ಎಚ್ಚರ: ನೋಟ್ ಬ್ಯಾನ್ ಆಗಿ 5 ವರ್ಷವಾದರೂ ಜೀವಂತವಾಗಿದೆ exchange ದಂಧೆ
ಬೆಂಗಳೂರು, ಅ 27: ಮುಂದಿನ ತಿಂಗಳು ಅಂದರೆ ನವೆಂಬರ್ ಎಂಟಕ್ಕೆ ಒಂದು ಸಾವಿರ ಮತ್ತು ಐನೂರು ರೂಪಾಯಿ ನೋಟು ಬ್ಯಾನ್ ಆಗಿ ಐದು ವರ್ಷವಾಗುತ್ತದೆ. ಮೋಸ ಹೋಗುವವರು ಇರುವವರೆಗೆ, ಮೋಸ ಮಾಡುವವರೂ ಇರುತ್ತಾರೆ ಎನ್ನುವ ಹಾಗೇ, ಹಳೇ ನೋಟಿನಿಂದ ಇನ್ನೂ ಜನರನ್ನು ಯಾಮಾರಿಸುವ ದಂಧೆ ನಡೆಯುತ್ತಲೇ ಇದೆ.
ನೋಟು ಅಪನಗದೀಕರಣಗೊಂಡ ಆರಂಭದ ಕೆಲವು ತಿಂಗಳಲ್ಲಿ, ಹಳೇ ನೋಟಿಗೆ ಇಂತಿಷ್ಟು ಕಮಿಷನ್ ನಿಗದಿ ಮಾಡಿ, ಹೊಸ ನೋಟು ಕೊಡುವ ಅಡ್ಡದಾರಿಯನ್ನು ಹಿಡಿದವರು ತುಂಬಾ ಜನ. ಅವರೆಲ್ಲರೂ ಕೋಟ್ಯಧಿಪತಿಗಳಾದರು ಎನ್ನುವ ಸುದ್ದಿಯನ್ನು ಬಹಳಷ್ಟು ಕೇಳಿದ್ದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಹಳೇ ನೋಟು ವಿನಿಮಯ ನಿಲ್ಲಿಸಿದ ನಂತರವೂ ಕೂಡಾ ಈ ಎಕ್ಸ್ ಚೇಂಜ್ ದಂಧೆ ಸುಮಾರು ಒಂದು ವರ್ಷ ಅವ್ಯಾಹತವಾಗಿ ಮುಂದುವರಿಯುತ್ತಲೇ ಇದ್ದವು. ಕಾಲಕ್ರಮೇಣ ಇದಕ್ಕೆ ಕಡಿವಾಣ ಬಿದ್ದರೂ, ಈ ದಂಧೆಗೆ ಫುಲ್ ಸ್ಟಾಪ್ ಬಿದ್ದಿಲ್ಲ.
ಹಳೆಯ ನಿಷೇಧಿತ ನೋಟನ್ನು ಕೊಟ್ಟು, ಕಡಿಮೆ ಪರ್ಸೆಂಟ್ ನಲ್ಲಿ ಹೊಸ ನೋಟು ಪಡೆಯುವವರ ಜಾಲವನ್ನು ಬೆಂಗಳೂರು ಪೊಲೀಸರು ಒಂದು ದಿನದ ಹಿಂದೆ ಭೇದಿಸಿದ್ದಾರೆ. ಕಳೆದ ವರ್ಷದ ಜುಲೈ ಮತ್ತು ಆಗಸ್ಟ್ ನಲ್ಲೂ , ಬೆಂಗಳೂರಿನ ಜಾಲಹಳ್ಳಿ ಮತ್ತು ಯಶವಂತಪುರ ಪೊಲೀಸರು ದಂಧೆಯ ಖದೀಮರನ್ನು ಬಂಧಿಸಿದ್ದರು.

35 ಲಕ್ಷ ನಿಷೇಧಿತ ಐನೂರು, ಒಂದು ಸಾವಿರ ರೂಪಾಯಿ ಅಸಲಿ ನೋಟು
ಬೆಂಗಳೂರು ಪೂರ್ವ ವಿಭಾಗದ ಗೋವಿಂದಪುರ ಠಾಣೆಯ ಪೊಲೀಸರು ಹಳೇ ನೋಟ್ ಅನ್ನು ಚಲಾವಣೆ ಮಾಡುವ ಖತರ್ನಾಕ್ ಗ್ಯಾಂಗ್ ಅನ್ನು ಖೆಡ್ಡಾಗೆ ಕೆಡವಿದ್ದಾರೆ. ಏಳು ಮಂದಿಯ ಗ್ಯಾಂಗ್ ಇದಾಗಿದ್ದು, 35 ಲಕ್ಷ ನಿಷೇಧಿತ ಐನೂರು, ಒಂದು ಸಾವಿರ ರೂಪಾಯಿ ಅಸಲಿ ನೋಟನ್ನು ಕಡಿಮೆ ಪರ್ಸೆಂಟೇಜಿಗೆ ವಿನಿಮಯ ಮಾಡಲು ಬಕ್ರಾಗಳನ್ನು ಹುಡುಕುತ್ತಿದ್ದರು. ಆ ವೇಳೆ ಅನುಮಾನಗೊಂಡ ಪೊಲೀಸರು ಇವರನ್ನು ಕರೆದು ವಿಚಾರಣೆ ನಡೆಸಿದಾಗ, ದಂಧೆಯ ವಿವರಣೆಯನ್ನು ಪೊಲೀಸರಿಗೆ ನೀಡಿದ್ದಾರೆ.

ನಮ್ಮ ಬಳಿ ಐನೂರು ಮತ್ತು ಸಾವಿರ ರೂಪಾಯಿಯ ಅಸಲಿ ನೋಟುಗಳಿವೆ
ಈ ದಂಧೆಯ ಮೂಲ ಕೇರಳದ ಕಾಸರಗೋಡು ಎಂದು ಆರೋಪಿಗಳ ಮಾಹಿತಿಯ ನಂತರ ಅಲ್ಲಿಗೆ ತೆರಳಿದ ಪೊಲೀಸರಿಗೆ ದಂಧೆಯ ಇನ್ನಷ್ಟು ಸತ್ಯಗಳು ಸಿಕ್ಕಿವೆ. ಈ ಗ್ಯಾಂಗ್ ಬಳಿ ಅಸಲಿ ನಿಷೇಧಿತ ನೋಟುಗಳು ಇನ್ನೂ ನಲವತ್ತು ಲಕ್ಷದಷ್ಟು ಇದ್ದವು. "ನಮ್ಮ ಬಳಿ ಐನೂರು ಮತ್ತು ಸಾವಿರ ರೂಪಾಯಿಯ ಅಸಲಿ ನೋಟುಗಳಿವೆ, ಕಡಿಮೆ ಪರ್ಸೆಂಟ್ ನಲ್ಲಿ ನಮಗೆ ಹೊಸ ನೋಟು ಕೊಡಿ ಎಂದು ನಾವು ಡೀಲ್ ಮಾಡುತ್ತಿದ್ದೆವು"ಎಂದು ಗ್ಯಾಂಗಿನ ಸದಸ್ಯರಾದ ಮಂಜುನಾಥ್ ಮತ್ತು ದಯಾನಂದ ಹೇಳಿದ್ದಾರೆ.

ಬೆಂಗಳೂರು ಪೂರ್ವ ವಿಭಾಗದ ಗೋವಿಂದಪುರ ಠಾಣೆಯ ಪೊಲೀಸರು
ಗೋವಿಂದಪುರ ಪೊಲೀಸರು ಕಾಸರಗೋಡಿಗೆ ತೆರಳಿದಾಗ, ಹಳೆಯ ನೋಟನ್ನು ನೋಡಿ ಬೆಚ್ಚಿಬಿದ್ದಿದಾರೆ. ಅಸಲಿ ನಿಷೇಧಿತ ನೋಟ್ ಮಾತ್ರವಲ್ಲದೇ, ಸುಮಾರು ಆರು ಕೋಟಿ ಮೌಲ್ಯದ ನಕಲಿ ಜೆರಾಕ್ಸ್ ನೋಟು ಪತ್ತೆಯಾಗಿದೆ. ನೋಟು ಜೆರಾಕ್ಸ್ ಮಾಡಲು ಬಳಸುವ ಸಲುವಾಗಿ ತಂದಿಟ್ಟಿದ್ದ ಹದಿನಾರು ಮೂಟೆ ಪೇಪರ್ ಕೂಡಾ ಪತ್ತೆಯಾಗಿದೆ. ಹಳೆಯ ನೋಟನ್ನು ವಿನಿಮಯ ಮಾಡುವಾಗ ಜೆರಾಕ್ಸ್ ನೋಟನ್ನು ಅದರ ಮಧ್ಯೆ ಇಡುತ್ತಿದ್ದೆವು ಎಂದು ಆರೋಪಿಗಳು ತಪ್ಪೊಪ್ಪಿ ಕೊಂಡಿದ್ದಾರೆ.

ಮತ್ತೊಂದು ಕಾರ್ಯಾಚರಣೆಯಲ್ಲಿ ನಾಲ್ವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದರು
ಕಳೆದ ವರ್ಷದ ಜುಲೈ 28ರಂದು, ಮಾಗಡಿ ರಸ್ತೆಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದರು. ಮೂವತ್ತು ಲಕ್ಷ ಹಳೆಯ ಸಾವಿರ ರೂಪಾಯಿ ನೋಟನ್ನು ಇಟ್ಟುಕೊಂಡಿದ್ದ ಈ ಮೂವರನ್ನು ಜಾಲಹಳ್ಳಿ ಪೊಲೀಸರು ಖೆಡ್ಡಾಗೆ ಕೆಡವಿದ್ದರು. ಜುಲೈ 30ರಂದು ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ನಾಲ್ವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದರು. ಇವರಿಂದ 96 ಲಕ್ಷ ರೂಪಾಯಿ ಮೌಲ್ಯದ ಹಳೆಯ ಐನೂರು ಮತ್ತು ಸಾವಿರ ರೂಪಾಯಿ ನೋಟನ್ನು ಪೊಲೀಸರು ವಶ ಪಡಿಸಿಕೊಂಡಿದ್ದರು. ಆಗಲೂ, ಈ ದಂಧೆಯ ಹಿಂದೆ ಕೇರಳ ಮೂಲದ ವ್ಯಕ್ತಿಯ ಛಾಯೆಯಿದ್ದದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ. ಇಲ್ಲಿ ಪೊಲೀಸರಿಗೂ ಅರ್ಥವಾಗದ ಪ್ರಶ್ನೆ ಏನಂದರೆ, ಹೊಸ ನೋಟನ್ನು ಕೊಟ್ಟು ಹಳೆಯ ನೋಟನ್ನು ಪಡೆಯುವವರು, ಅದನ್ನು ಇಟ್ಟುಕೊಂಡು ಏನು ಮಾಡುತ್ತಾರೆ ಎನ್ನುವುದು.
-
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications