ಮುರುಘಾ ಶ್ರೀಗೆ ರಾಜಾಥಿತ್ಯ? ಪೊಲೀಸರ ವೈಫಲ್ಯವೇನು?
ಬೆಂಗಳೂರು, ಸೆಪ್ಟೆಂಬರ್ 03: ಮುರುಘಾ ಮಠದ ಶಿವಮೂರ್ತಿ ಮುರುಘಾ ಶ್ರೀಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಕೂಡಲೇ ಮೈಸೂರಿನ ಒಡನಾಡಿ ಸಂಸ್ಥೆಯು ನಜರಾಬಾದ್ ಪೊಲೀಸರಿಗೆ ದೂರನ್ನು ದಾಖಲಿಸಿದ್ದರು. ಮುರುಘಾ ಶ್ರೀಗಳು ಪ್ರಭಾವಿಗಳಾಗಿದ್ದರಿಂದ ತನಿಖೆಯ ದಿಕ್ಕು ಬದಲಾಗುವ ಎಲ್ಲಾ ವ್ಯವಸ್ಥೆಗಳುಗುತ್ತಿವೆ ಎನ್ನುವ ಅನುಮಾನ ಮೂಡಿತ್ತು. ಇದರ ನಡುವೆ ನ್ಯಾಯಾಧೀಶರ ಮುಂದೆ ಸಂತ್ರಸ್ತರು ಹೇಳಿಕೆಯನ್ನು ದಾಖಲಿಸಿದರು. ಆದರೆ ಈ ಪ್ರಕರಣ ಶೀಘ್ರದಲ್ಲೇ ನಡೆಯಬೇಕಿದ್ದ ತನಿಖೆ ತಡವಾಗುತ್ತಿತ್ತು. ಇದರ ವೈಫಲ್ಯಗಳೇನು ಅನ್ನೋದರ ವರದಿ ಇಲ್ಲಿದೆ.
ಮುರುಘಾ ಶ್ರೀಗಳ ಬಂಧನದ ಬಳಿಕ ಹೈಡ್ರಾಮ ನಡೆದಿರುವ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಮುರುಘಾ ಶ್ರೀಯನ್ನು ರಾತ್ರೋರಾತ್ರಿ ಬಂಧಿಸಿದ ಚಿತ್ರದುರ್ಗ ಪೊಲೀಸರು ನ್ಯಾಯಾಧೀಶರ ಮನೆಗೆ ಕರೆದುಕೊಂಡು ಹೋಗಿದ್ದರು. ಯಾವುದೇ ಸಣ್ಣ ಕಳ್ಳತನ ಪ್ರಕರಣವಾದರೂ ಆರೋಪಿಯನ್ನು ತಮ್ಮ ಕಸ್ಟಡಿಗೆ ಕೊಡುವಂತೆ ಕೇಳುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿ ಎಂದು ಸುಮ್ಮನಾಗಿದ್ದರು.
ಸಂತ್ರಸ್ತ ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶ್ರೀಗಳನ್ನು ತೀವ್ರ ತನಿಖೆಗೆ ಒಳಪಡಿಸಬೇಕಿದ್ದ ಪೊಲೀಸರು ನ್ಯಾಯಾಂಗದ ಮುಂದೆ ಸುಮ್ಮನಿದ್ದರು. ಇದರಿಂದ ಜೈಲಿಗೆ ಹೋಗಬೇಕಿದ್ದ ಸ್ವಾಮೀಜಿ ಅನಾರೋಗ್ಯದ ನೆಪದಲ್ಲಿ ಆಸ್ಪತ್ರೆಗೆ ದಾಖಲಾದರು.

ಮುರುಘಾ ಶರಣರ ಕೇಸ್ ತನಿಖೆಯಲ್ಲಿ ಸಾಲು ಸಾಲು ವೈಫಲ್ಯಗಳು..!
*ಮುರುಘಾ ಶರಣರ ಬಂಧಿಸಿದ ನಂತರ 24 ಗಂಟೆ ಅವಕಾಶ ಇದ್ದರೂ 2 ಗಂಟೆ ರಾತ್ರಿಯಲ್ಲಿ ಜಡ್ಜ್ ಮುಂದೆ ಹಾಜರುಪಡಿಸಿದ್ದೇಕೆ..?
*ರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಪೊಲೀಸ್ ಕಸ್ಟಡಿ ಕೇಳಿಲ್ಲ ಯಾಕೆ..?
*ನ್ಯಾಯಾಧೀಶರ ಮುಂದೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕೇಳಿದ್ಯಾಕೆ..?
*ಜೈಲಿಗೆ ಕಳುಹಿಸಿದ ನಂತರ ಅನಾರೋಗ್ಯ ನೆಪದಲ್ಲಿ ಆಸ್ಪತ್ರೆ ಸೇರಿಸೋ ಫ್ಲ್ಯಾನ್ ಆಗಿತ್ತಾ..?
*ನ್ಯಾಯಾಧೀಶರ ಅನುಮತಿ ಕೇಳದೆ ತರಾತುರಿಯಲ್ಲಿ ಆಸ್ಪತ್ರೆಗೆ ಸೇರಿಸಿದ್ಯಾಕೆ..?
*ಆರೋಪಿ ಆಸ್ಪತ್ರೆಗೆ ಸೇರಿದ ಮೇಲೂ ಕೋರ್ಟ್ ಗಮನಕ್ಕೆ ಯಾಕೆ ಕೊಟ್ಟಿಲ್ಲ..?
*ರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಕಸ್ಟಡಿಗೆ ಕೇಳದ ಪೊಲೀಸರು ಬೆಳಗ್ಗೆ ಕಸ್ಟಡಿಗೆ ಕೇಳಿದ್ಯಾಕೆ..?
* ಆರೋಪಿಯನ್ನು ಕೋರ್ಟ್ ಅನುಮತಿ ಇಲ್ಲದೆ ಬೆಂಗಳೂರಿಗೆ ಶಿಫ್ಟ್ ಮಾಡಲು ಪ್ರಯತ್ನ ಯಾಕೆ ನಡೀತು..?
* ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ ಅಂತ ಜಿಲ್ಲಾ ವೈದ್ಯರು ಹೇಳಿದ್ಯಾಕೆ..?
* ಎದೆನೋವು ಅಂತ ವೀಲ್ ಚೇರ್ ನಲ್ಲಿ ಇದ್ದವರು ಕೋರ್ಟ್ ಗೆ ನಡ್ಕೊಂಡು ಹೋಗಿದ್ಯಾಕೆ...?
* ನಡ್ಕೊಂಡು ಹೋಗಿದ್ದು ಅಷ್ಟೇ ಅಲ್ಲ ಮೊದಲ ಮಹಡಿಗೆ ಮೆಟ್ಟಿಲು ಹತ್ತಿ ಹೋದರು, ಇಲ್ಲಿ ಎದೆನೋವು ಇರಲಿಲ್ಲವೇ..?
* ವೀಲ್ ಚೇರ್ ನಲ್ಲಿ ಆಸ್ಪತ್ರೆಗೆ ಬಂದು ಐಸಿಯುಗೆ ದಾಖಲಾಗಿದ್ದವರು ಅಷ್ಟು ಬೇಗ ಚೇತರಿಸಿಕೊಂಡ್ರಾ..?
* ಕೋರ್ಟ್ಗೆ ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದ ಪೊಲೀಸರು ಮೆಡಿಕಲ್ ಟೆಸ್ಟ್ ಬಳಿಕ ಆಂಬುಲೆನ್ಸ್ ನಲ್ಲಿ ಕರೆದೊಯ್ದಿದ್ದು ಯಾಕೆ..?
* ಇಷ್ಟೆಲ್ಲಾ ಮಾಡಿರೋ ಪೊಲೀಸರು ಆರೋಪಿಯನ್ನು ಡಿವೈಎಸ್ಪಿ ಕಚೇರಿಯ ಸೆಲ್ನಲ್ಲಿ ಇಟ್ಟಿರ್ತಾರ..?
* ಒಂದೇ ದಿನದಲ್ಲಿ ಇಷ್ಟು ವೈಫಲ್ಯ ಆದರೆ ಇನ್ನು ಕಸ್ಟಡಿಯಲ್ಲಿ ಇರೋ ಮೂರು ದಿನದಲ್ಲಿ ಇನ್ನೆಷ್ಟು ವೈಫಲ್ಯ ಆಗಬಹುದು..?
* ನಿಷ್ಪಕ್ಷಪಾತ ತನಿಖೆ ಅಂದರೆ ಇದೇನಾ..?
* ಪೊಲೀಸರಿಗೆ ಹಾಗೂ ಕಾನೂನಿಗೆ ತಲೆಬಾಗ್ತೀನಿ ಅಂದ್ರು ಸ್ವಾಮೀಜಿ ಆದರೇ ಇದೆಲ್ಲಾ ಹೈಡ್ರಾಮಾಗೆ ಏನ್ ಹೇಳಬೇಕು..?
ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರ ಹೇಳುತ್ತಿದ್ದಾರೆ. ಆದರೆ ಪೊಲೀಸರು ಮಾತ್ರ ಜಾತಿ, ಮಠ, ಉಳ್ಳವರ ಲೆಕ್ಕಾಚಾರದಂತೆ ತನಿಖೆಯನ್ನು ಮಂದಗತಿಯಲ್ಲಿ ಮಾಡುತ್ತಿದ್ದಾರೆ. ಶ್ರೀಗಳ ಗೌರವಕ್ಕೆ ಚ್ಯುತಿಯಾಗದಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸಂತ್ರಸ್ತ ಅಪ್ರಾಪ್ತೆಯರ ಹೀಗೆ ಅಗುತ್ತೆ ಅಂತಲೇ ಸಾಕಷ್ಟು ಮನನೊಂದಿದ್ದರು ಎಂಬುದು ಉಲ್ಲೇಖನೀಯವಾದರು. ಪೊಲೀಸರು ಪ್ರಕರಣದ ತನಿಖೆಯನ್ನು ನಿಸ್ಪಕ್ಷಪಾತವಾಗಿ ಮಾಡಬೇಕಿದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications