ದುರ್ಗಾಪೂಜೆ: ಬೆಂಗಳೂರಿನಲ್ಲಿ ಸಿದ್ಧವಾಗಲಿವೆ ಸುಮಾರು 140 ಪೂಜಾ ಪೆಂಡಾಲ್ಗಳು
ಬೆಂಗಳೂರು, ಸೆಪ್ಟೆಂಬರ್ 28: ಎರಡು ವರ್ಷಗಳ ಕೊರೋನಾ ಸಾಂಕ್ರಾಮಿಕ ಪ್ರೇರಿತ ನಿರ್ಬಂಧಗಳ ನಂತರ ಬೆಂಗಳೂರು ನಗರವು ಅತಿರಂಜಿತ ದುರ್ಗಾ ಪೂಜೆ ಉತ್ಸವಗಳಿಗೆ ಸಜ್ಜಾಗುತ್ತಿದೆ. ಮುಂದಿನ ಒಂದೆರಡು ದಿನಗಳಲ್ಲಿ ನಗರದಾದ್ಯಂತ ಸುಮಾರು 140 ಪೆಂಡಾಲ್ಗಳು ಬರಲಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಲಯ ಮಟ್ಟದಲ್ಲಿ ಮಳಿಗೆಗಳನ್ನು ಸ್ಥಾಪಿಸಲು ಈಗಾಗಲೇ 100ಕ್ಕೂ ಹೆಚ್ಚು ಅರ್ಜಿಗಳನ್ನು ಅನುಮೋದನೆ ನೀಡಿದೆ. ಹೆಚ್ಚಿನ ಅರ್ಜಿಗಳು ಪೂರ್ವ ವಲಯದ ಹಲಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಬಂದಿವೆ. ಇನ್ನೂ ಕೆಲವು ದಕ್ಷಿಣ ವಲಯದಿಂದ ಬಂದಿವೆ. ಇತರ ವಲಯಗಳಲ್ಲಿ ಆಚರಣೆಗಳು ಕಡಿಮೆಯಾಗಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದ ವಿವಿಧ ಸಂಘಗಳು ಈಗಾಗಲೇ ಆಚರಣೆಗೆ ಸಿದ್ಧತೆ ಆರಂಭಿಸಿದ್ದು, ಭಾರಿ ಜನಸ್ತೋಮ ಸೇರುವ ನಿರೀಕ್ಷೆ ಇದೆ. ನಗರದಾದ್ಯಂತ ಸುಮಾರು 140 ಪೆಂಡಾಲ್ಗಳು ಕಂಡುಬರುವ ನಿರೀಕ್ಷೆಯಲ್ಲಿದ್ದೇವೆ. ಅಕ್ಟೋಬರ್ 1 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮ್ಯಾನ್ಫೋ ಕನ್ವೆನ್ಷನ್ ಸೆಂಟರ್ನಲ್ಲಿ ಉತ್ಸವವನ್ನು ಉದ್ಘಾಟಿಸಲಿದ್ದು, ಅಕ್ಟೋಬರ್ 4 ರವರೆಗೆ ಪ್ರತಿದಿನ ಸುಮಾರು 50,000 ಜನರು ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ಬೆಂಗಳೂರು ದುರ್ಗಾಪೂಜಾ ಸಮಿತಿಯ ರುದ್ರ ಶಂಕರ್ ರಾಯ್ ಹೇಳಿದರು.
ಆಜಾದಿ ಕಿ ಅಮೃತ್ ಮಹೋತ್ಸವ ಮತ್ತು ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ನಂತರ ವರ್ಣಚಿತ್ರಕಾರ ಜಮಿನಿ ರಾಯ್ ಅವರ ಕಲಾಪ್ರಕಾರಗಳನ್ನು ಸಂಘಗಳು ಕಾರ್ಯಕ್ರಮಕ್ಕಾಗಿ ವಿವಿಧ ವಿಷಯಗಳನ್ನು ಯೋಜಿಸಿವೆ. ನಾವು ಹಿರಿಯ ಕಲಾವಿದೆ ಜಾಮಿನಿ ರಾಯ್ ಅವರ ಕಲಾಕೃತಿಗಳನ್ನು ಪ್ರಚುರಪಡಿಸಲು ಯೋಜಿಸಿದ್ದೇವೆ. ಅಲ್ಲದೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಇದು ಪಶ್ಚಿಮ ಬಂಗಾಳದ ಕಲಾವಿದರು ಪ್ರೇಕ್ಷಕರನ್ನು ರಂಜಿಸಲಿದೆ ಎಂದು 45ನೇ ವರ್ಷದ ಸಂಭ್ರಮಾಚರಣೆಯನ್ನು ಆಚರಿಸುತ್ತಿರುವ ಉತ್ತರ ಬೆಂಗಳೂರು ಸಾಂಸ್ಕೃತಿಕ ಸಮಿತಿಯ ಕಲ್ಯಾಣ್ ಪಾಠಕ್ ಹೇಳಿದರು.

ಮಂಡಲ ಕಲೆ ಪ್ರದರ್ಶನ
ಬೊಂಗೋಧರ ಕಲ್ಚರಲ್ ಅಸೋಸಿಯೇಷನ್ ಈ ವರ್ಷದ ಆಚರಣೆಗಾಗಿ ಕಲಾ ಆಧಾರಿತ ಥೀಮ್ ಅನ್ನು ಯೋಜಿಸಿದೆ. ನಾವು ಭಾರತದ ಅತ್ಯಂತ ಹಳೆಯ ಕಲಾ ಪ್ರಕಾರವಾದ ಮಂಡಲ ಕಲೆಯನ್ನು ಮೊದಲ ಆಧುನಿಕ ಕಲಾ ಪ್ರಕಾರದೊಂದಿಗೆ ಸಂಯೋಜಿಸಲು ಯೋಜಿಸಿದ್ದೇವೆ. ಪಶ್ಚಿಮ ಬಂಗಾಳದ ಕಾಳಿಘಾಟ್ ಪಟ್ಟಚಿತ್ರ ಎಂದು ಬೊಂಗೋಧರ ಕಲ್ಚರಲ್ ಅಸೋಸಿಯೇಷನ್ನ ಅಪರಾಜಿತಾ ರೇ ಹೇಳಿದರು.

ಅಕ್ಟೋಬರ್ 5ರವರೆಗೆ ಆಚರಣೆ
ನಗರದಾದ್ಯಂತ ಆಚರಣೆಗಳು ಅಕ್ಟೋಬರ್ 1ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಅಕ್ಟೋಬರ್ 5ರವರೆಗೆ ನಡೆಯಲಿದೆ. ಅವುಗಳು ಹೆಸರಾಂತ ಕಲಾವಿದರ ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಚರಣೆಗಳನ್ನು ಒಳಗೊಂಡಿರುತ್ತದೆ. ನಗರದ ಕೆಲವು ಕೆರೆಗಳು ಹಲಸೂರು ಕೆರೆ ಮತ್ತು ಸ್ಯಾಂಕಿ ಕೆರೆಗಳಲ್ಲಿ ದುರ್ಗಾ ಮೂರ್ತಿಗಳ ನಿಮಜ್ಜನಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಮಾರುಕಟ್ಟೆಗೆ ವರ್ಣರಂಜಿತ ಮೂರ್ತಿಗಳು
ನಗರವು ಪೂರ್ವ ಸಾಂಕ್ರಾಮಿಕ ಆಚರಣೆಗಳಿಗೆ ಹಿಂತಿರುಗುತ್ತಿರುವುದರಿಂದ ದುರ್ಗಾ ಮೂರ್ತಿಗಳಿಗೆ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಅವುಗಳಲ್ಲಿ ಅತ್ಯಂತ ವರ್ಣರಂಜಿತ ಮೂರ್ತಿಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ. ದೇವಿಯ ವಿವಿಧ ಅವತಾರಗಳನ್ನು ಚಿತ್ರಿಸಲು ಮತ್ತು ಪುರಾಣದ ದೃಶ್ಯಗಳನ್ನು ಚಿತ್ರಿಸುವ ವಿಗ್ರಹಗಳನ್ನು ವಿನ್ಯಾಸಗೊಳಿಸಲಾಗಿದೆ.

50 ರಿಂದ 60 ಮೂರ್ತಿ ವಿನ್ಯಾಸ
ಹೆಚ್ಚುತ್ತಿರುವ ಬೇಡಿಕೆಗಾಗಿ ವಿಗ್ರಹಗಳನ್ನು ವಿನ್ಯಾಸಗೊಳಿಸಲು ಪಶ್ಚಿಮ ಬಂಗಾಳದಿಂದ ವಿಗ್ರಹ ತಯಾರಕರು ಬೆಂಗಳೂರಿಗೆ ಆಗಮಿಸಿದ್ದಾರೆ. ನಮ್ಮ ವಿಗ್ರಹವನ್ನು ಪಶ್ಚಿಮ ಬಂಗಾಳದ ಕುಮಾರ್ತುಲಿಯ ಕಲಾವಿದ ತರುಣ್ ಪಾಲ್ ಸಿದ್ಧಪಡಿಸಿದ್ದಾರೆ. ನಗರದ ವಿವಿಧ ಪಂಗಡಗಳಿಗಾಗಿ ಅವರು ಇನ್ನೂ 50 ರಿಂದ 60 ಮೂರ್ತಿಗಳನ್ನು ವಿನ್ಯಾಸಗೊಳಿಸಿದ್ದಾರೆ ಎಂದು ಬೆಂಗಳೂರು ದುರ್ಗಾಪೂಜಾ ಸಮಿತಿಯ ರುದ್ರ ಶಂಕರ್ ರಾಯ್ ಹೇಳಿದ್ದಾರೆ.
-
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ












Click it and Unblock the Notifications