ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ದೆಹಲಿಗೆ: ಉಪಚುನಾವಣೆ ಬಗ್ಗೆ ಮಹತ್ವದ ಚರ್ಚೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 15: ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾಳೆ ದೆಹಲಿಗೆ ತೆರಳಲಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿ ಆಗಲಿದ್ದಾರೆ.

ಅಷ್ಟಿಲ್ಲದೇ ಸುಮ್ಮನೆ ಸೋನಿಯಾ, ವಿಪಕ್ಷ ನಾಯಕನ ಸ್ಥಾನ ಸಿದ್ದರಾಮಯ್ಯಗೆ ನೀಡುತ್ತಾರಾ?ಅಷ್ಟಿಲ್ಲದೇ ಸುಮ್ಮನೆ ಸೋನಿಯಾ, ವಿಪಕ್ಷ ನಾಯಕನ ಸ್ಥಾನ ಸಿದ್ದರಾಮಯ್ಯಗೆ ನೀಡುತ್ತಾರಾ?

Recommended Video

Siddaramaiah The Dialogue King In Assembly | Oneindia Kannada

ವಿಪಕ್ಷ ನಾಯಕ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡಿರುವ ಹೈಕಮಾಂಡ್‌ಗೆ ಧನ್ಯವಾದ ಅರ್ಪಿಸಲು ದೆಹಲಿಗೆ ತೆರಳುತ್ತಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರಾದರೂ, ರಾಜ್ಯ ರಾಜಕಾರಣದ ಚರ್ಚೆ ಜೋರಾಗಿಯೇ ಆಗಲಿದೆ ಎನ್ನಲಾಗಿದೆ.

ಉಪಚುನಾವಣೆಗೆ ಮುನ್ನ ಭಾರೀ ಮಹತ್ವ ಪಡೆದುಕೊಂಡ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆಉಪಚುನಾವಣೆಗೆ ಮುನ್ನ ಭಾರೀ ಮಹತ್ವ ಪಡೆದುಕೊಂಡ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ

ಕೆಪಿಸಿಸಿ ಪದಾಧಿಕಾರಿಗಳ ನೇಮಕ, ಉಪಚುನಾವಣೆ ಟಿಕೆಟ್ ಮಾತುಕತೆ, ಪ್ರಚಾರ, ಉಪಚುನಾವಣೆ ಉಸ್ತುವಾರಿ, ಭವಿಷ್ಯದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಎಲ್ಲ ವಿಷಯಗಳು ನಾಳೆ ಚರ್ಚೆ ಆಗಲಿವೆ.

Siddaramaiah Going To Meet Sonia Gandhi, Rahul Gandhi

ಪರಮೇಶ್ವರ್ ಅವರ ಮೇಲೆ ಐಟಿ ದಾಳಿ ನಡೆದಿರುವುದು ಸಿದ್ದರಾಮಯ್ಯ ಹಾದಿಯನ್ನು ಪರೋಕ್ಷವಾಗಿ ಸುಗಮನಗೊಳಿಸಿದೆ ಎನ್ನಲಾಗಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ಪಕ್ಷದೊಳಗೆ ಎದುರಾಳಿಯೇ ಇಲ್ಲದಂತಾಗಿದೆ.

ಬಿಜೆಪಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯಬಿಜೆಪಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ

ಹಾಗಾಗಿ ಉಪಚುನಾವಣೆ ಉಸ್ತುವಾರಿ ಮತ್ತು ಟಿಕೆಟ್ ಹಂಚಿಕೆ ಎರಡೂ ಜವಾಬ್ದಾರಿ ಸಿದ್ದರಾಮಯ್ಯ ಅವರ ಹೆಗಲಿಗೆ ಹೈಕಮಾಂಡ್ ಕಟ್ಟಲಿದೆ ಎನ್ನುವ ನಿರೀಕ್ಷೆ ಇದೆ.

English summary
Opposition leader Siddaramaiah going to Delhi to meet Sonia Gandhi and Rahul Gandhi tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X