ಬೆಂಗಳೂರು: ವಿದೇಶಕ್ಕೆ ತೆರಳುವವರಿಗೆ ಜೂನ್ 22 ರಂದು ಕೊರೊನಾ ಲಸಿಕೆ
ಬೆಂಗಳೂರು, ಜೂನ್ 21: ಉದ್ಯೋಗ ಅಥವಾ ವ್ಯಾಸಂಗದ ಸಲುವಾಗಿ ವಿದೇಶಕ್ಕೆ ತೆರಳಲು ಬಯಸಿದವರಿಗೆ ಜುಲೈ 22 ರಂದು ಕೊರೊನಾ ಲಸಿಕೆ ನೀಡಲಾಗುತ್ತಿದೆ.
ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿಯನ್ನು ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೋವಿಡ್ ಪರೀಕ್ಷೆ ಕೇಂದ್ರ ತೆರೆಯಲು ಬಿಬಿಎಂಪಿ ನಿರ್ಧಾರ
ನೂತನ ಲಸಿಕಾ ನೀತಿ ಇಂದಿನಿಂದ ಜಾರಿಗೆ ಬರುತ್ತಿರುವ ಬೆನ್ನಲ್ಲೇ ನಾಳೆ ಅಂದರೆ ಜೂನ್ 22ರಂದು ವ್ಯಾಸಂಗ ಅಥವಾ ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವವರಿಗೆ ಲಸಿಕೆ ಅಭಿಯಾನ ಆರಂಭಿಸಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ ಅವರು ಮಾಹಿತಿ ನೀಡಿದ್ದಾರೆ.
ಅಂತೆಯೇ
ಜಗತ್ತಿನ
ಅತೀ
ದೊಡ್ಡ
ಲಸಿಕಾ
ಅಭಿಯಾನ
ಆರಂಭವಾಗಿದ್ದು,
ಲಸಿಕೆ
ಪಡೆಯುವ
ಮೂಲಕ
ಅಮೂಲ್ಯ
ಲಸಿಕೆ
ಪಡೆದು
ಜೀವ
ಉಳಿಸುವಂತೆ
ಮನವಿ
ಮಾಡಿದ್ದಾರೆ.
ಈ
ಕುರಿತಂತೆ
ಟ್ವೀಟ್
ಮಾಡಿರುವ
ಅವರು,
'ವ್ಯಾಸಂಗ
ಅಥವಾ
ಉದ್ಯೋಗದ
ಸಲುವಾಗಿ
ವಿದೇಶಕ್ಕೆ
ತೆರಳುವವರಿಗೆ
ಬೆಂಗಳೂರು
ನಗರ
ವಿಶ್ವವಿದ್ಯಾಲಯದ
ಸೆಂಟ್ರಲ್
ಕಾಲೇಜು
ಆವರಣದಲ್ಲಿ
ಜೂನ್
22ರಿಂದ
ಪುನಃ
ಲಸಿಕೆ
ಅಭಿಯಾನವನ್ನು
ಆರಂಭಿಸಲಾಗುವುದು
ಎಂದು
ಹೇಳಿದ್ದಾರೆ.
ಹಾಗೆಯೇ, ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರಳುವ ಕ್ರೀಡಾಪಟುಗಳು ಕೂಡಾ ಇಲ್ಲಿಯೇ ಲಸಿಕೆ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ. ಕೊರೊನಾ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನ್ಲಾಕ್ ಘೋಷಣೆ ಮಾಡುತ್ತಿದೆ. ಇದರ ಬೆನ್ನಲ್ಲೇ ಬೆಂಗಳೂರು ತೊರೆದಿದ್ದ ಮಂದಿ ವಾಪಸು ಮರಳುತ್ತಿದ್ದಾರೆ.
ಇದರ ನಡುವೆ ರಾಜಧಾನಿಯ ಪ್ರಮುಖ ಜನ ಸಂದಣಿ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ತೆಗೆಯಲು ಬೆಂಗಳೂರು ಮಹಾ ನಗರ ಪಾಲಿಕೆ ಮುಂದಾಗಿದೆ. ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು.
ಕೊರೊನಾ ಪಾಸಿಟಿವಿಟಿ ದರ ಶೇ. 5 ಕ್ಕೆ ಇಳಿದ ಬೆನ್ನಲ್ಲೇ ಸರ್ಕಾರ ಹಂತ ಹಂತವಾಗಿ ಲಾಕ್ ಡೌನ್ ನಿಯಮ ಸಡಿಲಿಸುತ್ತಿದೆ. ಕಾರ್ಖಾನೆಗಳಲ್ಲಿ ಶೇ. 50 ರಷ್ಟು ಸಿಬ್ಬಂದಿಯಿಂದ ಕೆಲಸ ನಿರ್ವಹಿಸಲು ಅವಕಾಶ ನೀಡಲಾಗಿದೆ.
ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಿದ ಬೆನ್ನಲ್ಲೇ ಹೊರ ರಾಜ್ಯ ಹಾಗೂ ನೆರೆ ಜಿಲ್ಲೆಗಳಿಂದ ಬೆಂಗಳೂರಿಗೆ ಕಾರ್ಮಿಕರು ವಾಪಸು ಬರುತ್ತಿದ್ದಾರೆ. ವಲಸೆ ಕಾರ್ಮಿಕರಿಂದ ಮತ್ತೆ ಸೋಂಕು ಹರಡದಂತೆ ತಡೆಯಲು ಬೆಂಗಳೂರು ಮಹಾನಗರ ಪಾಲಿಕೆ ಜನ ಸಂದಣಿ ಪ್ರದೇಶದಲ್ಲಿ ಹತ್ತಕ್ಕೂ ಹೆಚ್ಚು ಹೆಚ್ಚು ಕೊರೊನಾ ಸೋಂಕು ತಪಾಸಣೆ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿದೆ.
Recommended Video