ದಾವಣೆಗೆರೆಯಲ್ಲಿ ಆನೆಗಳ ಪತ್ತೆಗೆ ಡ್ರೋಣ್ ಬಳಕೆ: ಅಭಿಷೇಕ್ ಗೋಯಲ್
ದಾವಣಗೆರೆ, ಡಿಸೆಂಬರ್ 15: ದಾವಣೆಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಕಾಡಾನೆಯೊಂದು ನುಗ್ಗಿ ಇಬ್ಬರು ನಾಗರಿಕರನ್ನು ಗಾಯಗೊಳಿಸಿದ ಹಿನ್ನೆಲೆಯಲ್ಲಿ ದಾವಣಗೆರೆ ಪೊಲೀಸರು ಆನೆಗಳ ಪತ್ತೆಗೆ ಡ್ರೋಣ್ ಕ್ಯಾಮರಾ ಬಳಕೆ ಮಾಡಿದ್ದಾರೆ ಎಂದು ದಾವಣೆಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.
A wild elephant 🐘 went berserk &fatally wounded two civilians.
— Abhishek Goyal (@goyal_abhei) December 15, 2017
In this emergency, Davangere Police used police #drone camera to locate & track the elephant in Honnali limits & warn the civilians in its path & inform forest officials pic.twitter.com/bu3PxuJudi
ಹೊನ್ನಾಳಿ ತಾಲೂಕಿನ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಆನೆಗಳ ದಾಳಿಯಿಂದಾಗಿ ಮೂವರು ಗಾಯಗೊಂಡಿದ್ದಾರೆ. ಕಮ್ಮರಘಟ್ಟದಲ್ಲಿ ರುದ್ರೀಬಾಯಿ, ದೇವರ ಹೊನ್ನಾಳಿಯಲ್ಲಿ ಭರ್ಮಪ್ಪ, ಬೆನಕನಹಳ್ಳಿಯಲ್ಲಿ ನಾಗರಾಜ, ಗಾಯಗೊಂಡಿದ್ದರು.
ಹೊನ್ನಾಳಿಯಲ್ಲಿ ಕಾಡಾನೆ ದಾಳಿ, ಮೂವರಿಗೆ ಗಂಭೀರ ಗಾಯ
ಕಾಡಾನೆಗಳು ಶಿವಮೊಗ್ಗ-ದಾವಣೆಗೆರೆ ಗಡಿ ಭಾಗದಲ್ಲಿ ನಿರಂತರವಾಗಿ ಸಂಚರಿಸುತ್ತಿವೆ. ಹೊನ್ನಾಳಿ, ಶಿಕಾರಿಪುರ, ನ್ಯಾಮತಿ, ಶಿವಮೊಗ್ಗ ತಾಲೂಕಿನ ಗಡಿಭಾಗದಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಕಣ್ಗಾವಲಿಟ್ಟಿದ್ದಾರೆ.