ಚಿರತೆಗೆ ವಿಷಪ್ರಾಶನ: ಇಬ್ಬರು ಆರೋಪಿಗಳ ಬಂಧನ
ಚಾಮರಾಜನಗರ, ಸೆಪ್ಟೆಂಬರ್ 8: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಓಂಕಾರ ಅರಣ್ಯವಲಯದಲ್ಲಿ ನಡೆದ ಚಿರತೆ ವಿಷಪ್ರಾಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ತಾಲೂಕಿನ
ಓಂಕಾರ
ಅರಣ್ಯ
ವಲಯದ
ಕಾಡಂಚಿನ
ಗ್ರಾಮ
ಹಂಚೀಪುರದಲ್ಲಿ
ಎರಡು
ತಿಂಗಳ
ಹಿಂದೆ
ಚಿರತೆಗೆ
ವಿಷಪ್ರಾಶನ
ನಡೆಸಿ,
ಹತ್ಯೆಗೈದ
ಆರೋಪಕ್ಕೆ
ಸಂಬಂಧಿಸಿದಂತೆ
ಹಂಚೀಪುರದ
ಕುಮಾರ
ಮತ್ತು
ನಾಗೇಶ್
ಎಂಬುವವರನ್ನು
ಬಂಧಿಸಲಾಗಿದೆ.[ಎಚ್.ಡಿ.ಕೋಟೆ
ಗಂಗಡಹೊಸಹಳ್ಳಿಯಲ್ಲಿ
ರೈತರ
ಮೇಲೆ
ಚಿರತೆ
ದಾಳಿ]
Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ
ಉಳಿದ ಐವರು ಆರೋಪಿಗಳನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಈ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ನೀರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದ ಸಂದರ್ಭದಲ್ಲಿ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Comments
chamarajanagar gundlupet bandipur leopard crime beat distict news ಚಾಮರಾಜನಗರ ಗುಂಡ್ಲುಪೇಟೆ ಬಂಡೀಪುರ ಚಿರತೆ ಜಿಲ್ಲಾಸುದ್ದಿ
English summary
Two arrested in Leopard poison feeding case in Bandipur. Other five accused arrestd some time before. Two were requested for bhel in court. But judge handed over them judicial custody.