ಲಾಟರಿ ಕಿಂಗ್ ಪಿನ್ ಕೈ ಹಿಡಿದ ಪುಢಾರಿಗಳ ಗೆಳೆತನ
ಬೆಂಗಳೂರು/ಚೆನ್ನೈ, ಜೂ.1: ಕರ್ನಾಟಕದ ಒಂದಂಕಿ ಲಾಟರಿ ದಂಧೆಯ ತನಿಖೆಯನ್ನು ಸಿಬಿಐಗೆ ಕರ್ನಾಟಕ ಸರ್ಕಾರ ವಹಿಸಿದೆ. ಇದರಿಂದ ತಮಿಳುನಾಡಿನ ಲಾಟರಿ ಹಗರಣದ ಕೇಸುಗಳು ಮತ್ತೆ ಓಪನ್ ಆಗುತ್ತದೆಯೇ? ಈಗಲೇ ಹೇಳಲು ಬರುವುದಿಲ್ಲ. ಅದರೆ, ಕಿಂಗ್ ಪಿನ್ ಗಳಾದ ಮೈಕಲ್ ಹಾಗೂ ಸ್ಯಾಂಟಿಯಾಗೋ ಮಾರ್ಟಿನ್ ವಿಚಾರಣೆ ನಡೆಸುವ ಎಲ್ಲಾ ಸಾಧ್ಯತೆಗಳಿವೆ.
ಕಿಂಗ್ ಪಿನ್ ಸ್ಯಾಂಟಿಯಾಗೋ ಮಾರ್ಟಿನ್ ಬಳಿ ಪಿಆರ್ ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಾರಿ ರಾಜನ್ ಈಗ ಬೆಂಗಳೂರಿನ ಕಾರಾಗೃಹದಲ್ಲಿದ್ದಾರೆ. ಪಾರಿ ರಾಜನ್ ವಿಚಾರಣೆಗೊಳಪಡಿಸಿದರೆ ಮಾರ್ಟಿನ್ ಹಾಗೂ ಮೈಕಲ್ ಹೆಸರು ಹೊರಬೀಳಬಹುದು. ಬಹುಕೋಟಿ ಒಂದಂಕಿ ಲಾಟರಿ ಹಗರಣದ ಪ್ರಮುಖ ರೂವಾರಿ ಪಾರಿರಾಜನ್ನನ್ನು ಬಂಗಾರಪೇಟೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತೆ ಆದೇಶ ಹೊರಡಿಸಿದೆ. [ಒಂದಂಕಿ ಲಾಟರಿ ದಂಧೆ: ಪಾರಿ 'ಕಿಂಗ್ ಪಿನ್' ಅಲ್ಲ]
ಪುಢಾರಿಗಳ ಕೈ ಕಾಲು ಹಿಡಿದರೆ ಬಚಾವ್: ಮಾರ್ಟಿನ್ ಮೇಲೆ ಸರಿ ಸುಮಾರು 14ಕ್ಕೂ ಅಧಿಕ ಪ್ರಕರಣಗಳಿವೆ. ಭೂ ಕಬಳಿಕೆ, ಅಕ್ರಮ ಲಾಟರಿ ದಂಧೆ, ವಂಚನೆ ..ಇತ್ಯಾದಿ, ಡಿಎಂಕೆ ಜೊತೆ ಗೆಳೆತನದಿಂದ ಭೂ ವಿವಾದದಲ್ಲಿ ಸಿಲುಕಿಕೊಂಡಿದ್ದ ಮಾರ್ಟಿನ್ ಅವರ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. [ಲಾಟರಿ ಹಗರಣ ಸಿಬಿಐ ತನಿಖೆಗೆ ಕೊಟ್ಟಿದ್ದೇಕೆ?]

ಸೇಲಂ ಠಾಣೆ ಪೊಲೀಸರು 2011ರಲ್ಲಿ ಅರೆಸ್ಟ್ ವಾರೆಂಟ್ ಜೊತೆ ಮಾರ್ಟಿನ್ ಮನೆ ಮುಂದೆ ನಿಂತಾಗ ಈತನಿಗೆ ದಿಕ್ಕೇ ತೋಚದಂತಾಯಿತು. ಕೊಯಮತ್ತೂರಿನ ಸೆಂಟ್ರಲ್ ಜೈಲು ಸೇರಿದ ಮಾರ್ಟಿನ್ ವಿರುದ್ಧ ಈರೋಡಿನ ಕೊಡುಮುಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಲಾಟರಿ ಅವ್ಯವಹಾರ ಪ್ರಕರಣವೇ ಕೊನೆಯದ್ದು ಎನ್ನಬಹುದು. [ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅಮಾನತು]
ಜಾಮೀನು ಪಡೆಯಲು ಮಾರ್ಟಿನ್ ಪತ್ನಿ ಲೀಮಾ ರೋಸ್ ಅವರು ಅಂದಿನ ಸಿಎಂ ಜೆ ಜಯಲಲಿತಾ ಅವರ ಮೊರೆ ಹೊಕ್ಕಿದ್ದರು. ಅದೇನು ಡೀಲ್ ಆಯಿತೋ ಗೊತ್ತಿಲ್ಲ. ಮಾರ್ಟಿನ್ ಮೇಲೆ ಮತ್ತೆ ಪ್ರಕರಣಗಳು ದಾಖಲಾಗಲಿಲ್ಲ. ಕೋರ್ಟ್ ಕೂಡಾ ಜಾಮೀನು ನೀಡಿತು. [ಪಾರಿ ಬಾಯ್ಬಿಟ್ಟರೆ ಪೊಲೀಸರಿಗೆ ನಡುಕ]

ಭೂ ವಿವಾದ ಪ್ರಕರಣದಲ್ಲೂ ಮದ್ರಾಸ್ ಹೈಕೋರ್ಟಿನಿಂದ ಜಾಮೀನು ಪಡೆದುಕೊಂಡ ಮಾರ್ಟಿನ್, ಗೂಂಡಾ ಕಾಯ್ದೆ ಹಿಡಿತಕ್ಕೂ ಸಿಗಲಿಲ್ಲ. ಡಿಎಂಕೆ ಹಾಗೂ ಎಐಎಡಿಎಂಕೆ ರಾಜಕೀಯ ಲಾಭಕ್ಕೆ ದಾಳವಾಗಿ ನನ್ನ ಪತಿ ಬದುಕು ನಾಶವಾಯಿತು ಎಂದು ಲೀಲಾ ರೋಸ್ ಆರೋಪಿಸಿದರು. [ಲಾಟರಿ ಹಗರಣ ಸಿಬಿಐ ತನಿಖೆಗೆ : ಯಾರು, ಏನು ಹೇಳಿದರು?]
ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಅವರ ಪುತ್ರಿ ಸೆಲ್ವಿ(ಬೆಂಗಳೂರಿನ ನಿವಾಸಿ) ಕೂಡಾ ತನ್ನ ಪತಿಯನ್ನು ಜೈಲಿಗೆ ಕಳುಹಿಸಲು ಯತ್ನಿಸಿದ್ದಾರೆ ಎಂದು ಲೀಮಾ ಆರೋಪಿಸಿದರು.

ಚುನಾವಣಾ ಪ್ರಚಾರಕ್ಕೆ ತಮಿಳುನಾಡಿಗೆ ನರೇಂದ್ರ ಮೋದಿ ಅವರು ಬಂದಾಗ ಒಂದೇ ವೇದಿಕೆಯಲ್ಲಿ ಲಾಟರಿ ಕಿಂಗ್ ಪಿನ್ ಮಾರ್ಟಿನ್ ಪತ್ನಿ ಲೀಮಾ ರೋಸ್ ಹಾಗೂ ಮೋದಿ ಕಾಣಿಸಿಕೊಂಡಿದ್ದರು.
ಸುಮಾರು 7,000 ಕೋಟಿ ರು ಗೂ ಅಧಿಕ ಮೌಲ್ಯ ಲಾಟರಿ ಹಗರಣದಲ್ಲಿ ಸಿಕ್ಕಿಂ ಸರ್ಕಾರಕ್ಕೆ ಸುಮಾರು 4,500 ಕೋಟಿ ರು ನಷ್ಟವಾಗಿದೆ ಎಂದು ಸಿಬಿಐ ಹೇಳಿದೆ. ಕರ್ನಾಟಕದ ಸಿಬಿಐ ತನಿಖೆ ಈಗ ಮತ್ತೊಮ್ಮೆ ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳ ಲಾಟರಿ ದಂಧೆ ಕಿಂಗ್ ಪಿನ್ ಗಳತ್ತ ಕೂಡಾ ಕ್ಷ ಕಿರಣ ಬೀರುವ ಸಾಧ್ಯತೆ ನಿಚ್ಚಳವಾಗಿದೆ.
-
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್












Click it and Unblock the Notifications