'ಸರ್ಚ್ ಇಂಜಿನ್' ಗೂಗಲ್ ಮೇಲೆ ಸಿಬಿಐ ಸರ್ಚ್
ನವದೆಹಲಿ, ಜು. 28: ಇಂಟರ್ನೆಟ್ ಸರ್ಚ್ ಇಂಜಿನ್ ದಿಗ್ಗಜ ಕಂಪೆನಿ ಗೂಗ್ಲ್ ವಿರುದ್ಧ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿದೆ. ಸೂಕ್ಷ್ಮ ಪ್ರದೇಶಗಳು ಹಾಗೂ ರಕ್ಷಣಾ ಕೇಂದ್ರಗಳ ನಕ್ಷೆ ರೂಪಿಸುವುದರ ಮೂಲಕ ಕಾನೂನನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಗೂಗಲ್ ಮೇಲಿದೆ. 'ಮ್ಯಾಪಥಾನ್ 2013 ಸ್ಪರ್ಧೆ' ಆಯೋಜನೆ ಮೂಲಕ ಗೂಗಲ್ ಕಾನೂನು ಉಲ್ಲಂಘಿಸಿದೆ ಎನ್ನಲಾಗಿದೆ.
ದೇಶದ ಭೂಪಟದಲ್ಲಿಲ್ಲದ ಹಲವು ಸೂಕ್ಷ್ಮ ಪ್ರದೇಶಗಳ ನಕ್ಷೆ ರೂಪಿಸಿರುವ ಕೃತ್ಯದಲ್ಲಿ ಗೂಗಲ್ ಶಾಮೀಲಾಗಿದೆ ಎಂದು ಆರೋಪಿಸಿದ್ದ ಭಾರತದ ಪ್ರಧಾನ ಸರ್ವೇಕ್ಷಣಾ ಅಧಿಕಾರಿ ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಿದ್ದರು. ತಮ್ಮ ಸಮೀಪದ ಆಸ್ಪತ್ರೆಗಳು, ರೆಸ್ಟೋರೆಂಟ್ಗಳ ಕುರಿತ ಮಾಹಿತಿಯಿರುವ ನಕ್ಷೆ ಬಿಡಿಸುವ ಸ್ಪರ್ಧೆಯನ್ನು ಗೂಗಲ್ ಸಂಸ್ಥೆಯು 2013ರ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ನಾಗರಿಕರಿಗಾಗಿ ಏರ್ಪಡಿಸಿತ್ತು.
ಈ ಬಗ್ಗೆ ಗೂಗಲ್ ದೇಶದ ನಕ್ಷೆ ರೂಪಿಸುವ ಅಧಿಕೃತ ಏಜೆನ್ಸಿಯಾದ ಭಾರತೀಯ ಸರ್ವೇಕ್ಷಣಾ ಇಲಾಖೆಯಿಂದ ಪೂರ್ವಾನುಮತಿ ಪಡೆದುಕೊಂಡಿರಲಿಲ್ಲ ಎಂದು ಅವರು ಆರೋಪಿಸಲಾಗಿದೆ. [ಭಾರತ ಭೂಪಟ ಗೂಗಲ್ ಸರ್ಚ್ ಪ್ರಮಾದ]

ಮ್ಯಾಪಥಾನ್ ಸ್ಪರ್ಧೆಯ ಬಳಿಕ ಎಚ್ಚೆತ್ತುಕೊಂಡ ಭಾರತದ ರಾಷ್ಟ್ರೀಯ ಸರ್ವೇಕ್ಷಣಾ ಇಲಾಖೆ, ಸಾರ್ವಜನಿಕವಾಗಿ ಬಹಿರಂಗಪಡಿಸಿಕೊಳ್ಳದಂಥ ಸೂಕ್ಷ್ಮವಾದ ರಕ್ಷಣಾ ಸಂಸ್ಥೆಗಳ ಕುರಿತು ನಕ್ಷೆ ರೂಪಿಸಿರುವುದನ್ನು ತನ್ನ ಜೊತೆ ಹಂಚಿಕೊಳ್ಳುವಂತೆ ಗೂಗಲ್ ಸಂಸ್ಥೆಗೆ ಸೂಚಿಸಿತ್ತು.
ಈ ಪ್ರಕರಣದ ಬಗ್ಗೆ ದೆಹಲಿ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದರು. ಇದರ ಬಳಿಕ ತನಿಖೆಯನ್ನು ಸಿಬಿಐ ವಶಕ್ಕೆ ಒಪ್ಪಿಸಲಾಗಿತ್ತು. ಅಗತ್ಯಬಿದ್ದರೆ ದೇಶದ ವಿವಿಧ ಸ್ಥಳಗಳ ಕುರಿತು ಅದು ಮಾಹಿತಿ ಸಂಗ್ರಹಿಸುವ ಸಾಧ್ಯತೆಯಿದ್ದು, ಗೂಗಲ್ ಕಂಪೆನಿಯ ಕೇಂದ್ರಸ್ಥಾನವಾದ ಅಮೆರಿಕದ ಕೆಲವು ವ್ಯಕ್ತಿಗಳನ್ನು ತನಿಖೆಗೊಳಪಡಿಸಲು ಅದು ಎಫ್ಬಿಐ ಸಹಕಾರವನ್ನು ಕೋರಲಿದೆ.[ಗೂಗಲ್ 'ಇಂಡಿಕ್' ನನ್ನ ನಿರೀಕ್ಷೆಗಳೇನು? : ಬಿ.ಜಿ ಮಹೇಶ್]
ರಾಷ್ಟ್ರೀಯ ನಕ್ಷೆ ನಿಯಮ 2005ರ ಪ್ರಕಾರ ಟೊಪೊಗ್ರಾಫಿಕ್ ಮ್ಯಾಪ್ ಡಾಟಾ ಬೇಸ್ ತಯಾರಿಸುವಾಗ ದೇಶದ ಹಿತದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳನ್ನು ಹೊರ ಹಾಕುವಂತಿಲ್ಲ. ಈ ರೀತಿ ಸಮೀಕ್ಷೆ, ಮ್ಯಾಪ್ ತಯಾರಿಕೆ, ಬಳಕೆಗೆ ಸರ್ವೆ ಆಫ್ ಇಂಡಿಯಾದ ಪೂರ್ವಾನುಮತಿಯ ಅಗತ್ಯವಿರುತ್ತದೆ. ಆದರೆ, ಗೂಗಲ್ ಯಾವುದೇ ಅನುಮತಿ ಪಡೆದುಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೂಗಲ್ ಇಂಡಿಯಾ, ನಾವು ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇವೆ. ರಾಷ್ಟ್ರೀಯ ಭದ್ರತೆ, ಪ್ರಾದೇಶಿಕ ಹಿತಾಸಕ್ತಿ ಬಗ್ಗೆ ನಮಗೂ ಕಾಳಜಿ ಇದೆ. ಆದರೆ, ಖಾಸಗಿ ಮತ್ತು ಗೌಪತ್ಯಾ ನಿಯಮಗಳ ಬಗ್ಗೆ ನಮಗೆ ಅರಿವಿರಲಿಲ್ಲ. ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.(ಪಿಟಿಐ)
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications