Get Updates
Get notified of breaking news, exclusive insights, and must-see stories!

ಬೇಂದ್ರೆ ನಿವಾಸಕ್ಕೆ ಅಮಿತ್‌ ಶಾ ಭೇಟಿ, ಸಕ್ಕರೆ ನೀಡಿ ಸ್ವಾಗತ

ಧಾರವಾಡ, ಏಪ್ರಿಲ್ 12: ಕಳೆದ ಬಾರಿಯ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಕುವೆಂಪು ಅವರ ನಿವಾಸಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇಂದು ವರಕವಿ ಬೇಂದ್ರೆ ಅವರ ನಿವಾಸಕ್ಕೆ ಭೇಟಿ ನೀಡಿದರು.

ಸಾಧನಕೇರಿಗೆ ರಾಜ್ಯ ಬಿಜೆಪಿ ಮುಖಂಡರ ಜೊತೆ ತೆರಳಿದ ಅಮಿತ್ ಶಾ ಅವರು ಮೊದಲಿಗೆ ಬೇಂದ್ರೆ ಭವನಕ್ಕೆ ಭೇಟಿ ನೀಡಿ ಅಲ್ಲಿ ಕೆಲ ಸಮಯ ಕಳೆದರು ನಂತರ ಅಲ್ಲಿಂದ ಪಕ್ಕದಲ್ಲೇ ಇರುವ ಬೇಂದ್ರೆ ಅವರ ನಿವಾಸಕ್ಕೆ ತೆರಳಿದರು.

ಬೇಂದ್ರೆ ಅವರು ಇದ್ದಾಗಿನಿಂದಲೂ ಮನೆಗೆ ಬರುವವರಿಗೆ ಸಕ್ಕರೆ ನೀಡಿ ಸ್ವಾಗತಿಸುವ ಪರಿಪಾಠ ಇಂದೂ ಸಹ ಬೇಂದ್ರೆ ಕುಟುಂಬಸ್ಥರು ಮುಂದುವರೆಸಿದ್ದು, ಅಮಿತ್ ಶಾ ಅವರಿಗೆ ಸಕ್ಕರೆ ನೀಡಿ ಸ್ವಾಗತಿಸಿದರು.

Amith Shah visits Bendres House in Sadanakeri

ಬೇಂದ್ರೆ ಅವರ ಸೊಸೆ ಪದ್ಮಾಬಾಯಿ ಬೇಂದ್ರೆ ಅವರನ್ನು ಶಾ ಸನ್ಮಾನಿಸಿದರು. ಬೆಂದ್ರೆ ಕುಟುಂಬದಿಂದ ನಾಕು ತಂತಿಯ ಇಂಗ್ಲಿಷ್ ಅನುವಾದ ಕವನ ಗುಚ್ಚ ಪುಸ್ತಕ ನೀಡಿದರು. ಬೇಂದ್ರೆ ಪ್ರತಿಷ್ಠಾನದ ಅಧ್ಯಕ್ಷ ಡಾ. ಡಿ.ಎಂ.ಹಿರೇಮಠ್ ಅವರು ಬೇಂದ್ರೆ ಬದುಕು, ಬರಹ ಕುರಿತ ಕಿರು ಹೊತ್ತಿಗೆಯನ್ನು ಶಾಗೆ ನೀಡಿ ಸನ್ಮಾನಿಸಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

Amith Shah visits Bendres House in Sadanakeri

ಎರಡು ದಿನಗಳ ಪ್ರಚಾರಕ್ಕೆಂದು ರಾಜ್ಯಕ್ಕೆ ಆಗಮಿಸಿರುವ ಅಮಿತ್ ಶಾ ಅವರು ಇಂದು ಬೆಳಿಗ್ಗೆ ಹುಬ್ಬಳ್ಳಿಯ ಸಿದ್ಧಾರೂಡ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು, ನಂತರ ಲೋಕಸಭೆಯಲ್ಲಿ ಸುಗಮ ಅಧಿವೇಶನಕ್ಕೆ ಪ್ರತಿಪಕ್ಷಗಳ ಅಸಹಕಾರ ಖಂಡಿಸಿ ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಿದರು. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ, ರಾಜೀವ ಚಂದ್ರಶೇಖರ ಸೇರಿದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರ, ಮುಖಂಡರು ಅಮಿತ್ ಶಾ ಜೊತೆಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+