ವಾಹನಗಳ ಮಾಲೀಕರೇ ಗಮನಿಸಿ, ಮಾಲಿನ್ಯ ತಪಾಸಣೆಗೆ ಕೂಡ ಎದುರಾಯ್ತು ಸಮಸ್ಯೆ... Emission Testing
ವಾಹನಗಳ ಮಾಲೀಕರಿಗೆ ಒಂದಲ್ಲ ಒಂದು ಹೊಸ ಹೊಸ ಟೆನ್ಷನ್ ಇದ್ದೇ ಇರುತ್ತೆ, ಅದ್ರಲ್ಲೂ ಯಾವುದೇ ಒಂದೇ ಒಂದು ಡಾಕ್ಯುಮೆಂಟ್ ಮಿಸ್ ಮಾಡಿಕೊಂಡು ರಸ್ತೆಗೆ ಇಳಿದರು ಸಾಕು ಟೆನ್ಷನ್ ಮೇಲೆ ಟೆನ್ಷನ್ ಗ್ಯಾರಂಟಿ. ಹೀಗಿದ್ದಾಗ ವಾಯುಮಾಲಿನ್ಯ ತಪಾಸಣೆ ಕೂಡ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು, ಇದಕ್ಕಾಗಿ ವಾಹನಗಳ ಮಾಲೀಕರು ಪರದಾಡಿದ್ದೂ ಉಂಟು. ಪೊಲೀಸರ ಕೈಗೆ ಸಿಕ್ಕರೆ ಅದಕ್ಕೂ ದಂಡ ಕಟ್ಟುವ ಭಯ ಕಾಡುತ್ತಿತ್ತು ವಾಹನಗಳ ಮಾಲೀಕರಿಗೆ. ಆದರೆ ಇದೀಗ ಸ್ವತಃ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಲ್ಲೇ ದೊಡ್ಡ ಸಮಸ್ಯೆ ಎದುರಾಗಿಬಿಟ್ಟಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಹಾಗೂ ಇಡೀ ದೇಶದಲ್ಲೇ ವಾಹನಗಳ ಸಂಖ್ಯೆ ಭಾರಿ ಏರಿಕೆ ಕಾಣುತ್ತಿರುವ ಹಿನ್ನೆಲೆ, ವಾಹನಗಳ ಮಾಲೀಕರಿಗೆ ಹಲವು ಹೊಸ ಹೊಸ ನಿಯಮ ಹೇರಿಕೆ ಮಾಡಿ ಮಾಲಿನ್ಯಕ್ಕೆ ಲಗಾಮು ಹಾಕಲಾಗುತ್ತಿದೆ. ಅದರಲ್ಲೂ ವಾಹನಗಳ ಮಾಲಿನ್ಯ ತಪಾಸಣೆ ಕಡ್ಡಾಯವಾದ ನಂತರ ಸಾಕಷ್ಟು ಚರ್ಚೆ ಕೂಡ ಆಗಿತ್ತು. ವಾಹನಗಳ ನೋಂದಣಿ ಪ್ರಮಾಣಪತ್ರ ಎಂದರೆ ಆರ್ಸಿ & ಚಾಲನಾ ಪರವಾನಗಿ ಅರ್ಥಾತ್ ಡಿಎಲ್ ಸೇರಿದಂತೆ ಎಸ್ಎಸ್ಆರ್ಪಿ ನಕಲು ತಡೆಗೆ ಇದರ ಜೊತೆಗೆ ಭದ್ರತೆ ಹೆಚ್ಚಿಸಲು ಹಾಲೊಗ್ರಾಂ ಸ್ಟಿಕ್ಕರ್ ಬಳಕೆ ಮಾಡಲಾಗುತ್ತಿದೆ. ವಾಹನಗಳ ಮಾಲಿನ್ಯ ತಪಾಸಣೆಗೆ ಹಾಲೊಗ್ರಾಂ ಸ್ಟಿಕ್ಕರ್ ಕಡ್ಡಾಯವಾಗಿತ್ತು, ಆದರೆ ಇದೀಗ ಹಾಲೊಗ್ರಾಂ ಸ್ಟಿಕ್ಕರ್ ಕೊರತೆ ದೊಡ್ಡ ಸವಾಲು ತಂದೊಡ್ಡಿದೆ.

2 ತಿಂಗಳಿಂದ ಪೂರೈಕೆ ಆಗಿಲ್ಲ
ಹಾಲೊಗ್ರಾಂ ಸ್ಟಿಕ್ಕರ್ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ಬಳಕೆ ಮಾಡಲಾಗುತ್ತದೆ, ಅಷ್ಟಕ್ಕೂ ವಾಹನಗಳ ಮಾಲಿನ್ಯ ತಪಾಸಣೆ ನಂತರ ಪ್ರಮಾಣಪತ್ರಕ್ಕೆ ಅಂಟಿಸಲು ಹಾಲೊಗ್ರಾಂ ಸ್ಟಿಕ್ಕರ್ ಯ್ಯುಸ್ ಆಗುತ್ತದೆ. ಇದು ನಕಲು ತಡೆಗೆ ಹಾಗೂ ಭದ್ರತೆ ಹೆಚ್ಚಿಸಲು ಪೂರಕವಾಗಿತ್ತು. ಆದರೆ ಇದೀಗ ನಾನಾ ಕಾರಣದಿಂದ ಹಾಲೊಗ್ರಾಂ ಸ್ಟಿಕ್ಕರ್ ಪೂರಕೆಯಲ್ಲಿ ಏರುಪೇರಾಗಿದೆ. ಹೀಗಾಗಿ ಸಾರಿಗೆ ಇಲಾಖೆಯಿಂದ ಪೂರೈಕೆ ಆಗಬೇಕಿದ್ದ ಹಾಲೊಗ್ರಾಂ ಸ್ಟಿಕ್ಕರ್ ಕಳೆದ 2 ತಿಂಗಳಿಂದ ಪೂರೈಕೆ ಆಗಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ವಾಹನಗಳ ಮಾಲಿನ್ಯ ತಪಾಸಣೆ ಕೂಡ ಏರುಪೇರಾಗುತ್ತಿದೆ.
ತಪಾಸಣಾ ಕೇಂದ್ರಗಳ ಮಾಲೀಕರ ಒದ್ದಾಟ
ಅಂದಹಾಗೆ ಈ ಹಾಲೊಗ್ರಾಂ ಸ್ಟಿಕ್ಕರ್ ಬಳಕೆ, ನಕಲು ಮಾಡಲು ಸಾಧ್ಯವಿಲ್ಲದ ಲೇಸರ್-ಕಟ್ ಭದ್ರತಾ ವೈಶಿಷ್ಟ್ಯ ಹೊಂದಿದೆ. ಇದರಿಂದಾಗಿ ದಾಖಲೆ ದೃಢೀಕರಣ ಕೂಡ ಸುಲಭವಾಗುತ್ತದೆ. ತಪಾಸಣಾ ಕೇಂದ್ರ ಮಾಲೀಕರು ಸಾರಿಗೆ ಇಲಾಖೆಗೆ ಹಣ ಪಾವತಿ ಮಾಡಿ ಹಾಲೊಗ್ರಾಂ ಪಡೆದು ಪ್ರಮಾಣಪತ್ರ ನೀಡುವ ವ್ಯವಸ್ಥೆ ಜಾರಿಯಲ್ಲಿ ಇತ್ತು. ಆದರೆ ಎರಡು ತಿಂಗಳಿನಿಂದ ಹಾಲೊಗ್ರಾಂ ಪೂರೈಕೆ ಆಗುತ್ತಿಲ್ಲ ಎಂದು ಇದೀಗ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳ ಮಾಲೀಕರ ಹೇಳುತ್ತಿದ್ದಾರೆ. ಆದಷ್ಟು ಬೇಗನೇ ಈ ಸಮಸ್ಯೆ ಬಗೆಹಿಯಲಿ ಎಂದು ಮನವಿ ಮಾಡುತ್ತಿದ್ದಾರೆ.
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ












Click it and Unblock the Notifications