3.52 ಲಕ್ಷ ಬೋರ್ವೆಲ್ ಆರ್ಭಟ: ಕುಸಿಯುತ್ತಿದೆ ಅಂತರ್ಜಲದ ಮಟ್ಟ
ಬೆಂಗಳೂರು, ಮಾರ್ಚ್ 24: ನಗರದಲ್ಲಿ ಎಲ್ಲೆಡೆ ನೋಡಿದರು ಬೋರ್ವೆಲ್ ನದ್ದೇ ಕಾರುಬಾರು, ಪ್ರತಿಯೊಂದು ಮನೆ, ಪ್ರತಿಯೊಂದು ಗಲ್ಲಿಯಲ್ಲೂ ಬೋರ್ವೆಲ್ ಅಗೆಯಲಾಗುತ್ತಿದ್ದು, ಅಂತರ್ಜಲ ಬತ್ತುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಖಾಸಗಿ ಬೋರ್ವೆಲ್ ಗಳ ಸಂಖ್ಯೆ ಇದೀಗ 3.61ಲಕ್ಷಕ್ಕೆ ಏರಿಕೆಯಾಗಿದೆ ಅದರಂತೆಯೇ ಕೆಲ ಪ್ರದೇಶದಲ್ಲಿ ಅಂತರ್ಜಲದ ಮಟ್ಟ 1119 ಅಡಿಗೆ ಕುಸಿದಿದೆ. ಕಳೆದ ಬಾರಿ ವಾಡಿಕೆಗಿಂತ 26 ಸೆ.ಮೀ ಹೆಚ್ಚುವರಿ ಮಳೆಯಾಗಿರುವ ಹೊರತಾಗಿಯೂ ನೀರಿನ ಮಟ್ಟ ಏರಿಕೆ ಆಗದಿರುವುದು ಆತಂಕದ ಸಂಗತಿಯಾಗಿದೆ.
ನಗರಕ್ಕೆ ಪ್ರತಿದಿನ 1350 ಎಂಎಲ್ ಡಿ ಕಾವೇರಿ ನೀರು ಪೂರೈಕೆಯಾಗುತ್ತಿದ್ದರೆ, ಬೋರ್ ವೆಲ್ ಆಶ್ರಿತ ಪ್ರದೇಶಗಳಲ್ಲಿ ಅಂತರ್ಜಲದಿಂದ ಪ್ರತಿದಿನ 400 ದಶಲಕ್ಷ ಲೀಟರ್ ನೀರು ಹೊರ ತೆಗೆಯಲಾಗುತ್ತದೆ. ಭೂ ಒಡಲು ಬಗೆಯುತ್ತಿರುವ ವಿಚಾರದಲ್ಲಿ ಈಗಾಗಲೇ ಕೇಂದ್ರ ಅಂತರ್ಜಲ ಮಂಡಳಿ ಎಚ್ಚರಿಕೆ ನೀಡಿದ್ದರೂ ಸ್ಥಳೀಯ ಪ್ರಾಧಿಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ.

ನಗರದಲ್ಲಿ ಬೋರ್ವೆಲ್ ಕೊರೆಸಲು ಜಲಮಮಡಳಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ವಿವಿ ಟವರ್ ನಲ್ಲಿರುವ ಜಿಲ್ಲಾ ಅಂತರ್ಜಲ ಕಚೇರಿಯಿಂದ ಅನುಮತಿ ನೀಡಲಾಗುತ್ತದೆ. ವಿಜ್ಞಾನಿಗಳು ಸ್ವತಃ ಪರಿಶೀಲಿಸಿ ಬೋರ್ ವೆಲ್ ಕೊರೆಯುವುದಕ್ಕೆ ಅನುಮತಿ ನೀಡುತ್ತರಾದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. 2016ರಲ್ಲಿ 3 ಲಕ್ಷವಿದ್ದ ಬೋರ್ವೆಲ್ ಗಳ ಸಂಖ್ಯೆ ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ 3.61 ಲಕ್ಷಕ್ಕೆ ಹೆಚ್ಚಳಗೊಂಡಿದೆ.
ಅಂತರ್ಜಲ ಎಲ್ಲಿ ಎಷ್ಟು?: ಆನೇಕಲ್ ತಾಲೂಕು: ಆನೇಕಲ್-1,000, ಜಿಗಣಿ-918,ಬನ್ನೇರುಘಟ್ಟ-804, ಅತ್ತಿಬೆಲೆ-853, ಸರ್ಜಾಪುರ-1,197, ಚಂದಾಪುರ-902 ಅಡಿಗಳಷ್ಟಿದೆ. ಬೆಂಗಳೂರು ಉತ್ತರ: ಅಡಕೆಮಾರನಹಳ್ಳಿ-853, ಬ್ಯಾಡರಹಳ್ಳಿ-653, ತಿಮ್ಮೇನಹಳ್ಳಿ-705, ಹೈಕೋರ್ಟ್-492, ರಾಜಾನುಕುಂಟೆ-1,099, ಚಿಕ್ಕಬಾಣಾವರ-902, ಸೊಂಡೆಕೊಪ್ಪ-589, ತೋಟಗೆರೆ, ಯಲಹಂಕ-689ಅಡಿಯಷ್ಟು ಅಂತರ್ಜಲವಿದೆ.
ಬೆಂಗಳೂರು ದಕ್ಷಿಣ : ಬೇಗೂರು-705, ಮಾರೇನಹಳ್ಳಿ-804, ತಲಘಟ್ಟಪುರ-1,000, ಕೇತೋಹಳ್ಳಿ-853, ತಾವರೆಕೆರೆ-787 ಅಡಿ ಇದೆ ಇನ್ನು ಬೆಂಗಳೂರು ಪೂರ್ವದಲ್ಲಿ ಅವಲಹಳ್ಳಿ-787, ಮಂಡೂರು-804, ದೇವಬೀಸನಹಳ್ಳಿ-754, ಕೆ.ನಾರಾಯಣಪುರ -656 ಅಡಿಗಳಷ್ಟು ಅಂತರ್ಜಲದ ಪ್ರಮಾಣವಿದೆ.
-
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಎದುರಾಗುವ ನೀರಿನ ಸಮಸ್ಯೆ ತಡೆಯಲು ಸಚಿವ ಪ್ರಿಯಾಂಕ್ ಖರ್ಗೆ ಮಾಸ್ಟರ್ ಪ್ಲಾನ್ -
Summer Alert: ಬೇಸಿಗೆಯಲ್ಲಿ ಫ್ರಿಜ್ ನೀರು ಕುಡಿಯುತ್ತಿದ್ದೀರಾ? ಮೊದಲು ಈ ವಿಷಯ ತಿಳಿದುಕೊಳ್ಳಿ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications