Breaking: ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ: ಜಾಮೀನು ಅರ್ಜಿ ವಿಚಾರಣೆ ಸೆ.12 ಕ್ಕೆ ಮುಂದೂಡಿಕೆ
ಬೆಂಗಳೂರು, ಸೆಪ್ಟೆಂಬರ್ 08 : ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿಯ ವಿರುದ್ದದ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ಸೆ. 12ರ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕೋಮಲರವವರು ಅರ್ಜಿ ವಿಚಾರಣೆಯನ್ನು ಮುಂದೂಡಿದ್ದಾರೆ.
ಶಿವಮೂರ್ತಿ ಶ್ರೀಗೆ ಹೃದಯ ಸಂಬಂಧಿ ಖಾಯಿಲೆ ಇರುವುದರಿಂದ ಜಾಮೀನು ಮಂಜೂರು ಮಾಡಬೇಕು ಎಂಬ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಯಾಗಿದ್ದು. ಖಾಯಿಲೆಯ ವೈದ್ಯಕೀಯ ವರದಿಯನ್ನು ನೀಡುವಂತೆ ನ್ಯಾಯಲಯ ಸೂಚಿಸಿತ್ತು.
Murugha Shree Arrest : ಪೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಶಿವಮೂರ್ತಿ ಶ್ರೀಗಳ ಬಂಧನ
ಸೆ.7ರಂದು ಶ್ರೀಗೆ ಹೃದಯ ಸಂಬಂಧಿ ಸಮಸ್ಸೆ ಬಗ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಗೆ ಸೇರಿಸಲು ಮನವಿ ಮಾಡಲಾಗಿತ್ತು. ಇದಕ್ಕೆ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು.
ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ತಪಾಸಣೆ ನಡೆಸಿದ ಬಳಿಕ ಆರೋಗ್ಯ ತಪಾಸಣೆಯ ವರದಿಯ ಸಲ್ಲಿಸಲು ನ್ಯಾಯಾಲಯ ಸೂಚನೆಯನ್ನು ನೀಡಿತ್ತು. ವಿಶೇಷ ಕೋರ್ಟ್ ನ್ಯಾಯಾಧೀಶೆ ಬಿ ಕೆ ಕೋಮಲಾ ಅವರ ಪೀಠದಿಂದ ಸೂಚನೆ ನೀಡಲಾಗಿತ್ತು.
ಶ್ರೀಗಳ
ಜಾಮೀನಿಗೆ
ಸಂತ್ರಸ್ತೆಯರ
ವಿರೋಧ
ಸೆ.7
ರಂದು
ನ್ಯಾಯಾಲಯಕ್ಕೆ
ಹಾಜರಾಗಿದ್ದ
ಸಂತ್ರಸ್ತ
ಅಪ್ರಾಪ್ತೆಯರು
ಶಿವಮೂರ್ತಿ
ಶ್ರೀಗಳಿಗೆ
ಜಾಮೀನು
ನೀಡುವುದಕ್ಕೆ
ಆಕ್ಷೇಪವನ್ನು
ವ್ಯಕ್ತ
ಪಡಿಸಿದ್ದರು.
ವಾರ್ಡನ್
ರಶ್ಮಿ
ನ್ಯಾಯಾಂಗ
ಬಂಧನ
ಪೋಕ್ಸೋ
ಪ್ರಕರಣದ
ಮತ್ತೊರ್ವ
ಆರೋಪಿ
ಹಾಸ್ಟಲ್
ವಾರ್ಡನ್
ರಶ್ಮಿ
ನ್ಯಾಯಾಂಗ
ಬಂಧನವನ್ನು
ನೀಡಲಾಗಿದ್ದು.
ಆರೋಪಿ
ರಶ್ಮಿಗೆ
ಸೆಪ್ಟೆಂಬರ್
14ರ
ವರೆಗೂ
ನ್ಯಾಯಾಂಗ
ಬಂಧನ
ಮುಂದುವರೆದಿದೆ.
ನಿರೀಕ್ಷಣಾ
ಜಾಮೀನು
ಅರ್ಜಿ
ಸೋಮವಾರಕ್ಕೆ
ಪೋಕ್ಸೋ
ಪ್ರಕರಣದ
ಮತ್ತಿಬ್ಬರು
ಆರೋಪಿಗಳಾದ
ಪರಮಶಿವಯ್ಯ
ಮತ್ತು
ಬಸವಾದಿತ್ಯ
ನಿರೀಕ್ಷಣಾ
ಜಾಮೀನು
ಕೋರಿ
ಸಲ್ಲಿಸಲಾಗಿದ್ದ
ಅರ್ಜಿಯ
ವಿಚಾರಣೆಯನ್ನು
ಸೆಪ್ಟೆಂಬರ್
12
ಸೋಮವಾರಕ್ಕೆ
ಮುಂದೂಡಿಕೆಯನ್ನು
ಮಾಡಲಾಗಿದೆ.
2ನೇ
ಅಪರ
ಜಿಲ್ಲಾ
ಮತ್ತು
ಸತ್ರ
ನ್ಯಾಯಾಲಯದ
ನ್ಯಾಯಾಧೀಶೆ
ಕೋಮಲರಿಂದ
ಅರ್ಜಿಯ
ವಿಚಾರಣೆಯನ್ನು
ಮುಂದೂಡಿದ್ದಾರೆ.