ರೈಲಿಂದ ಇಳಿಯುವಾಗ ಬಿದ್ದು, ಹೆತ್ತವರ ಕಣ್ಣೆದುರೇ ಪ್ರಾಣಬಿಟ್ಟ ಟೆಕ್ಕಿ
ಬೆಂಗಳೂರು, ಡಿಸೆಂಬರ್ 20: ಹೆತ್ತವರನ್ನು ಊರಿಗೆ ಕಳುಹಿಸಲು ರೈಲ್ವೆ ನಿಲ್ದಾಣಕ್ಕೆ ತೆರಳಿದ್ದ, ಅವರಿಗೆ ಹ್ಯಾಪಿ ಜರ್ನಿ ಎಂದು ಹೊರಟಿದ್ದ ರೈಲಿನಿಂದ ಕೆಳಗಿಳಿಯಲು ಹೋಗಿ ತನ್ನ ಜೀವನದ ಜರ್ನಿಯನ್ನು ಅಲ್ಲಿಯೇ ಅಂತ್ಯಗೊಳಿಸಿದ್ದ.
ವಿಕ್ರಮ್ ಮೃತರು, ವಿಕ್ರಮ್ ಅವರನ್ನು ರಕ್ಷಿಸಲು ಹೋಗಿದ್ದ ತಂದೆ ವಿಜಯನ್ ಅವರಿಗೂ ಕಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗನೊಂದಿಗೆ ಸಮಯ ಕಳೆಯಬೇಕು ಎನ್ನುವ ಆಸೆಯಲ್ಲಿ ಪೋಷಕರು ಬೆಂಗಳೂರಿಗೆ ಬಂದಿದ್ದರು. ಬೆಂಗಳೂರು ಸುತ್ತಾಡಿಸಿ ಬಳಿಕ ರೈಲು ಹತ್ತಿಸಲು ವಿಕ್ರಂ ತೆರಳಿದ್ದ, ಮಾತನಾಡುತ್ತಲೇ ರೈಲು ಹೊರಟೇ ಬಿಟ್ಟಿತು ಆತುರವಾಗಿ ಇಳಿಯಲು ಹೋಗಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.
ಕೇರಳ ಮೂಲದ ವಿಕ್ರಮ್ ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದನು, ತಂದೆ ವಿಜಯನ್ ಹಾಗೂ ತಾಯಿ ಉದಯಕುಮಾರಿ ಮಗನನ್ನು ನೋಡಲು ಐದು ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಡಿ.17ರಂದು ಅವರನ್ನು ಊರಿಗೆ ಕಳುಹಿಸುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

ರೈಲು ಹೊರಟ ವಿರುದ್ಧ ದಿಕ್ಕಿನಲ್ಲಿ ಇಳಿದ ವಿಕ್ರಮ್, ನೋಡನೋಡುತ್ತಲೇ ರೈಲಿನ ಚಕ್ರದಡಿ ಸಿಲುಕಿದ್ದ, ಅದನ್ನು ನೋಡಿದ ವಿಜಯನ್ ರೈಲಿನಿಂದ ಜಿಗಿದರೂ ಆತನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ.












Click it and Unblock the Notifications