ಶುಕ್ರವಾರ ಬೆಳಗ್ಗಿನಿಂದಲೇ ಸನ್ ಟಿವಿ ಷೇರುಗಳು ಭರ್ಜರಿ ಏರಿಕೆ!
ಟೆಲಿಕಾಂ ಹಗರಣದಲ್ಲಿ ಮಾರನ್ ಸೋದರರಿಗೆ ಗುರುವಾರ ಶುಭ ಸುದ್ದಿ ಸಿಕ್ಕಿದ ಮೇಲೆ, ಮಾರನ್ ಬ್ರದರ್ಸ್ ಒಡೆತನದ ಸನ್ ಟಿವಿ ಷೇರುಗಳಿಗೆ ಶುಭಕಾಲ ಬಂದಿದೆ.
ಬೆಂಗಳೂರು, ಫೆಬ್ರವರಿ 03: ಟೆಲಿಕಾಂ ಹಗರಣದಲ್ಲಿ ಮಾರನ್ ಸೋದರರಿಗೆ ಗುರುವಾರ ಶುಭ ಸುದ್ದಿ ಸಿಕ್ಕಿದ ಮೇಲೆ, ಮಾರನ್ ಬ್ರದರ್ಸ್ ಒಡೆತನದ ಸನ್ ಟಿವಿ ಷೇರುಗಳಿಗೆ ಶುಭಕಾಲ ಬಂದಿದೆ. ಶುಕ್ರವಾರದಂದು ಷೇರುಪೇಟೆಯಲ್ಲಿ ಸನ್ ಟಿವಿ ಷೇರುಗಳು ಶೇ25ರಷ್ಟು ಏರಿಕೆ ಕಂಡಿದೆ.
ಟೆಲಿಕಾಂ ಹಗರಣಕ್ಕೆ ಸಂಬಂಧಿಸಿದಂತೆ ಕಲಾನಿಧಿ ಮಾರನ್ ಹಾಗೂ ದಯಾನಿಧಿ ಮಾರನ್ ಅವರ ಮೇಲಿನ ದೋಷಾರೋಪಣವನ್ನು ಸಿಬಿಐ, ಗುರುವಾರದಂದು ರದ್ದುಗೊಳಿಸಿತ್ತು. ಜತೆಗೆ ಇದಕ್ಕೆ ಜಾರಿ ನಿರ್ದೇಶನಾಲಯದಿಂದಲೂ ಯಾವುದೇ ಆಕ್ಷೇಪ ವ್ಯಕ್ತವಾಗದ ಕಾರಣ ಕೋರ್ಟಿನಿಂದ ಮಾರನ್ ಬ್ರದರ್ಸ್ ಗೆ ಒಳ್ಳೆ ಸುದ್ದಿ ಸಿಕ್ಕಿತ್ತು.

ಏರ್ ಸೆಲ್ ಮ್ಯಾಕ್ಸಿಸ್ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರನ್ ಸೋದರರ ಮೇಲಿನ ದೋಷಾರೋಪಣ ಪಟ್ಟಿ ಕಳಚಿ ಬಿದ್ದಿದೆ. ಇದಕ್ಕೆ ಪೂರಕವಾಗಿ ಶುಕ್ರವಾರದಂದು ಬಿಎಸ್ ಇಯಲ್ಲಿ ಶೇ 21 ರಿಂದ 25ರಷ್ಟು ಸನ್ ಟಿವಿ ಷೇರುಗಳು ಮೇಲ್ಮುಖವಾಗಿ ಏರಿವೆ.
ಬಿಎಸ್ ಇನಲ್ಲಿ 607 ರು ನಂತೆ ವಹಿವಾಟು ಆರಂಭಿಸಿದ ಸನ್ ಟಿವಿ ಷೇರುಗಳು ಈ ಸಮಯಕ್ಕೆ (1.26 ನಿಮಿಷ) 23.33 % ಏರಿಕೆ ಕಂಡು 128.75 ರುಪಾಯಿ ಹೆಚ್ಚಿಸಿಕೊಂಡು 680.80ರಂತೆ ವಹಿವಾಟು ನಡೆಸಿದೆ.
ಇದೆ ರೀತಿ ಎನ್ ಎಸ್ ಇನಲ್ಲಿ ಶೇ 23.44ರಷ್ಟು ಏರಿಕೆ ಕಂಡು 680.95ರಂತೆ ವಹಿವಾಟು ನಡೆಸಿದೆ. (ಒನ್ಇಂಡಿಯಾ ಸುದ್ದಿ)
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications