೇಕಷ್ಟೆ.
ಪತ್ನಿಯ ಹಲ್ಲು ವಕ್ರವಾಗಿದೆ ಎಂದು ಸಬೂಬು ನೀಡಿ ತಲಾಖ್ ನೀಡಿದ್ದಾನೆ. ರುಖ್ಸಾನಾ ಬೇಗಂ ಮುಸ್ತಫಾ ಅವರನ್ನು 2019ರ ಜೂನ್ 27ರಂದು ವಿವಾಹವಾಗಿದ್ದರು. ಆದರೆ ಅತ್ತೆಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ರುಖ್ಸಾನಾ ದೂರಿದ್ದಾರೆ.

ಅಕ್ಟೋಬರ್ 31ರಂದು ಐಪಿಸಿ ಸೆಕ್ಸನ್ 498ರ ಅಡಿಯಲ್ಲಿ ಮುಸ್ತಫಾ ವಿರುದ್ಧ ವರದಕ್ಷಿಣೆ ಕಿರುಕುಳ, ತ್ರಿವಳಿ ತಲಾಖ್ ಪ್ರಕರಣ ದಾಖಲಿಸಲಾಗಿದೆ.
ಸರ್ಕಲ್ ಇನ್ಸ್ಪೆಕ್ಟರ್ ಕೆ. ಚಂದ್ರಶೇಖರ್ ಅವರು ಹೇಳುವ ಪ್ರಕಾರ ಬೇಗಮ್ ಮುಸ್ತಫಾ ವಿರುದ್ಧ ದೂರು ದಾಖಲಿಸಿದ್ದಾರೆ, ಮುಸ್ತಫಾ ಅವರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲ ತನ್ನ ಹಲ್ಲು ವಕ್ರವಾಗಿದೆ ಎನ್ನುವ ಕಾರಣಕ್ಕೆ ತಲಾಖ್ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಹೇಳಿದ್ದಾರೆ.
ಮದುವೆ ಸಂದರ್ಭದಲ್ಲಿ ಮುಸ್ತಫಾ ಮನೆ ಕಡೆಯವರು ಎಷ್ಟೋ ಹಲವು ವಸ್ತುಗಳನ್ನು ವರದಕ್ಷಿಣೆಯಾಗಿ ಪಡೆದಿದ್ದರು. ಮದುವೆ ಬಳಿಕವೂ ಅತ್ತೆ ಮನೆಯಲ್ಲಿ ಹಣ, ಚಿನ್ನವನ್ನು ತರುವಂತೆ ಪೀಡಿಸುತ್ತಿದ್ದರು. ನನಗೆ ವಕ್ರ ಹಲ್ಲು ಇರುವುದು ಮುಸ್ತಫಾ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಮನೆಯಲ್ಲಿ 10-15ದಿನಗಳ ಕಾಲ ಕೂಡಿ ಹಾಕಿದ್ದರು. ಬಳಿಕ ಆಕೆ ಆರೋಗ್ಯ ಸರಿ ಇಲ್ಲದಾದಾಗ ತಾಯಿ ಮನೆಗೆ ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications