ಸಿದ್ದರಾಮಯ್ಯ ದೆಹಲಿಗೆ: ಉಪಚುನಾವಣೆ ಬಗ್ಗೆ ಮಹತ್ವದ ಚರ್ಚೆ
ಬೆಂಗಳೂರು, ಅಕ್ಟೋಬರ್ 15: ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾಳೆ ದೆಹಲಿಗೆ ತೆರಳಲಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿ ಆಗಲಿದ್ದಾರೆ.
ವಿಪಕ್ಷ ನಾಯಕ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡಿರುವ ಹೈಕಮಾಂಡ್ಗೆ ಧನ್ಯವಾದ ಅರ್ಪಿಸಲು ದೆಹಲಿಗೆ ತೆರಳುತ್ತಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರಾದರೂ, ರಾಜ್ಯ ರಾಜಕಾರಣದ ಚರ್ಚೆ ಜೋರಾಗಿಯೇ ಆಗಲಿದೆ ಎನ್ನಲಾಗಿದೆ.
Recommended Video
ಕೆಪಿಸಿಸಿ ಪದಾಧಿಕಾರಿಗಳ ನೇಮಕ, ಉಪಚುನಾವಣೆ ಟಿಕೆಟ್ ಮಾತುಕತೆ, ಪ್ರಚಾರ, ಉಪಚುನಾವಣೆ ಉಸ್ತುವಾರಿ, ಭವಿಷ್ಯದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಎಲ್ಲ ವಿಷಯಗಳು ನಾಳೆ ಚರ್ಚೆ ಆಗಲಿವೆ.

ಪರಮೇಶ್ವರ್ ಅವರ ಮೇಲೆ ಐಟಿ ದಾಳಿ ನಡೆದಿರುವುದು ಸಿದ್ದರಾಮಯ್ಯ ಹಾದಿಯನ್ನು ಪರೋಕ್ಷವಾಗಿ ಸುಗಮನಗೊಳಿಸಿದೆ ಎನ್ನಲಾಗಿದ್ದು, ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅವರಿಗೆ ಪಕ್ಷದೊಳಗೆ ಎದುರಾಳಿಯೇ ಇಲ್ಲದಂತಾಗಿದೆ.
ಹಾಗಾಗಿ ಉಪಚುನಾವಣೆ ಉಸ್ತುವಾರಿ ಮತ್ತು ಟಿಕೆಟ್ ಹಂಚಿಕೆ ಎರಡೂ ಜವಾಬ್ದಾರಿ ಸಿದ್ದರಾಮಯ್ಯ ಅವರ ಹೆಗಲಿಗೆ ಹೈಕಮಾಂಡ್ ಕಟ್ಟಲಿದೆ ಎನ್ನುವ ನಿರೀಕ್ಷೆ ಇದೆ.












Click it and Unblock the Notifications