Get Updates
Get notified of breaking news, exclusive insights, and must-see stories!

ಕಬ್ಬನ್‌ ಪಾರ್ಕ್‌ನಲ್ಲಿ ನಾಯಿಗಳ ವಾಯುವಿಹಾರಕ್ಕೆ ನಿಷೇಧ ಹೇರಿದ ಸರ್ಕಾರ

ಬೆಂಗಳೂರು, ಜೂ. 26: ಬೆಂಗಳೂರಿನ ಜನಪ್ರಿಯ ವಾಯುವಿಹಾರ ತಾಣ ಕಬ್ಬನ್‌ ಪಾರ್ಕ್‌ಗೆ ಸಾರ್ವಜನಿಕರು ನಾಯಿಗಳ ವಾಯುವಿಹಾರಕ್ಕಾಗಿ ಕರೆದುಕೊಂಡು ಬರುವುದು ಇನ್ನು ಮುಂದೆ ಸಾಧ್ಯವಾಗುವುದಿಲ್ಲ. ರಾಜ್ಯ ಸರ್ಕಾರ ಜುಲೈ 1ರಿಂದ ಜಾರಿಗೆ ಬರುವಂತೆ ಕಬ್ಬನ್‌ ಪಾರ್ಕ್‌ಗೆ ನಿಷೇಧಿಸಲು ಮುಂದಾಗಿದೆ.

ಕಳೆದ ಆರು ತಿಂಗಳಿನಿಂದ ವಾಯುವಿಹಾರಿಗಳು ಮತ್ತು ಜಾಗಿಂಗ್‌ ಮಾಡುವವರಿಂದ ಪದೇ ಪದೇ ದೂರುಗಳು ಬಂದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ಸಾಕು ನಾಯಿಗಳನ್ನು ನಿಷೇಧಿಸಲು ಸರ್ಕಾರ ಮುಂದಾಗಿದೆ. ಜುಲೈ 1 ರಿಂದ ಗೇಟ್‌ಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗುವುದು ಮತ್ತು ಪ್ರತಿಕ್ರಿಯೆ ಆಧರಿಸಿ ಅಧಿಕೃತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಕಬ್ಬನ್‌ ಪಾರ್ಕ್‌ ಒಳಗೆ ಸಾಕು ನಾಯಿಗಳ ನಿಷೇಧವನ್ನು ಸರ್ಕಾರ ಪ್ರಸ್ತಾಪಿಸಿದ್ದು, ಗೇಟ್‌ಗಳಲ್ಲಿ ಭದ್ರತಾ ಸಿಬ್ಬಂದಿ ಉದ್ದೇಶಿತ ನಿಷೇಧದ ಬಗ್ಗೆ ಜನರಿಗೆ ತಿಳಿಸಲು ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಕು ನಾಯಿಗಳ ಸಾಕುವವರು ಕೆಲವು ಜನರ ತಪ್ಪಿಗೆ ಎಲ್ಲರಿಗೂ ಶಿಕ್ಷೆ ನೀಡದಂತೆ ತೋಟಗಾರಿಕೆ ಇಲಾಖೆಗೆ ಮನವಿ ಮಾಡುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಬಗ್ಗೆ Change.orgನಲ್ಲಿ 'ನೋ ಪೆಟ್ ಬ್ಯಾನ್ ಇನ್ ಕಬ್ಬನ್ ಪಾರ್ಕ್ ಫಾರ್ ಡಾಗ್ಸ್ ಸೇಕ್' ಎಂಬ ಮನವಿಗೆ ಈಗಾಗಲೇ 1,500 ಕ್ಕೂ ಹೆಚ್ಚು ಸಾಕುಪ್ರಾಣಿ ಪ್ರಿಯರ ಬೆಂಬಲ ಸಿಕ್ಕಿದೆ.

ಕಳೆದ ಆರು ತಿಂಗಳಿನಿಂದ ವಾಯುವಿಹಾರಿಗಳು ಮತ್ತು ಜಾಗಿಂಗ್‌ ಮಾಡುವವರಿಂದ ಪುನರಾವರ್ತಿತ ದೂರುಗಳ ನಂತರ ಪಾರ್ಕ್‌ನಲ್ಲಿ ಜುಲೈ 1 ರಿಂದ ಗೇಟ್‌ಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗುವುದು ಎನ್ನಲಾಗಿದ್ದು, ಹೀಗಾಗಿ ಸಾಕು ನಾಯಿಗಳ ಮಾಲೀಕರು ಆತಂಕಗೊಂಡಿದ್ದಾರೆ. ಉದ್ಯಾನವನಗಳು ಮತ್ತು ಉದ್ಯಾನಗಳಲ್ಲಿ ಸಾಕುಪ್ರಾಣಿಗಳಿಗೆ ಇರುವ ಮಾರ್ಗಸೂಚಿಗಳನ್ನು ಪದೇ ಪದೇ ಉಲ್ಲಂಘಿಸುವುದರಿಂದ ಸಾಕುಪ್ರಾಣಿಗಳನ್ನು ಪಾರ್ಕ್‌ಗಳಲ್ಲಿ ನಿಷೇಧಿಸಲು ಸರ್ಕಾರ ಪ್ರಸ್ತಾವ ಇಟ್ಟಿದೆ.

ಸಾಕುಪ್ರಾಣಿಗಳ ಮಾರ್ಗಸೂಚಿಗಳನ್ನು ಆಗಾಗ್ಗೆ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಕಬ್ಬನ್ ಪಾರ್ಕ್ ಒಳಗೆ ಸಾಕು ನಾಯಿಗಳನ್ನು ನಿಷೇಧಿಸಲು 5ರಿಂದ ಆರು ತಿಂಗಳಿನಿಂದ 300ಕ್ಕೂ ಹೆಚ್ಚು ದೂರುಗಳನ್ನು ವಾಯುವಿಹಾರಿಗಳು ಮತ್ತು ಜಾಗಿಂಗ್‌ ಮಾಡುವವರಿಂದ ಸ್ವೀಕರಿಸಿದ ಆಧಾರದ ಮೇಲೆ ಪ್ರಸ್ತಾಪಿಸಿದೆ. ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳನ್ನು ಒಳಗೊಂಡು ಉದ್ಯಾನವನಗಳು ಮತ್ತು ಸಾರ್ವಜನಿಕ ಸ್ಥಳಗಳ ಮಾರ್ಗಸೂಚಿಗಳು ಮತ್ತು ನಿಯಮಗಳ ನಿಬಂಧನೆಗಳ ಪ್ರಕಾರ ನಿಷೇಧವನ್ನು ಜಾರಿಗೊಳಿಸಲು ನಿರ್ಧರಿಸಿದ್ದಾರೆ. ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ ಸಾಕುಪ್ರಾಣಿಗಳನ್ನು ಈಗಾಗಲೇ ನಿಷೇಧಿಸಲಾಗಿದೆ. ಜುಲೈ 1 ರಿಂದ ಕಬ್ಬನ್‌ ಪಾರ್ಕ್‌ ಗೇಟ್‌ಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗುವುದು ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ ಔಪಚಾರಿಕ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ನಾಯಿಗಳ ಮೇಲಿನ ನಿಷೇಧದ ಕುರಿತು ಎಲ್ಲಾ ಪ್ರವೇಶ ದ್ವಾರಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಲು ತೋಟಗಾರಿಕೆ ಉಪನಿರ್ದೇಶಕರಿಗೆ (ಕಬ್ಬನ್ ಪಾರ್ಕ್) ಸೂಚಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅದರಂತೆ, ಜುಲೈ 1ರಂದು ಪ್ರಾಣಿಗಳನ್ನು ಒಳಗೆ ಬಿಡಲಾಗುವುದಿಲ್ಲ ಎಂದು ಎಲ್ಲಾ ಭದ್ರತಾ ಸಿಬ್ಬಂದಿ ಸಾಕು ಪೋಷಕರಿಗೆ ಹೇಳುತ್ತಿದ್ದಾರೆ.

 ಸರ್ಕಾರಕ್ಕೆ ಮನವಿ ಮಾಡುವ ಆನ್‌ಲೈನ್ ಆಗ್ರಹ

ಸರ್ಕಾರಕ್ಕೆ ಮನವಿ ಮಾಡುವ ಆನ್‌ಲೈನ್ ಆಗ್ರಹ

ಸರ್ಕಾರದ ದಿಢೀರ್ ನಿರ್ಧಾರ ನೂರಾರು ನಾಯಿಗಳ ಮಾಲೀಕರನ್ನು ಆತಂಕಕ್ಕೆ ದೂಡಿದೆ. ಅವರು ಒಟ್ಟಾಗಿ ಕಬ್ಬನ್ ಪಾರ್ಕ್‌ನಲ್ಲಿ ನಾಯಿಗಳನ್ನು ನಿಷೇಧಿಸದಂತೆ ಸರ್ಕಾರಕ್ಕೆ (ತೋಟಗಾರಿಕೆ ಇಲಾಖೆ) ಮನವಿ ಮಾಡುವ ಆನ್‌ಲೈನ್ ಆಗ್ರಹವನ್ನು ಪ್ರಾರಂಭಿಸಿದ್ದಾರೆ. ಸುವರ್ಣ ಕರ್ನಾಟಕ ಸಮಿತಿ, ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತರು, ಪೊಲೀಸ್ ಕಮಿಷನರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದೆ ಎಂದು ತೋಟಗಾರಿಕಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

 ಜುಲೈ 1 ರಿಂದ ಪೋಸ್ಟರ್ ಮತ್ತು ಬ್ಯಾನರ್‌

ಜುಲೈ 1 ರಿಂದ ಪೋಸ್ಟರ್ ಮತ್ತು ಬ್ಯಾನರ್‌

ಈ ಬಗ್ಗೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್‌ ಮಾತನಾಡಿ, ಕಬ್ಬನ್ ಪಾರ್ಕ್‌ನಲ್ಲಿ ಸಾಕುಪ್ರಾಣಿಗಳು ಮತ್ತು ಸಾಕುಪ್ರಾಣಿಗಳ ಪೋಷಕರಿಂದ ಉಂಟಾಗುವ ಸಮಸ್ಯೆಗಳ ಕುರಿತು ನೂರಾರು ದೂರುಗಳ ಆಧಾರದ ಮೇಲೆ ಸಮಿತಿಯು ಸಾಕುಪ್ರಾಣಿಗಳ ಮೇಲೆ ನಿಷೇಧವನ್ನು ಜಾರಿಗೊಳಿಸಲು ನಿರ್ಧರಿಸಿತು. ಆದರೆ ಮೊದಲು ಜಾಗೃತಿ ಮೂಡಿಸಲು ನಿರ್ಧರಿಸಿತು. ಅದರ ಭಾಗವಾಗಿ, ಉದ್ದೇಶಿತ ನಿಷೇಧದ ಕುರಿತು ಜುಲೈ 1 ರಿಂದ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಹಾಕಲಾಗುವುದು ಮತ್ತು ಪ್ರತಿಕ್ರಿಯೆಯನ್ನು ಆಧರಿಸಿ ಸಮಿತಿಯು ನಂತರ ಔಪಚಾರಿಕ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ವಿವರಿಸಿದರು.

 ಮೂಗುಗವಸು ಹಾಕದೆ ನಾಯಿ ಒಳಕ್ಕೆ

ಮೂಗುಗವಸು ಹಾಕದೆ ನಾಯಿ ಒಳಕ್ಕೆ

ತೋಟಗಾರಿಕೆ ಉಪನಿರ್ದೇಶಕ ಎಚ್.ಟಿ.ಬಾಲಕೃಷ್ಣ ಮಾತನಾಡಿ,"ನಮ್ಮ ಸಿಬ್ಬಂದಿ ಮಾರ್ಗದರ್ಶನ ಮತ್ತು ಅರಿವು ಮೂಡಿಸಿದ್ದರೂ ಹೆಚ್ಚಿನ ಸಾಕು ಪೋಷಕರು ನಿಯಮಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಅನೇಕರು ತಮ್ಮ ನಾಯಿಗಳನ್ನು ಉದ್ಯಾನದ ಪ್ರದೇಶದೊಳಗೆ ಮೂಗುಗವಸು ಹಾಕದೆ ಬಿಡುತ್ತಾರೆ. ಇದು ಜನರಲ್ಲಿ ಭಯವನ್ನು ಉಂಟು ಮಾಡುತ್ತಿದೆ. ಕೆಲವು ಸಾಕು ನಾಯಿಗಳ ಮಾಲೀಕರು ಮಲವನ್ನು ಸ್ಕೂಪ್ ಮಾಡಿ ಅದನ್ನು ತೊಟ್ಟಿಗಳಲ್ಲಿ ಎಸೆಯುವುದಿಲ್ಲ. ನಾವು ಸುಮಾರು 30 ಬೋರ್ಡ್‌ಗಳನ್ನು ಅಳವಡಿಸಿದ್ದೇವೆ. ಮಾಡಬಾರದು ಮತ್ತು ಮಾಡಬಾರದೆಂಬುದನ್ನು ವಿವರಿಸಿದ್ದೇವೆ. ಆದರೆ ಅನೇಕರು ಅವುಗಳನ್ನು ಉಲ್ಲಂಘಿಸುತ್ತಾರೆ," ಎಂದು ಹೇಳಿದರು.

 ಶೇ. 70ಕ್ಕೂ ಹೆಚ್ಚು ವಾಯುವಿಹಾರಿಗಳಿಂದ ಬೆಂಬಲ

ಶೇ. 70ಕ್ಕೂ ಹೆಚ್ಚು ವಾಯುವಿಹಾರಿಗಳಿಂದ ಬೆಂಬಲ

"ಹುಲ್ಲುಹಾಸಿನ ಪ್ರದೇಶದಲ್ಲಿನ ನಾಯಿಗಳ ಮಲಗಳಿಂದ ಪ್ರವಾಸಿಗರಿಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅನೇಕ ದೂರುಗಳಲ್ಲಿ ತಿಳಿಸಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಕೆಲವು ನಾಯಿಯ ಮಲದಲ್ಲಿ ಟೇಪ್ ವರ್ಮ್‌ಗಳಿವೆ ಹಾಗೂ ಅದರ ಮೇಲೆ ಹೆಜ್ಜೆ ಹಾಕುವುದು ಸೋಂಕಿಗೆ ಕಾರಣವಾಗುತ್ತದೆ ಎಂದು ಹೇಳಿದರು. ಶೇ. 70ಕ್ಕೂ ಹೆಚ್ಚು ವಾಯುವಿಹಾರಿಗಳು ನಾಯಿಗಳಿಗೆ ನಿಷೇಧವನ್ನು ಬೆಂಬಲಿಸಿದ್ದಾರೆ ಮತ್ತು ಸಮಿತಿಗೆ ದೂರುಗಳನ್ನು ಸಲ್ಲಿಸಿದ್ದಾರೆ. ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಸಾಕು ನಾಯಿಗಳ ಮಾಲೀಕರಿಗೆ ದಂಡವನ್ನು ಹಾಕುವ ನಿಯಮ ನಮ್ಮಲ್ಲಿ ಜಾರಿ ಇಲ್ಲ. ಅವರನ್ನು ಶಿಕ್ಷಿಸುವ ಅಧಿಕಾರ ಇಲ್ಲ," ಎಂದು ಬಾಲಕೃಷ್ಣ ವಿವರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+