ಪ್ರೀತಿಸಲು ಒಲ್ಲೆ ಎಂದವಳಿಗೆ ಬೆಂಕಿ ಇಟ್ಟ ಭಗ್ನ ಪ್ರೇಮಿ
ಚೆನ್ನೈ, ನವೆಂಬರ್ 14: 'ಪ್ರೀತ್ಸೇ ಅಂತಾ...' ಪ್ರಾಣ ತಿನ್ನುತ್ತಿದ್ದ ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿ ಹಾಗೂ ಅವರ ಕುಟುಂಬಸ್ಥರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದಾರುಣ ಘಟನೆ ಸರಸ್ವತಿ ನಗರದ ಎಜಿಎಸ್ ಕಾಲೋನಿಯಲ್ಲಿ ನಡೆದಿದೆ.ಆರೋಪಿಯನ್ನು ಆಕಾಶ್ ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ಅಡಂಬಾಕ್ಕಂನ ಎಜಿಎಸ್ ಕಾಲೋನಿಯ ಸರಸ್ವತಿನಗರದಲ್ಲಿರುವ ತನ್ನ ಗೆಳತಿ ಇಂದುಜಾ ಮನೆಗೆ ಬಂದಿದ್ದಾನೆ. ಬಾಗಿಲು ಬಡಿಯುತ್ತಿರುವುದು ಆಕಾಶ್ ಎಂದು ತಿಳಿದು ಬಾಗಿಲು ತೆಗೆಯಲು ಹಿಂಜರಿದಿದ್ದಾರೆ. ಹಾಗೂ ಹೀಗೂ ಮನ ಓಲೈಸಿದ ಆಕಾಶ್, ಇಂದುಜಾ ಜತೆ ಮಾತನಾಡಿದ್ದಾನೆ.

ಆದರೆ, ಕೆಲ ನಿಮಿಷದಲ್ಲೇ ಕೋಪಗೊಂಡು ಇಂದುಜಾಳನ್ನು ನಿಂದಿಸುತ್ತಾ ಅವರ ಮನೆಯಿಂದ ಸ್ವಲ್ಪದೂರದಲ್ಲಿದ್ದ ಪೆಟ್ರೋಲ್ ಕ್ಯಾನ್ ಹೊತ್ತು ಮತ್ತೆ ಬಂದಿದ್ದಾನೆ. ಇಂದುಜಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಇಂದುಜಾಳನ್ನು ರಕ್ಷಿಸಲು ಬಂದ ಅವರ ತಾಯಿ ರೇಣುಕಾ, ಇಂದುಜಾಳ ತಂಗಿ ನಿವೇತಾಗೂ ಬೆಂಕಿ ಆವರಿಸಿದೆ. ಕೂಗಾಟ, ಚೀರಾಟ ಕೇಳಿ ನೆರೆ ಮನೆಯವರು ಬಂದು ನೋಡಿ, ಹೌಹಾರಿದ್ದಾರೆ. ಆಕಾಶ್ ನನ್ನು ಹಿಡಿಯಲು ಇಂದುಜಾಳ ತಾಯಿ ಹಾಗೂ ನೆರೆಮನೆಯಾತ ಓಡಿದ್ದಾರೆ. ಆದರೆ, ಆಕಾಶ್ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾನೆ.
ಇಂಜಿನಿಯರಿಂಗ್ ಪದವೀಧರೆ ಇಂದುಜಾಳ ಹಾಗೂ ಅವಳ ತಾಯಿ, ತಂಗಿಯನ್ನು ಕಿಲ್ಪಾಕ್ ಮೆಡಿಕಲ್ ಕಾಲೇಜ್, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಇಂದುಜಾ ಮೃತಪಟ್ಟಿದ್ದಾರೆ. ಶೇ49ರಷ್ಟು ಸುಟ್ಟ ಗಾಯ ಹೊಂದಿರುವ ರೇಣುಕಾ ಹಾಗೂ ಶೇ23ರಷ್ಟು ಗಾಯಗೊಂಡಿರುವ ನಿವೇತಾರಿಬ್ಬರ ಆರೋಗ್ಯ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ.
ನೆರೆಮನೆಯಾತನ ನೆರವಿನಿಂದ ಪೊಲೀಸರು, ಆಕಾಶ್ ನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ. ಇಂಜಿನಿಯರಿಂಗ್ ವ್ಯಾಸಂಗ ಮಾಡುವ ಕಾಲದಿಂದಲೂ ಇಂದುಜಾಳನ್ನು ಪ್ರೀತಿಸುತ್ತಿದ್ದೆ. ನನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕೋಪಕ್ಕೆ ಹೀಗೆ ಮಾಡಿದೆ ಎಂದು ಪೊಲೀಸರಿಗೆ ಆಕಾಶ್ ಹೇಳಿಕೆ ಕೊಟ್ಟಿದ್ದಾನೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications