ಓಲಾ ಕ್ಯಾಬ್ ಚಾಲಕನಿಗೆ ಎಣ್ಣೆ ನಶೆ- ಕಾರು ರಾಬರಿ ಮಾಡಿದ ಕಿಲಾಡಿ ಜೋಡಿ ಅಂದರ್
ಬೆಂಗಳೂರು, ಸೆಪ್ಟೆಂಬರ್ 26: ಓಲಾ ಕ್ಯಾಬ್ ಚಾಲಕನ ಬಳಿಯಲ್ಲಿ ಬಾಡಿಗೆ ಮಾತನಾಡಿ ಕಾರಲ್ಲಿ ರೌಂಡ್ಸ್ಗೆ ಕರೆದುಕೊಂಡು ಹೋದ ದಂಪತಿ ಚಾಲಕನ ಬಳಿಯಲ್ಲಿ ಸಲುಗೆಯನ್ನು ಬೆಳೆಸಿ ಚಾಲಕನಿಗೆ ಕಂಠಪೂರ್ತಿ ಕುಡಿಸಿದ್ದಾರೆ. ಆ ಬಳಿಕ ಚಾಲಕನ್ನು ಹೆದರಿಸಿ ಕೀ ಕಸಿದುಕೊಂಡು ಕಾರನ್ನು ರಾಬರಿ ಮಾಡಿಕೊಂಡು ಹೋಗಿದ್ದ ಕಿಲಾಡಿ ಜೋಡಿಯನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ.
ಕ್ಯಾಬ್ ಚಾಲಕನ ಚನ್ನಾಗಿ ಕುಡಿದ ಬಳಿಕ ಕಿಲಾಡಿ ಜೋಡಿ ಬೆಂಗಳೂರು ನಗರದಲ್ಲಿ ರೌಡ್ಸ್ ಹಾಕಿದ್ದಾರೆ. ಚಾಲಕ ನಿದ್ರೆ ಬರುತ್ತಿದೆ ಮಲಗುತ್ತೇನೆ ಎಂದು ಹೇಳಿದ ಬಳಿಕ ಆರೋಪಿಯೇ ಕಾರಿನ ಕೀಯನ್ನು ಪಡೆದು ಕಾರನ್ನು ಚಲಾಯಿಸಿದ್ದಾನೆ. ಬೆಳಗಿನ ಜಾವ ಎಚ್ಚರಗೊಂಡ ಕ್ಯಾಬ್ ಚಾಲಕನಿಗೆ ತಾನೂ ರೌಡಿಶೀಟರ್ ಆಗಿದ್ದು ಕೀ ಕೇಳಲು ಬಂದರೆ ಸುಮ್ಮನಿರಲ್ಲ ಎಂದು ಬೆದರಿಸಿ ಈಟಿಯಸ್ ಕಾರನ್ನು ರಾಬರಿ ಮಾಡಿಕೊಂಡು ದಂಪತಿ ಎಸ್ಕೇಪ್ ಆಗಿದ್ದರು.
ಓಲಾ ಕ್ಯಾಬ್ ಚಾಲಕ ಕಾರನ್ನು ರಾಬರಿ ಮಾಡಿದ್ದರ ಬಗ್ಗೆ ಯಲಹಂಕ ನ್ಯೂ ಟೌನ್ ಪೊಲೀಸರಿಗೆ ಬಂದು ದೂರನ್ನು ನೀಡಿದ್ದ. ಈ ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು ಮಂಜ ಅಲಿಯಾಸ್ ಮೇಕೆ ಮಂಜ ಮತ್ತು ಆತನ ಪತ್ನಿ ವೇದಾವತಿ ಅಲಿಯಾಸ್ ಜ್ಯೋತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಂಪತಿ ಜೊತೆಗಿನ ಸಲುಗೆ ಜೀವದ ತೇರಿಗೆ ಕುತ್ತು
ಓಲಾ ಕ್ಯಾಬ್ ಓಡಿಸಿಕೊಂಡು ಜೀವನ ನಡೆಸುತ್ತಿದ್ದವನು ಬಾಡಿಗೆಗೆ ಬಂದರು ಎಂದು ಕಾರು ಹತ್ತಿದ್ದ. ಕಾರಿನಲ್ಲಿ ಪರಿಚಯವಾದ ದಂಪತಿಯ ಜೊತೆ ಸಲುಗೆಯನ್ನು ಬೆಳೆಸಿಕೊಂಡ. ಅಷ್ಟೇ ಬೇಕಾಗಿತ್ತು ಕಿಲಾಡಿ ಖತರ್ನಾಕ್ ಜೋಡಿಗಳಿಗೆ. ಕ್ಯಾಬ್ ಚಾಲಕ ಶಿವಶಂಕರ್ನನ್ನು ಕುಡಿಯೋಣ ಎಂದು ಒಪ್ಪಿಸಿದ್ದಾರೆ. ಹೆಣ್ಣಿನ ಜೊತೆಗೆ ಎಣ್ಣೆ ಎಂದು ಆಸೆಪಟ್ಟವನೇ ಮೇಕೆ ಮಂಜ ಮತ್ತು ಆತನ ಪತ್ನಿ ವೇದಾವತಿ ಹಾಗೂ ಕ್ಯಾಬ್ ಚಾಲಕ ಶಿವಶಂಕರ್ ಕುಡಿದ್ದಾರೆ. ಆದರೆ ಕ್ಯಾಬ್ ಚಾಲಕನಿಗೆ ಹೆಚ್ಚಾಗಿಯೇ ಕುಡಿಸಿದ್ದಾರೆ. ಕ್ಯಾಬ್ ಚಾಲಕ ಟೈಟ್ ಆಗಿದ್ದೆ ನಿದ್ದೆಗೆ ಜಾರಿದ್ದಾನೆ.

ಪತ್ನಿಯನ್ನು ಕರೆದುಕೊಂಡು ಸುತ್ತಾಟ
ಕ್ಯಾಬ್ ಚಾಲಕ ಶಿವಶಂಕರ್ ಕುಡಿದು ನಿದ್ದೆಗೆ ಜಾರಿಬಿಟ್ಟಿದ್ದ. ಈತನ ಬಳಿಯಲ್ಲಿ ಕೀ ಪಡೆದ ಮಂಜ ಅಲಿಯಾಸ್ ಮೇಕೆ ಮಂಜ ಪತ್ನಿಯನ್ನು ಮುಂದೆ ಕೂರಿಸಿಕೊಂಡಿದ್ದಾನೆ. ಹಿಂದಿನ ಸೀಟಿನಲ್ಲಿ ಕ್ಯಾಬ್ ಚಾಲಕ ನಿದ್ದೆಯನ್ನು ಮಾಡುತ್ತಿದ್ದರೇ ದಂಪತಿಗಳು ಜಾಲಿ ರೈಡ್ ಹೋಗಿ ಮಸ್ತ್ ಮಜಾವನ್ನು ಮಾಡುತ್ತಿದ್ದರು. ಬೆಳಗಿನ ಜಾವಕ್ಕೆ ಕ್ಯಾಬ್ ಚಾಲಕನಿಗೆ ಎಚ್ಚರವಾದಾಗ ನಿರ್ಜನ ಪ್ರದೇಶದಲ್ಲಿ ಕ್ಯಾಬ್ ನಿಲ್ಲಿಸಿ ಚಾಲಕ ಶಿವಶಂಕರ್ ತಾನು ರೌಡಿ ಎಂದು ಬೆದರಿಸಿ ಕಾರನ್ನು ರಾಬರಿ ಮಾಡಿಕೊಂಡು ಮೇಕೆ ಮಂಜ ಮತ್ತು ಆತನ ಪತ್ನಿ ವೇದಾವತಿ ಅಲಿಯಾಸ್ ಜ್ಯೋತಿ ಎಸ್ಕೇಪ್ ಆಗಿಬಿಟ್ಟಿದ್ದಾರೆ.

ರೌಡಿ ಆಸಾಮಿಯನ್ನು ಬಂಧಿಸಿದ ಪೊಲೀಸರು
ಮಂಜ ಅಲಿಯಾಸ್ ಮೇಕೆ ಮಂಜ ಯಲಹಂಕ ಉಪನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಈತನ ವಿರುದ್ದ ಯಲಹಂಕ ಉಪನಗರ ಠಾಣೆಯಲ್ಲಿ 01 ಕೊಲೆ ಪ್ರಕರಣ, 4 ಕೊಲೆಯತ್ನ, ಅಪಹರಣ, ರಾಬರಿ, ಸುಲಿಗೆ ಸೇರಿದಂತೆ 16ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಇದೀಗ ಈತ ಮತ್ತೊಂದು ಪ್ರಕರಣದಲ್ಲಿ ಬಂಧಿತನಾಗಿದ್ದಾನೆ. ಮೇಕೆ ಮಂಜನ ಜೊತೆ ಆತನ ಪತ್ನಿಯು ಅರೆಸ್ಟ್ ಆಗಿದ್ದಾಳೆ.

ಕ್ಯಾಬ್ ಚಾಲಕನಿಗೆ ಬೆದರಿಸಿ ರಾಬರಿ ಮಾಡಿದ್ದರು
"ಕ್ಯಾಬ್ ಚಾಲಕನನ್ನು ಬಾಡಿಗೆಗೆ ಕರೆದುಕೊಂಡು ಹೋಗಿ ಕುಡಿಸಿದ್ದಾರೆ. ಆ ಬಳಿಕ ಕುಡಿಸಿದ್ದಾರೆ. ಕ್ಯಾಬ್ ಚಾಲನಿಗೆ ಬೆದರಿಸಿ ಕಾರು ಕಸಿದುಕೊಂಡು ಹೋಗಿದ್ದರು. ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಬರಿ ಕೇಸ್ ನಲ್ಲಿ ಇಬ್ಬರನ್ನು ಬಂಧಿಸಿ ತನಿಖೆಯನ್ನು ಮುಂದುವರೆಸಿದ್ದೇವೆ" ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.
-
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications